ಕೆಂಚೇಗೌಡ ಬೆಂಗಳೂರು
ಸಂಪನ್ಮೂಲ ಕೊರತೆಯ ಗಂಭೀರ ಸವಾಲು ಎದುರಾಗಿರುವ ಕಾರಣ ಲೋಕೋಪಯೋಗಿ ಇಲಾಖೆಯ ಸುಮಾರು 9 ಸಾವಿರ ಕೋಟಿ ರೂ.ಮೊತ್ತದ 6,025 ಕಾಮಗಾರಿಗಳಿಗೆ ತಡೆಯೊಡ್ಡಿದ ಬೆನ್ನಲ್ಲೇ, ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೂ ಸರಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಸರಕಾರದ ಈ ಕ್ರಮದಿಂದಾಗಿ ರಾಜ್ಯದ ಸಹಕಾರಿ ಬ್ಯಾಂಕ್ಗಳಿಗೆ ಸಂಕಷ್ಟ ಎದುರಾಗಿದ್ದು, ರೈತರಿಗೆ ಹೊಸದಾಗಿ ಬೆಳೆ ಸಾಲ ವಿತರಣೆಗೂ ಹಣಕಾಸು ಕೊರತೆಯಾಗುವ ಆತಂಕ ಸೃಷ್ಟಿಯಾಗಿದೆ.
ಕುಗ್ಗುತ್ತಿರುವ ಆದಾಯ ಸಂಗ್ರಹ ಹಾಗೂ ಆಶಾದಾಯಕವಾಗಿಲ್ಲದ ಹಣಕಾಸು ಪರಿಸ್ಥಿತಿ ಮಧ್ಯೆ ನೆರೆ ಅನಾಹುತ ನಿರ್ವಹಣೆಗೆ ಹಣ ಹೊಂದಿಸುವ ದೊಡ್ಡ ಸವಾಲು ರಾಜ್ಯ ಸರಕಾರಕ್ಕೆ ಎದುರಾಗಿದೆ. ಹೀಗಾಗಿ, ರೈತರ ಸಾಲ ಮನ್ನಾ ಯೋಜನೆಯಡಿ ಮರುಪಾವತಿ ಮೊತ್ತ ಬಿಡುಗಡೆಯನ್ನು ಸರಕಾರದ ಸೂಚನೆ ಮೇರೆಗೆ ಹಣಕಾಸು ಇಲಾಖೆ ತಡೆಹಿಡಿದಿದೆ. ಸದ್ಯ ಸಹಕಾರ ಇಲಾಖೆ ಮೂಲಕ ಸಲ್ಲಿಕೆಯಾಗಿದ್ದ ಸುಮಾರು 1450 ಕೋಟಿ ರೂ. ಮೊತ್ತ ಬಿಡುಗಡೆ ಪ್ರಸ್ತಾವನೆಯನ್ನು ತಡೆಹಿಡಿಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಹಕಾರಿ ಸಂಸ್ಥೆಗಳಲ್ಲಿ ಬೆಳೆ ಸಾಲ ಪಡೆದಿದ್ದ ರೈತರ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವ ಘೋಷಣೆಯಂತೆ ಒಟ್ಟು 19,08,580 ಖಾತೆಗಳಲ್ಲಿನ 9,448 ಕೋಟಿ ರೂ. ಸಾಲ ಮನ್ನಾ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಒಟ್ಟು 15,00,795 (ಶೇ.78.63) ಮಂದಿ ಮಾತ್ರ ಸಂಬಂಧಪಟ್ಟ ದಾಖಲೆಗಳೊಂದಿಗೆ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸಿದ್ದು, ಸರಕಾರದ ಮೇಲಿನ ಸಾಲದ ಹೊರೆ ಸುಮಾರು 8 ಸಾವಿರ ಕೋಟಿ ರೂ.ಗಳಿಗೆ ಸೀಮಿತವಾಗಿದೆ. ಈಗಾಗಲೇ ಸುಮಾರು 4,800 ಕೋಟಿ ರೂ. ಮೊತ್ತವನ್ನು ಸರಕಾರ ಬಿಡುಗಡೆ ಮಾಡಿದ್ದು, ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ಗಳ ಮೂಲಕ ರೈತರ ಖಾತೆಗಳಿಗೆ ತಲುಪಿದೆ. ಸಾಲದ ಕಂತು ಮರುಪಾವತಿ ಅವಧಿ ಆಧರಿಸಿ ಸುಮಾರು 1,450 ಕೋಟಿ ರೂ. ಬಿಡುಗಡೆಗೆ ಸಹಕಾರ ಇಲಾಖೆಯಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಈಗ ರಾಜ್ಯ ಸರಕಾರದ ಸೂಚನೆ ಆಧರಿಸಿ ಹಣ ಬಿಡುಗಡೆಗೆ ತಡೆಯೊಡ್ಡಲಾಗಿದೆ ಎಂದು ಮೂಲಗಳು ಹೇಳಿವೆ.
ವಾಣಿಜ್ಯ ಬ್ಯಾಂಕ್ಗಳ ಅದೃಷ್ಟ
ಸಾಲ ಮನ್ನಾ ಯೋಜನೆ ಜಾರಿ ಬಗ್ಗೆ ಸಂಶಯ ಹಾಗೂ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದಿನ ಮೈತ್ರಿ ಸರಕಾರ ವಾಣಿಜ್ಯ ಬ್ಯಾಂಕ್ಗಳ ಸಾಲ ಮನ್ನಾ ಬಾಕಿ ಮೊತ್ತವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿತ್ತು. ವಾಣಿಜ್ಯ ಬ್ಯಾಂಕ್ಗಳಲ್ಲಿ ಸಾಲ ಮನ್ನಾ ಯೋಜನೆಯಡಿ ಗುರುತಿಸಲಾಗಿದ್ದ 16,40,601 ಖಾತೆಗಳ ಪೈಕಿ ಷರತ್ತು ಪೂರೈಸಿದ 16,02,264 ಅರ್ಹ ರೈತರ ಖಾತೆಗಳಿಗೆ ಸಂಬಂಧಿಸಿದ 2 ಲಕ್ಷ ರೂ.ವರೆಗಿನ ಬೆಳೆ ಸಾಲದ ಮೊತ್ತದ ಬಾಕಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಮೂಲಕ ಬ್ಯಾಂಕ್ಗಳ ತಕರಾರಿಗೆ ಸರಕಾರ ಪೂರ್ಣ ವಿರಾಮ ಹಾಕಿತ್ತು. ಆದರೆ, ಸಹಕಾರಿ ಸಂಸ್ಥೆಗಳ ಸಾಲ ಮನ್ನಾ ವಿಚಾರದಲ್ಲಿ ಸಾಲದ ಕಂತು ಮರುಪಾವತಿ ಆಧರಿಸಿ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಅಂತೆಯೇ, ಸಹಕಾರ ಬ್ಯಾಂಕ್ಗಳಲ್ಲಿನ ರೈತರ ಖಾತೆಗಳಿಗೆ ಸಂಬಂಧಿಸಿದ ಸುಮಾರು 3 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತ ಬಿಡುಗಡೆಯಾಗುವುದು ಬಾಕಿ ಇದೆ.
ಸಹಕಾರಿಗಳಿಗೆ ಸಂಕಷ್ಟ
ಬಹಳಷ್ಟು ಸಹಕಾರಿ ಸಂಸ್ಥೆಗಳು ಆರ್ಥಿಕವಾಗಿ ಸೊರಗಿವೆ. ಹಿಂದೆ ಲೋಕಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ಹಣ ಬಿಡುಗಡೆಯಾಗದೆ ತಡೆಯೊಡ್ಡಿದ್ದ ಕಾರಣ ಸಹಕಾರಿ ಸಂಸ್ಥೆಗಳು ತೊಂದರೆಗೆ ಸಿಲುಕಿದ್ದವು. ಇದೀಗ, ಸಾಲದ ಕಂತು ಮರುಪಾವತಿ ಮುಗಿದ ರೈತರ ಖಾತೆಗಳಿಗೆ ಸಂಬಂಧಿಸಿದಂತೆ ಮರುಪಾವತಿ ನಿರೀಕ್ಷಿಸಿದ್ದ ಸಹಕಾರಿ ಬ್ಯಾಂಕ್ಗಳಿಗೆ ಸಂಕಷ್ಟ ಎದುರಾಗಿದೆ. ರೈತರಿಗೆ ಹೊಸ ಬೆಳೆ ಸಾಲ ಸಿಗುವ ಭರವಸೆ ಇಲ್ಲದಂತಾಗಿದೆ.
ಸಂಪನ್ಮೂಲ ಕೊರತೆಯ ಗಂಭೀರ ಸವಾಲು ಎದುರಾಗಿರುವ ಕಾರಣ ಲೋಕೋಪಯೋಗಿ ಇಲಾಖೆಯ ಸುಮಾರು 9 ಸಾವಿರ ಕೋಟಿ ರೂ.ಮೊತ್ತದ 6,025 ಕಾಮಗಾರಿಗಳಿಗೆ ತಡೆಯೊಡ್ಡಿದ ಬೆನ್ನಲ್ಲೇ, ರೈತರ ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೂ ಸರಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಸರಕಾರದ ಈ ಕ್ರಮದಿಂದಾಗಿ ರಾಜ್ಯದ ಸಹಕಾರಿ ಬ್ಯಾಂಕ್ಗಳಿಗೆ ಸಂಕಷ್ಟ ಎದುರಾಗಿದ್ದು, ರೈತರಿಗೆ ಹೊಸದಾಗಿ ಬೆಳೆ ಸಾಲ ವಿತರಣೆಗೂ ಹಣಕಾಸು ಕೊರತೆಯಾಗುವ ಆತಂಕ ಸೃಷ್ಟಿಯಾಗಿದೆ.
ಕುಗ್ಗುತ್ತಿರುವ ಆದಾಯ ಸಂಗ್ರಹ ಹಾಗೂ ಆಶಾದಾಯಕವಾಗಿಲ್ಲದ ಹಣಕಾಸು ಪರಿಸ್ಥಿತಿ ಮಧ್ಯೆ ನೆರೆ ಅನಾಹುತ ನಿರ್ವಹಣೆಗೆ ಹಣ ಹೊಂದಿಸುವ ದೊಡ್ಡ ಸವಾಲು ರಾಜ್ಯ ಸರಕಾರಕ್ಕೆ ಎದುರಾಗಿದೆ. ಹೀಗಾಗಿ, ರೈತರ ಸಾಲ ಮನ್ನಾ ಯೋಜನೆಯಡಿ ಮರುಪಾವತಿ ಮೊತ್ತ ಬಿಡುಗಡೆಯನ್ನು ಸರಕಾರದ ಸೂಚನೆ ಮೇರೆಗೆ ಹಣಕಾಸು ಇಲಾಖೆ ತಡೆಹಿಡಿದಿದೆ. ಸದ್ಯ ಸಹಕಾರ ಇಲಾಖೆ ಮೂಲಕ ಸಲ್ಲಿಕೆಯಾಗಿದ್ದ ಸುಮಾರು 1450 ಕೋಟಿ ರೂ. ಮೊತ್ತ ಬಿಡುಗಡೆ ಪ್ರಸ್ತಾವನೆಯನ್ನು ತಡೆಹಿಡಿಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಹಕಾರಿ ಸಂಸ್ಥೆಗಳಲ್ಲಿ ಬೆಳೆ ಸಾಲ ಪಡೆದಿದ್ದ ರೈತರ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವ ಘೋಷಣೆಯಂತೆ ಒಟ್ಟು 19,08,580 ಖಾತೆಗಳಲ್ಲಿನ 9,448 ಕೋಟಿ ರೂ. ಸಾಲ ಮನ್ನಾ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಒಟ್ಟು 15,00,795 (ಶೇ.78.63) ಮಂದಿ ಮಾತ್ರ ಸಂಬಂಧಪಟ್ಟ ದಾಖಲೆಗಳೊಂದಿಗೆ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸಿದ್ದು, ಸರಕಾರದ ಮೇಲಿನ ಸಾಲದ ಹೊರೆ ಸುಮಾರು 8 ಸಾವಿರ ಕೋಟಿ ರೂ.ಗಳಿಗೆ ಸೀಮಿತವಾಗಿದೆ. ಈಗಾಗಲೇ ಸುಮಾರು 4,800 ಕೋಟಿ ರೂ. ಮೊತ್ತವನ್ನು ಸರಕಾರ ಬಿಡುಗಡೆ ಮಾಡಿದ್ದು, ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್ಗಳ ಮೂಲಕ ರೈತರ ಖಾತೆಗಳಿಗೆ ತಲುಪಿದೆ. ಸಾಲದ ಕಂತು ಮರುಪಾವತಿ ಅವಧಿ ಆಧರಿಸಿ ಸುಮಾರು 1,450 ಕೋಟಿ ರೂ. ಬಿಡುಗಡೆಗೆ ಸಹಕಾರ ಇಲಾಖೆಯಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಆದರೆ, ಈಗ ರಾಜ್ಯ ಸರಕಾರದ ಸೂಚನೆ ಆಧರಿಸಿ ಹಣ ಬಿಡುಗಡೆಗೆ ತಡೆಯೊಡ್ಡಲಾಗಿದೆ ಎಂದು ಮೂಲಗಳು ಹೇಳಿವೆ.
ವಾಣಿಜ್ಯ ಬ್ಯಾಂಕ್ಗಳ ಅದೃಷ್ಟ
ಸಾಲ ಮನ್ನಾ ಯೋಜನೆ ಜಾರಿ ಬಗ್ಗೆ ಸಂಶಯ ಹಾಗೂ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಹಿಂದಿನ ಮೈತ್ರಿ ಸರಕಾರ ವಾಣಿಜ್ಯ ಬ್ಯಾಂಕ್ಗಳ ಸಾಲ ಮನ್ನಾ ಬಾಕಿ ಮೊತ್ತವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿತ್ತು. ವಾಣಿಜ್ಯ ಬ್ಯಾಂಕ್ಗಳಲ್ಲಿ ಸಾಲ ಮನ್ನಾ ಯೋಜನೆಯಡಿ ಗುರುತಿಸಲಾಗಿದ್ದ 16,40,601 ಖಾತೆಗಳ ಪೈಕಿ ಷರತ್ತು ಪೂರೈಸಿದ 16,02,264 ಅರ್ಹ ರೈತರ ಖಾತೆಗಳಿಗೆ ಸಂಬಂಧಿಸಿದ 2 ಲಕ್ಷ ರೂ.ವರೆಗಿನ ಬೆಳೆ ಸಾಲದ ಮೊತ್ತದ ಬಾಕಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಮೂಲಕ ಬ್ಯಾಂಕ್ಗಳ ತಕರಾರಿಗೆ ಸರಕಾರ ಪೂರ್ಣ ವಿರಾಮ ಹಾಕಿತ್ತು. ಆದರೆ, ಸಹಕಾರಿ ಸಂಸ್ಥೆಗಳ ಸಾಲ ಮನ್ನಾ ವಿಚಾರದಲ್ಲಿ ಸಾಲದ ಕಂತು ಮರುಪಾವತಿ ಆಧರಿಸಿ ಹಣ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಅಂತೆಯೇ, ಸಹಕಾರ ಬ್ಯಾಂಕ್ಗಳಲ್ಲಿನ ರೈತರ ಖಾತೆಗಳಿಗೆ ಸಂಬಂಧಿಸಿದ ಸುಮಾರು 3 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತ ಬಿಡುಗಡೆಯಾಗುವುದು ಬಾಕಿ ಇದೆ.
ಸಹಕಾರಿಗಳಿಗೆ ಸಂಕಷ್ಟ
ಬಹಳಷ್ಟು ಸಹಕಾರಿ ಸಂಸ್ಥೆಗಳು ಆರ್ಥಿಕವಾಗಿ ಸೊರಗಿವೆ. ಹಿಂದೆ ಲೋಕಸಭೆ ಚುನಾವಣೆ ನೀತಿ ಸಂಹಿತೆಯಿಂದಾಗಿ ಹಣ ಬಿಡುಗಡೆಯಾಗದೆ ತಡೆಯೊಡ್ಡಿದ್ದ ಕಾರಣ ಸಹಕಾರಿ ಸಂಸ್ಥೆಗಳು ತೊಂದರೆಗೆ ಸಿಲುಕಿದ್ದವು. ಇದೀಗ, ಸಾಲದ ಕಂತು ಮರುಪಾವತಿ ಮುಗಿದ ರೈತರ ಖಾತೆಗಳಿಗೆ ಸಂಬಂಧಿಸಿದಂತೆ ಮರುಪಾವತಿ ನಿರೀಕ್ಷಿಸಿದ್ದ ಸಹಕಾರಿ ಬ್ಯಾಂಕ್ಗಳಿಗೆ ಸಂಕಷ್ಟ ಎದುರಾಗಿದೆ. ರೈತರಿಗೆ ಹೊಸ ಬೆಳೆ ಸಾಲ ಸಿಗುವ ಭರವಸೆ ಇಲ್ಲದಂತಾಗಿದೆ.