ಆ್ಯಪ್ನಗರ

ದಿನೇಶ್‌ ನೆಟ್ಟಗಿದ್ದರೆ ಸರಕಾರ ಪತನವಾಗುತ್ತಿರಲಿಲ್ಲ: ಬಿ.ಸಿ. ಪಾಟೀಲ್‌ ವಾಗ್ದಾಳಿ

''ಕಾಂಗ್ರೆಸ್‌ ಪಕ್ಷದಿಂದ ನಾನು ಹೊರ ಬಂದಿದ್ದೇನೆ. ಈಗ ಆ ವಿಚಾರ ಮಾತನಾಡುವುದು ಸರಿಯಲ್ಲ. ಆದರೆ ನಮ್ಮ ಸ್ನೇಹಿತ ಎಸ್‌.ಟಿ. ಸೋಮಶೇಖರ್‌ ದಿನೇಶ್‌ ಕುರಿತು ನೀಡಿರುವ ಹೇಳಿಕೆ ಸರಿಯಾಗಿದೆ. ಅಧ್ಯಕ್ಷರು ಸರಿಯಾಗಿದ್ದರೆ ನಾವು ಪಕ್ಷ ತ್ಯಜಿಸುವ ಪರಿಸ್ಥಿತಿಯೇ ಬರುತ್ತಿರಲಿಲ್ಲ,'' - ಬಿ.ಸಿ. ಪಾಟೀಲ್‌

Vijaya Karnataka Web 30 Sep 2019, 8:32 pm

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೆಟ್ಟಗೆ ಇದ್ದಿದ್ದರೆ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಪತನಗೊಳ್ಳುತ್ತಿರಲಿಲ್ಲ ಎಂದು ಅನರ್ಹ ಶಾಸಕ ಬಿಸಿ ಪಾಟೀಲ್‌ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web Disqualified MLA BC Patil


ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು,''ಕಾಂಗ್ರೆಸ್‌ ಪಕ್ಷದಿಂದ ನಾನು ಹೊರ ಬಂದಿದ್ದೇನೆ. ಈಗ ಆ ವಿಚಾರ ಮಾತನಾಡುವುದು ಸರಿಯಲ್ಲ. ಆದರೆ ನಮ್ಮ ಸ್ನೇಹಿತ ಎಸ್‌.ಟಿ. ಸೋಮಶೇಖರ್‌ ದಿನೇಶ್‌ ಕುರಿತು ನೀಡಿರುವ ಹೇಳಿಕೆ ಸರಿಯಾಗಿದೆ. ಅಧ್ಯಕ್ಷರು ಸರಿಯಾಗಿದ್ದರೆ ನಾವು ಪಕ್ಷ ತ್ಯಜಿಸುವ ಪರಿಸ್ಥಿತಿಯೇ ಬರುತ್ತಿರಲಿಲ್ಲ,'' ಎಂದು ಹೇಳಿದರು.

ನೀತಿ ಸಂಹಿತೆ ಜಾರಿಗೆ ಆಗ್ರಹಿಸಿ ಚುನಾವಣಾ ಆಯುಕ್ತರಿಗೆ ಗುಂಡೂರಾವ್‌ ಖಡಕ್‌ ಪತ್ರ

''ದಿನೇಶ್‌ ಬರುವ ಮುನ್ನ 9 ಸಂಸದರಿದ್ದರು, ಈಗ ಒಬ್ಬರು ಸಂಸದರಿದ್ದಾರೆ. ಅಧ್ಯಕ್ಷರಾದವರು ಒಂದೇ ಕಡೆ ವಾಲಬಾರದು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡಬಾರದು,'' ಎಂದು ಎಚ್ಚರಿಸಿದರು.

''ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪರ ತೀರ್ಪು ಹೊರಬೀಳುವ ವಿಶ್ವಾಸದಲ್ಲಿದ್ದು ಆ ನಂತರ ಬಿಜೆಪಿ ಸೇರುವ ಬಗ್ಗೆ ನಾವೆಲ್ಲಾಒಟ್ಟಿಗೆ ಕುಳಿತು ಚರ್ಚಿಸುತ್ತೇವೆ. ಬಿಜೆಪಿ ಸೇರುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಯು.ಬಿ.ಬಣಕಾರ್‌ ಸ್ಪರ್ಧೆ ಮಾಡುವ ಪರಿಸ್ಥಿತಿ ಈ ಸಲ ಉದ್ಭವಿಸಲ್ಲ. ಎಲ್ಲವೂ ಸರಿ ಹೋಗಲಿದೆ,'' ಎಂದು ಬಿ.ಸಿ. ಪಾಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ