ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ವಿಚಾರದಲ್ಲಿ ಮೂಲ ಉಸ್ತುವಾರಿಗಳು ಈಗ ತೆರೆಮರೆಗೆ ಸರಿಯುತ್ತಿದ್ದು, ಉಪಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥ ನಾರಾಯಣ ಹಾಗೂ ಡಿ.ಕೆ.ಬ್ರದರ್ಸ್ ಮಧ್ಯದ ಪ್ರತಿಷ್ಠೆಯ ಕಣವಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಿಂದ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಬಿಜೆಪಿಯಿಂದ ಕಂದಾಯ ಸಚಿವ ಆರ್. ಅಶೋಕ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕಾಂಗ್ರೆಸ್ನಿಂದ ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಭೈರೇಗೌಡ ಅಧಿಕೃತ ಉಸ್ತುವಾರಿಗಳಾಗಿದ್ದಾರೆ. ಇವರ ಅಧೀನದಲ್ಲಿ ಉಭಯ ಪಕ್ಷದಿಂದಲೂ 9 ವಾರ್ಡ್ ಗಳಿಗೂ ಪ್ರತ್ಯೇಕ ಉಸ್ತುವಾರಿಗಳು ಹಾಗೂ ವೀಕ್ಷಕರನ್ನು ನೇಮಿಸಲಾಗಿದೆ. ಆದಾಗಿಯೂ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಹೋದರ ಸಂಸದ ಡಿಕೆ ಸುರೇಶ್ ಹಾಗೂ ಡಿಸಿಎಂ ಅಶ್ವತ್ಥನಾರಾಯಣ್ ನಡುವಿನ ಕದನ.
ತಾವೇ ಅಭ್ಯರ್ಥಿ
ಈ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೂ ಮುನ್ನವೇ ಸಂಸದ ಡಿಕೆ ಸುರೇಶ್ ನಾನೇ ನಿಜವಾದ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದರು. ನಾನೇ ಮನೆ ಮನೆಗೆ ತೆರಳಿ ಮತ ಕೇಳುತ್ತೇನೆ ಎಂದು ಹೇಳುವ ಮೂಲಕ ಚುನಾವಣೆಯ ಸಂಪೂರ್ಣ ಹೊಣೆ ತಮ್ಮದು ಎಂದು ಸಾರಿಕೊಂಡಿದ್ದರು. ಕುಸುಮಾ ಆಯ್ಕೆ ವಿಚಾರದಲ್ಲೂ ಡಿ.ಕೆ .ಸೋದರರೇ ವಿಶೇಷ ಆಸ್ಥೆ ವಹಿಸಿದ್ದರು. ನಾಮಪತ್ರ ಸಲ್ಲಿಕೆ ಕ್ಷಣದಿಂದಲೂ ತಳಹಂತದ ತಂತ್ರಗಾರಿಕೆ, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಸೆಳೆಯುವುದು ಸೇರಿದಂತೆ ಎಲ್ಲ ಚಟುವಟಿಕೆಗಳನ್ನೂ ಇವರಿಬ್ಬರೇ ನಿಭಾಯಿಸುತ್ತಿದ್ದಾರೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ನ ಉಳಿದ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಿರಾ ಕ್ಷೇತ್ರದ ಪ್ರಚಾರಕ್ಕೆ ಹೆಚ್ಚು ಒಲವು ನೀಡುತ್ತಿದ್ದು, ರಾಜರಾಜೇಶ್ವರಿ ನಗರದಲ್ಲಿ ಮೂರು ದಿನ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ.
ಡಿಕೆಶಿ ವಿರುದ್ಧ ಮತ್ತೆ ಡಿಸಿಎಂ ವಾಗ್ಧಾಳಿ, ಜೊತೆಯಲ್ಲಿದ್ದೇ ದ್ರೋಹ ಬಗೆದವರಿಗೆ ಏನನ್ನಬೇಕು?
ಆದರೆ ಬಿಜೆಪಿಯಲ್ಲಿ ಅಶೋಕ ಹಾಗೂ ಲಿಂಬಾವಳಿ ಚುನಾವಣಾ ಉಸ್ತುವಾರಿಗಳಾಗಿದ್ದರೂ, ನಿಜಾರ್ಥದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಪ್ರತಿಷ್ಠೆಯಾಗಿ ಪರಿಗಣಿಸಿ ಚುನಾವಣಾ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಡಿಕೆ ಸೋದರರ ವಿರುದ್ಧ ನೇರಾನೇರ ಹಣಾಹಣಿಗೆ ಅವರು ಮುಂದಾಗಿದ್ದು, ಕಾಂಗ್ರೆಸ್ನ ಮಾಜಿ ಕಾರ್ಪೊರೇಟರ್ಗಳು ಹಾಗೂ ಸ್ಥಳೀಯವಾಗಿ ಗಟ್ಟಿ ಮತಬ್ಯಾಂಕ್ ಹೊಂದಿರುವ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯ ಇತರೆ ಮುಖಂಡರು ಮುನಿರತ್ನ ಜೊತೆ ಗುರುತಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದರೂ ಅಶ್ವತ್ಥ ನಾರಾಯಣ ಮಾತ್ರ ಗಟ್ಟಿಯಾಗಿ ನಿಂತು ಚುನಾವಣಾ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಬಿಜೆಪಿ-ಕಾಂಗ್ರೆಸ್ ನಡುವೆ ಮೀರ್ ಸಾದಿಕ್ ವಿವಾದ, ಡಿಕೆಸು-ಅಶ್ವತ್ಥ ನಾರಾಯಣ್ ಕೆಸರೆರೆಚಾಟ
ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಿದೆ. ಹೀಗಾಗಿ ಬಿಜೆಪಿಯ ಮುಂಚೂಣಿ ಒಕ್ಕಲಿಗ ನಾಯಕರಾಗಿ ಬೆಳೆಯುತ್ತಿರುವ ಅಶ್ವತ್ಥ ನಾರಾಯಣ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳುವುದಕ್ಕೂ ಈ ಚುನಾವಣೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆರ್.ಆರ್. ನಗರ ಚುನಾವಣಾ ಫಲಿತಾಂಶ ಬೆಂಗಳೂರು ನಗರದ ನಾಯಕತ್ವದ ಪ್ರಶ್ನೆಯೂ ಆಗಿದೆ. ‘ಮಿತ್ರಮಂಡಳಿ’ಯ ಬಹುತೇಕ ಸದಸ್ಯರು ಅಶ್ವತ್ಥ ನಾರಾಯಣ ಪರ ಒಲವು ಹೊಂದಿರುವುದರಿಂದ ಮುನಿರತ್ನ ಗೆಲುವಿನ ವಿಚಾರದಲ್ಲಿ ಅಶ್ವತ್ಥನಾರಾಯಣ ಪ್ರಾಮಾಣಿಕ ಪ್ರಯತ್ನ ಆರಂಭಿಸಿದ್ದಾರೆ. ಡಿಕೆ ಸೋದರರಿಗೆ ಪ್ರಬಲ ಪ್ರತಿರೋಧ ತೋರುತ್ತಿದ್ದಾರೆ. ಭವಿಷ್ಯದಲ್ಲಿ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲೂ ಡಿಕೆ ಸೋದರರು ಹಾಗೂ ಅಶ್ವತ್ಥ ನಾರಾಯಣ ಜಂಗೀಕುಸ್ತಿಗೆ ಈ ಚುನಾವಣೆ ವೇದಿಕೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ.
ಚುನಾವಣೆ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳಿಂದ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಬಿಜೆಪಿಯಿಂದ ಕಂದಾಯ ಸಚಿವ ಆರ್. ಅಶೋಕ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕಾಂಗ್ರೆಸ್ನಿಂದ ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷ್ಣ ಭೈರೇಗೌಡ ಅಧಿಕೃತ ಉಸ್ತುವಾರಿಗಳಾಗಿದ್ದಾರೆ. ಇವರ ಅಧೀನದಲ್ಲಿ ಉಭಯ ಪಕ್ಷದಿಂದಲೂ 9 ವಾರ್ಡ್ ಗಳಿಗೂ ಪ್ರತ್ಯೇಕ ಉಸ್ತುವಾರಿಗಳು ಹಾಗೂ ವೀಕ್ಷಕರನ್ನು ನೇಮಿಸಲಾಗಿದೆ. ಆದಾಗಿಯೂ ಈ ಕ್ಷೇತ್ರದಲ್ಲಿ ನಡೆಯುತ್ತಿರುವುದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಹೋದರ ಸಂಸದ ಡಿಕೆ ಸುರೇಶ್ ಹಾಗೂ ಡಿಸಿಎಂ ಅಶ್ವತ್ಥನಾರಾಯಣ್ ನಡುವಿನ ಕದನ.
ತಾವೇ ಅಭ್ಯರ್ಥಿ
ಈ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೂ ಮುನ್ನವೇ ಸಂಸದ ಡಿಕೆ ಸುರೇಶ್ ನಾನೇ ನಿಜವಾದ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದರು. ನಾನೇ ಮನೆ ಮನೆಗೆ ತೆರಳಿ ಮತ ಕೇಳುತ್ತೇನೆ ಎಂದು ಹೇಳುವ ಮೂಲಕ ಚುನಾವಣೆಯ ಸಂಪೂರ್ಣ ಹೊಣೆ ತಮ್ಮದು ಎಂದು ಸಾರಿಕೊಂಡಿದ್ದರು. ಕುಸುಮಾ ಆಯ್ಕೆ ವಿಚಾರದಲ್ಲೂ ಡಿ.ಕೆ .ಸೋದರರೇ ವಿಶೇಷ ಆಸ್ಥೆ ವಹಿಸಿದ್ದರು. ನಾಮಪತ್ರ ಸಲ್ಲಿಕೆ ಕ್ಷಣದಿಂದಲೂ ತಳಹಂತದ ತಂತ್ರಗಾರಿಕೆ, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರನ್ನು ಪಕ್ಷಕ್ಕೆ ಸೆಳೆಯುವುದು ಸೇರಿದಂತೆ ಎಲ್ಲ ಚಟುವಟಿಕೆಗಳನ್ನೂ ಇವರಿಬ್ಬರೇ ನಿಭಾಯಿಸುತ್ತಿದ್ದಾರೆ. ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ನ ಉಳಿದ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಶಿರಾ ಕ್ಷೇತ್ರದ ಪ್ರಚಾರಕ್ಕೆ ಹೆಚ್ಚು ಒಲವು ನೀಡುತ್ತಿದ್ದು, ರಾಜರಾಜೇಶ್ವರಿ ನಗರದಲ್ಲಿ ಮೂರು ದಿನ ಪ್ರಚಾರ ನಡೆಸಲು ತೀರ್ಮಾನಿಸಿದ್ದಾರೆ.
ಡಿಕೆಶಿ ವಿರುದ್ಧ ಮತ್ತೆ ಡಿಸಿಎಂ ವಾಗ್ಧಾಳಿ, ಜೊತೆಯಲ್ಲಿದ್ದೇ ದ್ರೋಹ ಬಗೆದವರಿಗೆ ಏನನ್ನಬೇಕು?
ಆದರೆ ಬಿಜೆಪಿಯಲ್ಲಿ ಅಶೋಕ ಹಾಗೂ ಲಿಂಬಾವಳಿ ಚುನಾವಣಾ ಉಸ್ತುವಾರಿಗಳಾಗಿದ್ದರೂ, ನಿಜಾರ್ಥದಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಪ್ರತಿಷ್ಠೆಯಾಗಿ ಪರಿಗಣಿಸಿ ಚುನಾವಣಾ ತಂತ್ರಗಾರಿಕೆ ನಡೆಸುತ್ತಿದ್ದಾರೆ. ಡಿಕೆ ಸೋದರರ ವಿರುದ್ಧ ನೇರಾನೇರ ಹಣಾಹಣಿಗೆ ಅವರು ಮುಂದಾಗಿದ್ದು, ಕಾಂಗ್ರೆಸ್ನ ಮಾಜಿ ಕಾರ್ಪೊರೇಟರ್ಗಳು ಹಾಗೂ ಸ್ಥಳೀಯವಾಗಿ ಗಟ್ಟಿ ಮತಬ್ಯಾಂಕ್ ಹೊಂದಿರುವ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಯ ಇತರೆ ಮುಖಂಡರು ಮುನಿರತ್ನ ಜೊತೆ ಗುರುತಿಸಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದರೂ ಅಶ್ವತ್ಥ ನಾರಾಯಣ ಮಾತ್ರ ಗಟ್ಟಿಯಾಗಿ ನಿಂತು ಚುನಾವಣಾ ತಂತ್ರಗಾರಿಕೆ ನಡೆಸುತ್ತಿದ್ದಾರೆ.
ಬಿಜೆಪಿ-ಕಾಂಗ್ರೆಸ್ ನಡುವೆ ಮೀರ್ ಸಾದಿಕ್ ವಿವಾದ, ಡಿಕೆಸು-ಅಶ್ವತ್ಥ ನಾರಾಯಣ್ ಕೆಸರೆರೆಚಾಟ
ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಿದೆ. ಹೀಗಾಗಿ ಬಿಜೆಪಿಯ ಮುಂಚೂಣಿ ಒಕ್ಕಲಿಗ ನಾಯಕರಾಗಿ ಬೆಳೆಯುತ್ತಿರುವ ಅಶ್ವತ್ಥ ನಾರಾಯಣ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಳ್ಳುವುದಕ್ಕೂ ಈ ಚುನಾವಣೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಆರ್.ಆರ್. ನಗರ ಚುನಾವಣಾ ಫಲಿತಾಂಶ ಬೆಂಗಳೂರು ನಗರದ ನಾಯಕತ್ವದ ಪ್ರಶ್ನೆಯೂ ಆಗಿದೆ. ‘ಮಿತ್ರಮಂಡಳಿ’ಯ ಬಹುತೇಕ ಸದಸ್ಯರು ಅಶ್ವತ್ಥ ನಾರಾಯಣ ಪರ ಒಲವು ಹೊಂದಿರುವುದರಿಂದ ಮುನಿರತ್ನ ಗೆಲುವಿನ ವಿಚಾರದಲ್ಲಿ ಅಶ್ವತ್ಥನಾರಾಯಣ ಪ್ರಾಮಾಣಿಕ ಪ್ರಯತ್ನ ಆರಂಭಿಸಿದ್ದಾರೆ. ಡಿಕೆ ಸೋದರರಿಗೆ ಪ್ರಬಲ ಪ್ರತಿರೋಧ ತೋರುತ್ತಿದ್ದಾರೆ. ಭವಿಷ್ಯದಲ್ಲಿ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರದಲ್ಲೂ ಡಿಕೆ ಸೋದರರು ಹಾಗೂ ಅಶ್ವತ್ಥ ನಾರಾಯಣ ಜಂಗೀಕುಸ್ತಿಗೆ ಈ ಚುನಾವಣೆ ವೇದಿಕೆಯಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಈಗ ಕೇಳಿ ಬರುತ್ತಿದೆ.