ಆ್ಯಪ್ನಗರ

ರೆಬೆಲ್‌ಗಳು ಇಂದು ವಾಪಸ್‌

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಳೆದ 18 ದಿನಗಳಿಂದ ಮುಂಬಯಿ ಸೇರಿಕೊಂಡಿದ್ದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ 12 ಮಂದಿ ಶಾಸಕರು ಬಹುತೇಕ ಬುಧವಾರ ವಾಪಸ್‌ ಆಗುವ ಸಾಧ್ಯತೆಗಳಿವೆ.

Vijaya Karnataka 24 Jul 2019, 5:00 am
ಬೆಂಗಳೂರು : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಕಳೆದ 18 ದಿನಗಳಿಂದ ಮುಂಬಯಿ ಸೇರಿಕೊಂಡಿದ್ದ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ 12 ಮಂದಿ ಶಾಸಕರು ಬಹುತೇಕ ಬುಧವಾರ ವಾಪಸ್‌ ಆಗುವ ಸಾಧ್ಯತೆಗಳಿವೆ.
Vijaya Karnataka Web rebels return today
ರೆಬೆಲ್‌ಗಳು ಇಂದು ವಾಪಸ್‌


ಜುಲೈ 6 ರಂದು ರಾಜೀನಾಮೆ ನೀಡಿದ ದಿನವೇ ಮುಂಬಯಿ ಸೇರಿಕೊಂಡಿದ್ದ ಅತೃಪ್ತ ಶಾಸಕರು ಎಚ್‌.ಡಿ.ಕುಮಾರಸ್ವಾಮಿ ಸರಕಾರ ಪತನಗೊಂಡು ಅವರು ರಾಜೀನಾಮೆ ಸಲ್ಲಿಸುವ ತನಕ ವಾಪಸ್‌ ಬರುವುದಿಲ್ಲವೆಂದು ಪಟ್ಟು ಹಿಡಿದಿದ್ದರು. ಅದರಂತೆ ಇಷ್ಟು ದಿನಗಳ ಕಾಲ ಮುಂಬಯಿ, ಪುಣೆ ಮತ್ತಿತರ ಕಡೆ ವಾಸ್ತವ್ಯ ಹೂಡಿದ್ದ ಅವರು ಬುಧವಾರ ವಾಪಸ್‌ ಬರಲಿದ್ದಾರೆ. ಸ್ವತಃ ಎಚ್‌.ವಿಶ್ವನಾಥ್‌ ಅವರು ಬೆಂಗಳೂರಿಗೆ ವಾಪಸಾಗುವುದನ್ನು ದೃಢಪಡಿಸಿದ್ದಾರೆ. ಈ ಮಧ್ಯೆ ಮತ್ತೊಂದು ಮೂಲದ ಪ್ರಕಾರ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ತನಕ ವಾಪಸ್‌ ಬರುವುದಿಲ್ಲವೆನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ