ಆ್ಯಪ್ನಗರ

ಸ್ಪೀಕರ್‌ ಸಮಯ ನಿಗದಿ ಮಾಡಿದ್ದರೂ ವಿಚಾರಣೆಗೆ ಆಗಮಿಸದ ರಾಜೀನಾಮೆ ನೀಡಿದ ಶಾಸಕರು

ಅತೃಪ್ತ ಶಾಸಕರು ವಿಧಾನಸಭಾ ಸ್ಪೀಕರ್ ಕೆಆರ್‌ ರಮೇಶ್‌ ಕುಮಾರ್‌ಗೆ ರಾಜೀನಾಮೆ ನೀಡಿದ್ದಾರೆ. ಅದರ ವಿಚಾರಣೆಗೆ ಸಮಯ ಕೂಡ ನಿಗದಿಯಾಗಿತ್ತು. ಆದರೆ ಶಾಸಕರು ಯಾರೂ ಬಂದಿಲ್ಲ.

Vijaya Karnataka Web 12 Jul 2019, 4:15 pm
ಬೆಂಗಳೂರು: ಮೈತ್ರಿ ಸರಕಾರದ ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು ಈಗ ಹಳೆಯ ಸುದ್ದಿಯಾಗಿದೆ. ಈಗ ಎಲ್ಲರ ಕಣ್ಣು ವಿಧಾನಸಭಾ ಸ್ಪೀಕರ್‌ ಕಚೇರಿ ಮೇಲಿದೆ.
Vijaya Karnataka Web ರಮೇಶ್‌ ಕುಮಾರ್‌
ರಮೇಶ್ ಕುಮಾರ್‌


ಏಕೆಂದರೆ ರಾಜೀನಾಮೆ ನೀಡಿದ ಹಾಗೂ ಕ್ರಮಬದ್ಧವಾಗಿ ಪತ್ರ ನೀಡಿದ್ದ ಮೂವರು ಶಾಸಕರ ವಿಚಾರಣೆಗೆ ವಿಧಾನಸಭಾ ಸ್ಪೀಕರ್‌ ರಮೇಶ್‌ ಕುಮಾರ್ ಶುಕ್ರವಾರ ಸಮಯ ನಿಗದಿ ಮಾಡಿದ್ದರು.

ವಿಜಯನಗರ ಶಾಸಕ ಆನಂದ್‌ ಸಿಂಗ್‌, ಮಸ್ಕಿ ಶಾಸಕ ಪ್ರತಾಪ್‌ ಗೌಡ ಪಾಟೀಲ್‌ ಹಾಗೂ ಕೆ.ಆರ್.‌ ಪೇಟೆ ಶಾಸಕ ನಾರಾಯಣಗೌಡ ಅವರ ವಿಚಾರಣೆಗೆ ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ನಾಲ್ಕು ಗಂಟೆಯವರೆಗೆ ಸಮನ ನಿಗದಿ ಮಾಡಲಾಗಿತ್ತು.

2 ಗಂಟೆಗೆ ಆನಂದ್‌ ಸಿಂಗ್‌ಗೆ, 3 ಗಂಟೆಗೆ ಪ್ರತಾಪ್‌ ಗೌಡ ಪಾಟೀಲ್‌ ಹಾಗೂ 4 ಗಂಟೆಗೆ ನಾರಾಯಣಗೌಡ ವಿಚಾರಣೆಗೆ ಸಮಯ ನಿಗದಿಪಡಿಸಲಾಗಿತ್ತು.

ಆದರೆ ಇದುವರೆಗೂ ಮೂವರು ಶಾಸಕರು ಸ್ಪೀಕರ್‌ ಕಚೇರಿಯತ್ತ ಸುಳಿಯಲೇ ಇಲ್ಲ.

ಕಳೆದ ಶನಿವಾರ ರಾಜೀನಾಮೆ ನೀಡಿದ್ದ ನಾರಾಯಣಗೌಡ, ಪ್ರತಾಪ್‌ ಗೌಡ ಪಾಟೀಲ್‌ ರಾಜೀನಾಮೆ ಕ್ರಮಬದ್ಧವಾಗಿದೆ ಎಂದು ಕಳೆದ ಮಂಗಳವಾರ ವಿಧಾನಸಭಾ ಸ್ಪೀಕರ್‌ ಕೆ.ಆರ್‌. ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿ, ಖುದ್ದು ಹಾಜರಾಗಿ ವಿಚಾರಣೆಗೆ ಹಾಜರಾಗುವಂತೆ ಸಮಯ ನಿಗದಿ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ