ಆ್ಯಪ್ನಗರ

ಅರ್ಚಕರಿಗೆ ಪ್ಯಾಕೇಜ್‌ಗೆ ಕೋರಿಕೆ, ಸರಕಾರಕ್ಕೆ ಹೈಕೋರ್ಟ್‌ನಿಂದ ‌ ನೋಟಿಸ್‌

​ಬೆಂಗಳೂರಿನ ವಕೀಲ ಶ್ರೀಹರಿ ಕೌಸ್ತ ಮತ್ತು ಅರ್ಚಕ ಕೆ.ಎಸ್‌. ಎನ್‌. ದೀಕ್ಷಿತ್‌ ಸಲ್ಲಿಸಿರುವ ಅರ್ಜಿಯ ಮನವಿ ಆಲಿಸಿದ ಸಿಜೆ ಎ.ಎಸ್‌ .ಓಕಾ‌ ನೇತೃತ್ವದ ವಿಭಾಗೀಯ ಪೀಠ, ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.

Vijaya Karnataka 20 May 2020, 8:14 pm
ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇವಾಲಯಗಳನ್ನು ತೆರೆಯದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ‘ಸಿ’ ವರ್ಗದಲ್ಲಿನ 35 ಸಾವಿರಕ್ಕೂ ಅಧಿಕ ಮುಜರಾಯಿ ದೇವಾಲಯಗಳ ಅರ್ಚಕರಿಗೆ ಪರಿಹಾರ ಪ್ಯಾಕೇಜ್‌ ಘೋಷಿಸುವಂತೆ ಕೋರಿ ಸಲ್ಲಿಸಿರುವ ಪಿಐಎಲ್‌ ಸಂಬಂಧ ಹೈಕೋರ್ಟ್‌, ಸರಕಾರಕ್ಕೆ ನೋಟಿಸ್‌ ನೀಡಿದೆ.
Vijaya Karnataka Web High Court


ಬೆಂಗಳೂರಿನ ವಕೀಲ ಶ್ರೀಹರಿ ಕೌಸ್ತ ಮತ್ತು ಅರ್ಚಕ ಕೆ.ಎಸ್‌. ಎನ್‌. ದೀಕ್ಷಿತ್‌ ಸಲ್ಲಿಸಿರುವ ಅರ್ಜಿಯ ಮನವಿ ಆಲಿಸಿದ ಸಿಜೆ ಎ.ಎಸ್‌ .ಓಕಾ‌ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ. ಆಕ್ಷೇಪಣೆ ಸಲ್ಲಿಸಲು ಆದೇಶಿಸಿ ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿದೆ. ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ಕಟ್ಟಡ ಕಾರ್ಮಿಕರು ಮತ್ತಿತರರಿಗೆ ನೀಡಿರುವಂತೆ ಅರ್ಚಕರಿಗೂ ಏಕೆ ಒಮ್ಮೆ ಪರಿಹಾರ ನೀಡುವ ಬಗ್ಗೆ ಸರಕಾರ ಆಲೋಚಿಸಬಾರದು ಎಂದು ನ್ಯಾಯಪೀಠ ಕೇಳಿದೆ.

ಅರ್ಜಿದಾರರ ಪರ ವಕೀಲರು, ‘‘ದೇವಾಲಯಗಳ ಅರ್ಚಕರಿಗೆ ಪರಿಹಾರ ನೀಡುವಂತೆ ಏ.2 ರಂದೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಸಿಎಂ ಅದನ್ನು ಪರಿಗಣಿಸಿಲ್ಲ. ಕಟ್ಟಡ ಕಾರ್ಮಿಕರು, ನೇಕಾರರು, ಆಟೋ ಚಾಲಕರು, ಕ್ಷೌರಿಕರೂ ಸೇರಿ ಹಲವು ವರ್ಗದವರಿಗೆ ಸರಕಾರ ಪರಿಹಾರ ಪ್ಯಾಕೇಜ್‌ ಘೋಷಿಸಿದೆ. ಆದರೆ ಅರ್ಚಕರನ್ನು ಪ್ಯಾಕೇಜ್‌ಗೆ ಪರಿಗಣಿಸದೇ ಇರುವುದರಿಂದ ಸೂಕ್ತ ನಿರ್ದೇಶನ ನೀಡಬೇಕು,’’ ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ