ಆ್ಯಪ್ನಗರ

ಅತ್ಯಾಚಾರ: ತೆಲಂಗಾಣ ಜಡ್ಜ್‌ ಬಂಧನ

ವಕೀಲೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ತೆಲಂಗಾಣದ ಸೂರ್ಯಪೇಟ್‌ ಜಿಲ್ಲಾ ಸಿವಿಲ್‌ ಕೋರ್ಟ್‌ನ ಕಿರಿಯ ನ್ಯಾಯಾಧೀಶರೊಬ್ಬರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

Vijaya Karnataka 17 Aug 2018, 9:34 am
ಹೈದರಾಬಾದ್‌: ವಕೀಲೆ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ತೆಲಂಗಾಣದ ಸೂರ್ಯಪೇಟ್‌ ಜಿಲ್ಲಾ ಸಿವಿಲ್‌ ಕೋರ್ಟ್‌ನ ಕಿರಿಯ ನ್ಯಾಯಾಧೀಶರೊಬ್ಬರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
Vijaya Karnataka Web arrest


ನ್ಯಾಯಾಧೀಶ ಸತ್ಯನಾರಾಯಣ ಬಂಧಿತ ಆರೋಪಿ.''ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ ಬಳಿಕ ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ,'' ಎಂದು ಸಂತ್ರಸ್ತ ವಕೀಲೆ ದೂರು ನೀಡಿ 11 ದಿನಗಳ ತರುವಾಯ ಪೊಲೀಸರು ಸತ್ಯನಾರಾಯಣ ಅವರನ್ನು ಬಂಧಿಸಿ, ಬಳಿಕ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಐಪಿಸಿಯ ಹಲವು ಸೆಕ್ಷನ್‌ಗಳಡಿ ಜಜ್‌ ವಿರುದ್ಧ ವಂಚನೆ, ಅತ್ಯಾಚಾರ ಆರೋಪ ದೂರು ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ