ಆ್ಯಪ್ನಗರ

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಎಷ್ಟು ಗೊತ್ತಾ?

ಆಗಸ್ಟ ಆರಂಭದಲ್ಲಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಅಬ್ಬರಿಸಿದ್ದ ವರುಣನ ಪ್ರತಾಪ ಈಗ ತಗ್ಗಿದೆ. ಆದರೆ ಕೆಲವೆಡೆ ಉತ್ತಮ ಮಳೆ ಮಳೆಯಾಗುತ್ತಿದೆ. ಈ ಹಿನ್ನೆಲೆ ರಾಜ್ಯದ ಪ್ರಮುಖ ಜಲಾಶಯಗಳ ಪಟ್ಟಿ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.

Vijaya Karnataka Web 28 Aug 2019, 9:25 am
ಬೆಂಗಳೂರು: ಸಾಮಾನ್ಯವಾಗಿ ಮುಂಗಾರು ಆರಂಭವಾಗುವ ಜೂನ್ ತಿಂಗಳಲ್ಲಿ ಮಂದವಾಗಿದ್ದ ಮುಂಗಾರು ಜುಲೈ ಅಂತ್ಯದ ಹೊತ್ತಿಗೆ ತೀವ್ರಗೊಂಡು ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಹಿಂದೆಂದೂ ಕಂಡರಿಯದ ಅನಾಹುತವನ್ನೇ ಸೃಷ್ಟಿಸಿತು. ತುಂಬಿ ಹರಿದ ನದಿಗಳು ಹಲವರ ಬದುಕನ್ನೇ ನುಂಗಿ ಹಾಕಿದವು. ಆಣೆಕಟ್ಟುಗಳು ಗರಿಷ್ಟ ಮಟ್ಟ ತಲುಪಿದವು. ಈಗಲೂ ಕೆಲವೆಡೆ ಮಳೆಯಾಗುತ್ತಿದ್ದು ಜೀವನದಿಗಳು ಮೈದುಂಬಿ ಹರಿಯುತ್ತಿವೆ.
Vijaya Karnataka Web dam


ಕರ್ನಾಟಕದಲ್ಲಿ ಇಂದಿನ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ ಎಂಬುದನ್ನು ತಿಳಿಯೋಣ ಬನ್ನಿ..

ಕೃಷ್ಣರಾಜಸಾಗರದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಇಂದಿನ ನೀರಿನ ಮಟ್ಟ ಕೂಡ ಅಷ್ಟೇ ಇದೆ. ಅಂದರೆ ಆಣೆಕಟ್ಟು ಸಂಪೂರ್ಣ ಭರ್ತಿಯಾಗಿದೆ. ಕಳೆದ ವರ್ಷ ಈ ದಿನ 124.20 ಅಡಿ ನೀರಿತ್ತು.

ಸದ್ಯ ಕೆಆರ್‌ಎಸ್ ಡ್ಯಾಂನಲ್ಲಿ 49.452 ಟಿಎಂಸಿ ನೀರಿಗೆ ಅವಕಾಶವಿದ್ದು, ಅಷ್ಟೇ ಪ್ರಮಾಣದ ಟಿಎಂಸಿ ನೀರು ಸಂಗ್ರಹವಾಗಿದೆ. ಡ್ಯಾಂನ ನೀರಿನ ಒಳಹರಿವು 8846 ಕ್ಯೂಸೆಕ್ ಆಗಿದ್ದು, ಹೊರಹರಿವು 6191ಕ್ಯೂಸೆಕ್ ಆಗಿದೆ.

ಇನ್ನು, ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಲ್ಲಿದೆ ನೋಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ