ಆ್ಯಪ್ನಗರ

ಮಿತ್ರ ಮಂಡಳಿ ಹಳೇ ಕಥೆ, ಇವಾಗ ನಾವು ಬಿಜೆಪಿಗರು ಎಂದ ರಮೇಶ್ ಜಾರಕಿಹೊಳಿ

ಮಿತ್ರ ಮಂಡಳಿ ಎಲ್ಲ ಹಳೇ ಕಥೆ, ಇವಾಗ ನಾವೇನಿದ್ದರೂ ಬಿಜೆಪಿಗರು. ಹೀಗಂತ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಖಾತೆ ಬದಲಾವಣೆಯಿಂದ ಅಸಮಧಾನಗೊಂಡಿರುವ ಸುಧಾಕರ್‌ ಜೊತೆಗೆ ಮಾತನಾಡುತ್ತೇನೆ ಎಂದರು.

Vijaya Karnataka Web 22 Jan 2021, 3:55 pm
ಬೆಂಗಳೂರು: ಮಿತ್ರ ಮಂಡಳಿ ಎಲ್ಲಾ ಹಳೇ ಕಥೆ, ಇವಾಗ ನಾವೆಲ್ಲಾ ಬಿಜೆಪಿಗರು ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಖಾತೆ ಹಂಚಿಕೆ ಗೊಂದಲವನ್ನು ಸಿಎಂ ಸರಿ ಪಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web Ramesh jarakiholi


ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿರುವ ಕೆ. ಸುಧಾಕರ್ ಮತ್ತು ಸಚಿವ ಸ್ಥಾನ ಸಿಗದಿರುವುದಕ್ಕಾಗಿ ಬೇಸರಗೊಂಡಿರುವ ಮುನಿರತ್ನ ಜೊತೆಗೆ ನಾನು ಮಾತಡಬೇಕಾಗಿತ್ತು. ಶುಕ್ರವಾರ ಸಂಜೆ ಬಂದು ಮಾತನಾಡುತ್ತೇನೆ. ಖಾತೆ ಹಂಚಿಕೆ ಸಿಎಂ ಅವರ ಪರಮಾಧಿಕಾರ, ಅವರು ಎಲ್ಲಾ ಗೊಂದಲವನ್ನು ಸರಿ ಪಡಿಸುತ್ತಾರೆ ಎಂದರು.

ಬಂಡಾಯ ಸಚಿವರ ಒತ್ತಡಕ್ಕೆ ಮಣಿದ ಬಿಎಸ್‌ವೈ, ಖಾತೆ ಹಂಚಿಕೆಯಲ್ಲಿ ಮತ್ತೆ ಬದಲಾವಣೆ!

ಮಿತ್ರ ಮಂಡಳಿ ಎಲ್ಲಾ ಹಳೆ ಕಥೆ, ನಾವೆಲ್ಲರು ಒಟ್ಟಿಗೆ ಇದ್ದೇವೆ ಎಂದ ಅವರು, ಖಾತೆ ಗೊಂದಲ ವಿಚಾರವಾಗಿ ಇಲ್ಲಿ ತನಕ ನಾನು ಸಿಎಂ ಜೊತೆಗೆ ಮಾತನಾಡಿಲ್ಲ, ಅಗತ್ಯ ಬಿದ್ದರೆ ಮಾತನಾಡುತ್ತೇನೆ ಎಂದು ತಿಳಿಸಿದರು. ಖಾತೆ ಬದಲಾವಣೆಯಿಂದ ಸಚಿವರು ಅಸಮಾಧಾನಗೊಂಡ ಹಿನ್ನೆಲೆಯಲ್ಲಿ ಇದೀಗ ಮತ್ತೆ ಖಾತೆಯನ್ನು ಬದಲಾವಣೆ ಮಾಡಲಾಗಿದೆ. ಆದರೆ ಸುಧಾಕರ್‌ ಅವರ ಬೇಡಿಕೆಗೆ ಸಿಎಂ ಬಿಎಸ್ ಯಡಿಯೂರಪ್ಪ ಮಣೆ ಹಾಕಲಿಲ್ಲ.

ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ನನಗೇ ಕೊಡಬೇಕು ಎಂದು ಸುಧಾಕರ್‌ ಪಟ್ಟು ಹಿಡಿದಿದ್ದಾರೆ. ಆದರೆ ಖಾತೆ ಮತ್ತೆ ಬದಲಾವಣೆ ಮಾಡಿರುವ ಸಂದರ್ಭದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಜೆ.ಸಿ ಮಾಧುಸ್ವಾಮಿಗೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ