ಆ್ಯಪ್ನಗರ

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು ಗೊತ್ತಾ?

ರಾಜ್ಯದಲ್ಲಿ ಶನಿವಾರ ಕೂಡ ವರುಣನ ಆರ್ಭಟ ಮುಂದುವರೆದಿದೆ. ಕಳೆದ 40 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಇಷ್ಟೊಂದು ಕುಂಭದ್ರೋಣ ಮಳೆಯಾಗುತ್ತಿದ್ದು ಅತಿವೃಷ್ಟಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆ ರಾಜ್ಯದ ಜಲಾಶಯಗಳ ನೀರಿನ ಮಟ್ಟ ತಿಳಿದುಕೊಳ್ಳೋಣ ಬನ್ನಿ.

Vijaya Karnataka Web 10 Aug 2019, 11:10 am
ಕರ್ನಾಟಕದಲ್ಲಿ ಮುಂಗಾರು ಮಳೆ ಕಳೆದ ಹಲವು ದಿನಗಳಿಂದ ಚುರುಕಾಗಿದ್ದು, ಮಹಾಮಳೆಯ ಆರ್ಭಟ ಮುಂದುವರಿದಿದೆ. ರಾಜ್ಯಕ್ಕೆ ಕುಂಭದ್ರೋಣ ಮಳೆ ಕೈಹಿಡಿದಿದ್ದು, ಸತತ ಮಳೆಯಿಂದಾಗಿ ನಾಡಿನ ಪ್ರಮುಖ ನದಿಗಳು ತುಂಬಿ ಹರಿಯುತ್ತಿದೆ.
Vijaya Karnataka Web dam


ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ಬಂದು ತಲುಪಿವೆ. ಜತೆಗೆ, ಮಲೆನಾಡು, ಕರಾವಳಿ ಭಾಗಗಳಲ್ಲೂ ಮಳೆ ಬಿರುಸು ಪಡೆದಿದ್ದು, ನದಿ ನೀರು ಹಲವು ನಗರ ಪ್ರದೇಶ ಜನವಸತಿ ಪ್ರದೇಶಗಳಿಗೆ ನುಗ್ಗಿದ್ದು ಪ್ರವಾಹ ಭೀತಿ ಎದುರಾಗಿದೆ.

ಇನ್ನು, ಕರ್ನಾಟಕದಲ್ಲಿ ಇಂದಿನ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದನ್ನು ತಿಳಿಯೋಣ ಬನ್ನಿ..

ಕೃಷ್ಣರಾಜಸಾಗರ (ಕೆಆರ್‌ಎಸ್‌) ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದಿನ ನೀರಿನ ಮಟ್ಟ 108.50 ಅಡಿ ಇದೆ. ಕಳೆದ ವರ್ಷ ಈ ದಿನ 124.48 ಅಡಿ ನೀರಿತ್ತು. ಈ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಮಳೆ ಹೆಚ್ಚಾಗಿದ್ದು, ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ, ರಾಜ್ಯಕ್ಕೆ ಮುಂಗಾರು ತಡವಾಗಿ ಆಗಮಿಸಿದ ಕಾರಣ ಕೆಆರ್‌ಎಸ್‌ ಡ್ಯಾಂನಲ್ಲಿ ಸಾಕಷ್ಟು ನೀರು ಶೇಖರಣೆಯಾಗಿಲ್ಲ. ಅಲ್ಲದೆ, 49. 452 ಟಿಎಂಸಿ ನೀರಿಗೆ ಅವಕಾಶವಿದ್ದರೂ, ಸದ್ಯ ಕೇವಲ 30.241 ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂನ ನೀರಿನ ಒಳಹರಿವು 1,08,555 ಕ್ಯೂಸೆಕ್ ಆಗಿದ್ದು, ಹೊರಹರಿವು 441 ಕ್ಯೂಸೆಕ್ ಆಗಿದೆ.

ಇನ್ನು, ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ ನೋಡಿ

ಇಂದಿನ ನೀರಿನ ಮಟ್ಟ

ಜಲಾಶಯಇಂದಿನ ಮಟ್ಟಗರಿಷ್ಠ ಮಟ್ಟ
ನಾರಾಯಣಪುರ488. 60 ಮೀಟರ್492. 25 ಮೀಟರ್
ಆಲಮಟ್ಟಿ517. 30 ಮೀಟರ್519. 60 ಮೀಟರ್
ಲಿಂಗನಮಕ್ಕಿ1,803.55 ಅಡಿ1,819 ಅಡಿ
ಕೆಆರ್‌ಎಸ್‌108.50 ಅಡಿ124.80 ಅಡಿ
ಕಬಿನಿ2,282.61 ಅಡಿ2,284 ಅಡಿ
ಹೇಮಾವತಿ2,912.10 ಅಡಿ2,922 ಅಡಿ
ಹಾರಂಗಿ2,853.422,859.00 ಅಡಿ
ಘಟಪ್ರಭಾ2,172. 202,175.00 ಅಡಿ
ತುಂಗಭದ್ರಾ1,626.081,633.00 ಅಡಿ
ಮಲಪ್ರಭಾ2,078.90 ಅಡಿ2,079.5 ಅಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ