ಆ್ಯಪ್ನಗರ

ಒಂದೇ ಮನೆಯಲ್ಲಿ ಎಂಎಲ್‌ಸಿ, ಎಂಪಿ, ನಿಗಮ ಮಂಡಳಿ ಹುದ್ದೆ ಕೊಡಬಾರದು ಅನ್ನೋದು ನನ್ನ ಕಳಕಳಿ; ಯತ್ನಾಳ್

ಮುಂದಿನ ದಿನಗಳಲ್ಲಿ ವಂಶ ಪಾರಂಪರ್ಯವಾಗಿ ಹುದ್ದೆ ಕೊಡಬಾರದು. ಒಂದೇ ಮನೆಯಲ್ಲಿ ಎಂಎಲ್‌ ಎ, ಎಂಎಲ್‌ಸಿ, ಎಂಪಿ, ನಿಗಮ ಮಂಡಳಿ ಹುದ್ದೆಗಳನ್ನು ಕೊಡಬಾರದು. ಪ್ರಧಾನ ಮಂತ್ರಿಗಳ ಆಶಯವನ್ನು ಸಾಕಾರಗೊಳಿಸಬೇಕು ಅನ್ನೋದು ನನ್ನ ಕಳಕಳಿ ಅಷ್ಟೇ ಎಂದು ಅತೃಪ್ತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Vijaya Karnataka Web 21 Jan 2021, 8:50 am
ಬೆಂಗಳೂರು: ವಂಶಕ್ಕೆ ಒಂದೇ ಹುದ್ದೆ ಎಂಬ ಪ್ರಧಾನ ಮಂತ್ರಿಗಳ ಆಶಯ, ಪಕ್ಷದ ಧ್ಯೇಯವನ್ನು ಕಟ್ಟಿನಿಟ್ಟಾಗಿ ಜಾರಿಗೊಳಿಸಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಮನವಿ ಮಾಡುತ್ತೇನೆ ಎಂದು ಅತೃಪ್ತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.
Vijaya Karnataka Web basana gowda pateel yatnal


ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ವಂಶ ಪಾರಂಪರ್ಯವಾಗಿ ಹುದ್ದೆ ಕೊಡಬಾರದು. ಒಂದೇ ಮನೆಯಲ್ಲಿ ಎಂಎಲ್‌ ಎ, ಎಂಎಲ್‌ಸಿ, ಎಂಪಿ, ನಿಗಮ ಮಂಡಳಿ ಹುದ್ದೆಗಳನ್ನು ಕೊಡಬಾರದು. ಪ್ರಧಾನ ಮಂತ್ರಿಗಳ ಆಶಯವನ್ನು ಸಾಕಾರಗೊಳಿಸಬೇಕು ಅನ್ನೋದು ನನ್ನ ಕಳಕಳಿ ಅಷ್ಟೇ ಎಂದು ಹೇಳಿದರು.
‘ಜೆಡಿಎಸ್ ಬಿಟ್ರೆ ವಿಧಾನಪರಿಷತ್‌ ಸಭಾಪತಿ ಸ್ಥಾನ ಪಡೆಯಲು ಬಿಜೆಪಿಗೆ ಸಾಧ್ಯವಿಲ್ಲ’; ಹೊರಟ್ಟಿ
ಸಂಪುಟ ವಿಸ್ತರಣೆ ಬಳಿಕ ಕೆಲವರಲ್ಲಿ ಅಸಮಾಧಾನ ವಿಚಾರ ಕೇಳಿದ್ದೇನೆ. ಯಾರನ್ನು ಯಾರು ಸಮಾಧಾನ ಮಾಡಿದ್ದಾರೆ ಗೊತ್ತಿಲ್ಲ. ನನ್ನ ನಿಷ್ಠುರ ವಿಚಾರಗಳನ್ನು ಎಲ್ಲಿ ಯಾರ ಜತೆ ಮಾತಾಡಬೇಕು, ಯಾವಾಗ ಏನು ಮಾತಾಡ್ಬೇಕು ಅನ್ನೋದು ಗೊತ್ತಿದೆ. ಅದನ್ನು ಮಾತಾಡ್ತೇನೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ