ಆ್ಯಪ್ನಗರ

ಗಾಂಧೀಜಿಗೆ ಇಲ್ಲಿ ನಿತ್ಯ ಪೂಜೆ

ತುರುವನೂರು ಗ್ರಾಮದಲ್ಲಿ ಮಹಾತ್ಮ ಗಾಂಧೀಜಿಗೆ ನಿತ್ಯ ಪೂಜೆ ಮಾಡಲಾಗುತ್ತದೆ.

Vijaya Karnataka 2 Oct 2018, 9:57 am
ಸ್ವಾತಂತ್ರ್ಯ ಚಳವಳಿಯ ತವರೂರು ಎಂದೆ ಪ್ರಸಿದ್ಧಿಯಾಗಿರುವ ಚಿತ್ರದುರ್ಗ ಜಿಲ್ಲೆ ತುರುವನೂರು ಗ್ರಾಮದಲ್ಲಿ ಮಹಾತ್ಮ ಗಾಂಧೀಜಿಗೆ ನಿತ್ಯ ಪೂಜೆ.
Vijaya Karnataka Web Mahatma


ಗ್ರಾಮದ ಶ್ರೀನಿವಾಸ್‌ ಜೋಯಿಸರು ಎಸ್‌.ನಿಜಲಿಂಗಪ್ಪನವರ ಜತೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಇಡೀ ಕುಟುಂಬಕ್ಕೆ ಗಾಂಧೀಜಿಯವರ ಬಗ್ಗೆ ಅಪಾರವಾದ ಅಭಿಮಾನವಿದೆ. 1968ರಲ್ಲಿ ಪುತ್ಥಳಿ ನಿರ್ಮಾಣದ ಬಳಿಕ ಜೋಯಿಸರ ಮನೆಯವರು ಗಾಂಧೀಜಿ ಪುತ್ಥಳಿಗೆ ನಿತ್ಯ ಪೂಜೆ ಸಲ್ಲಿಸುತ್ತಾರೆ. ಜೋಯಿಸರ ಪುತ್ರಿ ಲಲಿತಮ್ಮ ಅವರು ಇಂದಿಗೂ ಪೂಜೆಯನ್ನು ಮುಂದುವರೆಸಿದ್ದಾರೆ. ಈ ಕುಟುಂಬದ ಗೌರವ-ಅಭಿಮಾನ ಕಂಡ, ಗ್ರಾಮದ ಜನತೆ ಕೂಡ ಗಾಂಧೀಜಿ ಪುತ್ಥಳಿಯನ್ನು ಆರಾಧ್ಯ ದೈವವನ್ನಾಗಿಯೇ ಸ್ವೀಕರಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ, ಗಣ ರಾಜ್ಯೋತ್ಸವ ಹಾಗೂ ಗಾಂಧಿ ಜಯಂತಿಯಂದು ಗ್ರಾಮದ ಜನರೆಲ್ಲಾ ಒಟ್ಟಾಗಿ ಗಾಂಧಿಗೆ ನಮನ ಸಲ್ಲಿಸುತ್ತಾರೆ.

ಸ್ವಾತಂತ್ರ್ಯ ಚಳವಳಿಯ ನೆನಪಿಗಾಗಿ 1960ರ ದಶಕದಲ್ಲಿ ಗಾಂಧೀಜಿಯ ಕಂಚಿನ ಪುತ್ಥಳಿಯನ್ನು ಸ್ಥಾಪಿಸಲು ಊರಿನವರು ನಿರ್ಧರಿಸಿದರು. ಇದಕ್ಕೆ ಸ್ಪಂದಿಸಿದ ಬಳ್ಳಾರಿಯ ಮಲ್ಲಕ್ಕ ಅವರು ಪುತ್ಥಳಿಗೆ ತಗಲುವ ವೆಚ್ಚ ಭರಿಸಿದರು. ಇದರ ಜತೆಗೆ ಸ್ಥಳೀಯರು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಕೈಜೋಡಿಸಿದರು. ಅಂದಿನ ಮುಖ್ಯಮಂತ್ರಿಗಳು ಹಾಗೂ ಅಖಿಲ ಭಾರತ ಕಾಂಗ್ರೆಸ್‌ ಅಧ್ಯಕ್ಷ ರಾಗಿದ್ದ ಎಸ್‌.ನಿಜಲಿಂಗಪ್ಪನವರು 01.02.1968ರಂದು ಪುತ್ಥಳಿಯನ್ನು ಅನಾವರಣಗೊಳಿಸಿದರು.

ಮಾಹಿತಿ: ಕೆ.ಎಂ. ಶಿವಸ್ವಾಮಿ ನಾಯಕನಹಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ