ಆ್ಯಪ್ನಗರ

ಸಂಪುಟ ಸರ್ಕಸ್ ಬಳಿಕ ಉಸ್ತುವಾರಿ ತಲೆನೋವು; ರಿಪಬ್ಲಿಕ್‌ ಡೇ ಧ್ವಜಧಾರಿಗಳೇ ಜಿಲ್ಲಾ ಉಸ್ತುವಾರಿಗಳಾಗ್ತಾರಾ?

ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಳಿಕ ಜಿಲ್ಲಾ ಉಸ್ತುವಾರಿ ತಲೆನೋವು ಶುರುವಾಗಿದ್ದು, ಹೊಸ ಸಚಿವರಲ್ಲಿ ಯಾರಿಗೆ ಯಾವ ಜಿಲ್ಲೆ ಎಂಬುದು ಸಸ್ಪೆನ್ಸ್‌ ಆಗಿ ಉಳಿದಿದೆ. ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಪಟ್ಟಿಯಲ್ಲಿ ಸಣ್ಣ ಮುನ್ಸೂಚನೆ ನೀಡಲಾಗಿದೆ ಎಂಬ ಚರ್ಚೆ ನಡೆಯುತ್ತಿದ್ದು, ಅದೇ ಪಟ್ಟಿ ಬಹುತೇಕ ಫಿಕ್ಸ್‌ ಎನ್ನಲಾಗುತ್ತಿದೆ.

Vijaya Karnataka Web 24 Jan 2021, 11:03 pm
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಮತ್ತು ಅದರ ಬಳಿಕ ಹುಟ್ಟಿಕೊಂಡ ಸಣ್ಣಪುಟ್ಟ ಅಸಮಾಧಾನಗಳೆಲ್ಲಾ ನಿವಾರಣೆಗೊಂಡಿದೆ. ಈಗ ಹೊಸ ಸಚಿವರ ಕಣ್ಣು ಉಸ್ತುವಾರಿ ಪಟ್ಟದತ್ತ ನೆಟ್ಟಿದೆ.
Vijaya Karnataka Web ministers


ಹೊಸ ಸಚಿವರಲ್ಲಿ ಯಾರಿಗೆ ಯಾವ ಜಿಲ್ಲೆ ಎಂಬ ನಿಟ್ಟಿನಲ್ಲಿ ಗಣರಾಜ್ಯೋತ್ಸವದ ಧ್ವಜಾರೋಹಣ ಪಟ್ಟಿಯಲ್ಲಿ ಸಣ್ಣ ಮುನ್ಸೂಚನೆ ನೀಡಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಇದುವೇ ಅಂತಿಮವೇ ಎಂಬುದು ಸ್ಪಷ್ಟವಾಗಿಲ್ಲ.

ಹೊಸದಾಗಿ ಮಂತ್ರಿಯಾದವರಲ್ಲಿ ಉಮೇಶ್‌ ಕತ್ತಿ ಅವರಿಗೆ ಕಲಬುರಗಿ, ಅರವಿಂದ ಲಿಂಬಾವಳಿ ಅವರಿಗೆ ಚಿಕ್ಕಮಗಳೂರು, ಸಿ.ಪಿ. ಯೋಗೇಶ್ವರ ಅವರಿಗೆ ಕೋಲಾರ, ಎಸ್‌. ಅಂಗಾರ ಅವರಿಗೆ ಉಡುಪಿ, ಮುರುಗೇಶ್‌ ನಿರಾಣಿ ಅವರಿಗೆ ಯಾದಗಿರಿಯಲ್ಲಿ ಧ್ವಜಾರೋಹಣ ನಡೆಸುವ ಅವಕಾಶ ನೀಡಲಾಗಿದೆ. ಸಾಮಾನ್ಯವಾಗಿ ಉಸ್ತುವಾರಿ ಸಚಿವರು ಈ ಗೌರವವನ್ನು ಪಡೆಯುವುದು ವಾಡಿಕೆ.

ಹಾಗಾಗಿ, ಮುಂದೆ ಈ ಸಚಿವರನ್ನು ಅದೇ ಜಿಲ್ಲೆಗೆ ನೇಮಿಸಲಾಗುತ್ತದೆ ಎಂಬ ಚರ್ಚೆ ಹುಟ್ಟಲು ಕಾರಣವಾಗಿದೆ. ಈ ನಡುವೆ, ಎಂ.ಟಿ.ಬಿ. ನಾಗರಾಜ್‌ ಮತ್ತು ಆರ್‌. ಶಂಕರ್‌ ಅವರಿಗೆ ಧ್ವಜಾರೋಹಣದ ಭಾಗ್ಯ ಸಿಕ್ಕಿಲ್ಲ. 30 ಜಿಲ್ಲೆಗಳಿಗೆ ಹೋಲಿಸಿದರೆ ಈಗಾಗಲೇ 33 ಮಂದಿ ಮಂತ್ರಿಗಳಿರುವುದರಿಂದ ಕೆಲವರಿಗೆ ಉಸ್ತುವಾರಿ ಭಾಗ್ಯ ದೊರಕುವುದಿಲ್ಲ.

ಯಾರಿಗೆ ಮುಕ್ತಿ
ಡಿಸಿಎಂ ಆಗಿರುವ ಗೋವಿಂದ ಕಾರಜೋಳ ಅವರಿಗೆ ಸದ್ಯಕ್ಕೆ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಯ ಉಸ್ತುವಾರಿ ಇದೆ. ಕಲಬುರಗಿ ಜಿಲ್ಲೆಯನ್ನು ಉಮೇಶ್‌ ಕತ್ತಿಗೆ ವಹಿಸುವ ಸಾಧ್ಯತೆ ಇದೆ. ಕತ್ತಿ ಅವರು ಬೆಳಗಾವಿ ಜಿಲ್ಲೆಯ ಮೇಲೆ ಆಸಕ್ತಿ ಹೊಂದಿದ್ದಾರಾದರೂ ಅಲ್ಲಿ ರಮೇಶ್‌ ಜಾರಕಿಹೊಳಿ ಈಗಾಗಲೇ ಸ್ಥಾಪಿತರಾಗಿರುವುದರಿಂದ ಸಿಗುವುದು ಕಷ್ಟ.

ಬಸವರಾಜ್‌ ಬೊಮ್ಮಾಯಿ ಅವರು ಉಡುಪಿ ಮತ್ತು ಹಾವೇರಿ ಜಿಲ್ಲೆಗೆ ಉಸ್ತುವಾರಿ. ಉಡುಪಿಯಲ್ಲಿ ಈಗ ಅಂಗಾರ ಅವರಿಗೆ ಧ್ವಜಾರೋಹಣದ ಅವಕಾಶ ನೀಡಲಾಗಿದೆ. ಉಸ್ತುವಾರಿ ಪಟ್ಟಿ ಬಿಡುಗಡೆಯಾದಾಗ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ದಕ್ಷಿಣ ಕನ್ನಡದಿಂದ ಉಡುಪಿಗೆ ಸ್ಥಳಾಂತರಿಸಿ, ಅಂಗಾರ ಅವರಿಗೆ ದಕ್ಷಿಣ ಕನ್ನಡವನ್ನು ನೀಡುವ ಸಾಧ್ಯತೆಯೂ ಇದೆ.
ಖಾತೆ ಮರುಹಂಚಿಕೆ: ತಣ್ಣಗಾಗದ ಮಾಧುಸ್ವಾಮಿ, ಸುಧಾಕರ್‌, ಶಂಕರ್ ಬಂಡಾಯ!ಈ ನಡುವೆ, ಆರ್‌. ಶಂಕರ್‌ ಅವರು ಹಾವೇರಿ ಜಿಲ್ಲಾ ಉಸ್ತುವಾರಿ ಹುದ್ದೆಗೆ ಕಣ್ಣಿಟ್ಟಿರುವ ವರ್ತಮಾನವಿದೆ. ಒಂದೊಮ್ಮೆ ಬೊಮ್ಮಾಯಿ ಅವರನ್ನು ಹೆಚ್ಚುವರಿ ಜವಾಬ್ದಾರಿಗಳ ನೆಲೆಯಲ್ಲಿ ಉಸ್ತುವಾರಿಯಿಂದ ಮುಕ್ತಿಗೊಳಿಸಿದರಷ್ಟೇ ಶಂಕರ್‌ಗೆ ಅವರು ಬಯಸಿದ ಜಿಲ್ಲೆ ಸಿಗಬಹುದು. ಮುರುಗೇಶ್‌ ನಿರಾಣಿ ಅವರಿಗೆ ಯಾದಗಿರಿ ಜಿಲ್ಲೆಯಲ್ಲಿ ಧ್ವಜಾರೋಹಣಕ್ಕೆ ಸೂಚಿಸಲಾಗಿದೆ. ಆದರೆ, ಅವರು ಸ್ವಜಿಲ್ಲೆಯಾದ ಬಾಗಲಕೋಟೆಯ ಆಸಕ್ತರು. ಅಲ್ಲಿ ಈಗಾಗಲೇ ಗೋವಿಂದ ಕಾರಜೋಳ ಉಸ್ತುವಾರಿಯಾಗಿದ್ದಾರೆ.
ಮಿತ್ರ ಮಂಡಳಿ ಹಳೇ ಕಥೆ, ಇವಾಗ ನಾವು ಬಿಜೆಪಿಗರು ಎಂದ ರಮೇಶ್ ಜಾರಕಿಹೊಳಿಯೋಗೇಶ್ವರ್‌ಗೆ ರಾಮನಗರ ಆಸಕ್ತಿಸಣ್ಣ ನೀರಾವರಿ ಸಚಿವರಾಗಿರುವ ಸಿ.ಪಿ. ಯೋಗೇಶ್ವರ್‌ ಅವರಿಗೆ ಈಗ ಕೋಲಾರ ಜಿಲ್ಲೆಯಲ್ಲಿ ಧ್ವಜ ಹಾರಿಸಲು ಸೂಚಿಸಲಾಗಿದೆ. ಆದರೆ, ಅವರು ರಾಮನಗರದ ಉಸ್ತುವಾರಿ ಬಯಸಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಅದು ಡಿಸಿಎಂ ಅಶ್ವತ್ಥ ನಾರಾಯಣ ಅವರ ಕೈಲಿದೆ. ಒಂದೊಮ್ಮೆ ಡಿ.ಕೆ.ಶಿವಕುಮಾರ್‌, ಎಚ್‌.ಡಿ. ಕುಮಾರಸ್ವಾಮಿ ಜತೆಗೆ ಸಿ.ಪಿ. ಯೋಗೇಶ್ವರ್‌ ಅವರೇ ಗುದ್ದಾಡಲಿ ಎಂಬ ಯೋಚನೆ ಬಂದರೆ ರಾಮನಗರ ಯೋಗಿ ಕೈಗೆ ಬರಲೂ ಬಹುದು. ಸಿ.ಟಿ ರವಿ ಅವರು ರಾಷ್ಟ್ರ ಮಟ್ಟದ ಪಕ್ಷ ಕಾರ್ಯಕ್ಕೆ ಹೋಗಿರುವುದರಿಂದ ಚಿಕ್ಕಮಗಳೂರಿನ ಧ್ವಜಾರೋಹಣ ಜವಾಬ್ದಾರಿ ಅರವಿಂದ ಲಂಬಾವಳಿ ಅವರಿಗೆ ದೊರಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ