ಆ್ಯಪ್ನಗರ

ನನ್ನ ಸ್ಥಿತಿ ನಿಮಗೆ ಬಾರದಿರಲಿ: ಕಾಗೇರಿಗೆ ರಮೇಶ್‌ ಕುಮಾರ್‌ ಕಿವಿಮಾತು

ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಗದ್ದಲದ ಮಧ್ಯೆ ಮಾತನಾಡಿದ ರಮೇಶ್‌ ಕುಮಾರ್‌, "ಅನುದಾನ ಸಿಕ್ಕಿಲ್ಲ ಎಂದು ಕ್ಷೇತ್ರದ ಕೆಲಸವನ್ನು ಮಾಡದೇ ಇರಲು ಆಗುತ್ತದೆಯೇ? ನನ್ನ ಸ್ಥಿತಿ ನಿಮಗೆ ಬಾರದೇ ಇರಲಿ ಎಂದು ಹೇಳುತ್ತಿದ್ದೇನೆ. ಹೀಗಾಗಿ ಕ್ಷೇತ್ರದ ಅನುದಾನ ವಿಚಾರದಲ್ಲಿ ನಾವು ಮಾತನಾಡಲೇಬೇಕಾಗುತ್ತದೆ," ಎಂದರು.

Vijaya Karnataka 20 Feb 2020, 9:13 pm

ಬೆಂಗಳೂರು: 'ಆ ಸ್ಥಾನದಲ್ಲಿ ಕುಳಿತ ಕಾರಣಕ್ಕೆ ಕ್ಷೇತ್ರಕ್ಕೆ ಸಂಬಂಧಪಟ್ಟ ಅನೇಕ ಸೌಲಭ್ಯಗಳನ್ನು ಕಳೆದುಕೊಂಡೆ. ಸಣ್ಣ ಸಣ್ಣ ವಿಚಾರಕ್ಕೂ ಅಂಗಲಾಚಬೇಕಾಯಿತು. ನನ್ನ ಸ್ಥಿತಿ ನಿಮಗೆ ಬಾರದಿರಲಿ' ಎಂದು ಮಾಜಿ ಸ್ಪೀಕರ್‌ ಕೆಆರ್‌ ರಮೇಶ್‌ ಕುಮಾರ್‌ ಹಾಲಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಕಿವಿ ಮಾತು ಹೇಳಿದ್ದಾರೆ.
Vijaya Karnataka Web Ramesh Kumar Kageri


ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಗದ್ದಲದ ಮಧ್ಯೆ ಮಾತನಾಡಿ, "ಅನುದಾನ ಸಿಕ್ಕಿಲ್ಲ ಎಂದು ಕ್ಷೇತ್ರದ ಕೆಲಸವನ್ನು ಮಾಡದೇ ಇರಲು ಆಗುತ್ತದೆಯೇ? ನನ್ನ ಸ್ಥಿತಿ ನಿಮಗೆ ಬಾರದೇ ಇರಲಿ ಎಂದು ಹೇಳುತ್ತಿದ್ದೇನೆ. ಹೀಗಾಗಿ ಕ್ಷೇತ್ರದ ಅನುದಾನ ವಿಚಾರದಲ್ಲಿ ನಾವು ಮಾತನಾಡಲೇಬೇಕಾಗುತ್ತದೆ," ಎಂದರು.

'ಸಿಮಿ' ರೂಪಾಂತರ ಸಂಘಟನೆಗಳಿಗೆ ಬೆಂಬಲ ಸಲ್ಲದು, ಪ್ರತಿಪಕ್ಷಗಳಿಗೆ ಗೃಹ ಸಚಿವ ಬೊಮ್ಮಾಯಿ ತಾಕೀತು

ಸರಕಾರ ಒಳಗಿರುವ ಕೆಲವರಿಗೆ ಮಾತ್ರ ಅನುದಾನ ಸೀಮಿತವಾಬಾರದು ಎಂಬ ರಮೇಶ್‌ ಕುಮಾರ್‌ ಮಾತು ಸಿಎಂ ಯಡಿಯೂರಪ್ಪ ಅವರನ್ನು ಕೆರಳಿಸಿತು. ಏನು ನಿಮ್ಮ ಮಾತಿನ ಅರ್ಥ? (ವಾಟ್‌ ಡು ಯು ಮೀನ್‌ ?) ಎಂದು ಪ್ರಶ್ನಿಸಿದಾಗ ರಮೇಶ್‌ಕುಮಾರ್‌, "ಕುಟುಂಬ ರಾಜಕಾರಣ ಎಂದು ಸ್ಪಷ್ಟನೆ ನೀಡಿ, ಇದನ್ನು ನಿಮ್ಮನ್ನು ಉದ್ದೇಶಿಸಿ ಹೇಳಿದ್ದಲ್ಲ," ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ