ತಿರುಪತಿ ತಿಮ್ಮಪ್ಪನಿಗೆ ಅವಹೇಳನ: ಆರ್ಟಿಐ ಕಾರ್ಯಕರ್ತನ ಬಂಧನ
ತಿರುಪತಿ ವೆಂಕಟೇಶ್ವರ ದೇವರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಯಶವಂತಪುರ ಪೊಲೀಸರು ಆರ್ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಅವರನ್ನು ಮಂಗಳವಾರ ಬಂಧಿಸಿದ್ದಾರೆ.
Vijaya Karnataka Web 25 Jul 2018, 1:04 pm
ಬೆಂಗಳೂರು: ತಿರುಪತಿ ವೆಂಕಟೇಶ್ವರ ದೇವರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಯಶವಂತಪುರ ಪೊಲೀಸರು ಆರ್ಟಿಐ ಕಾರ್ಯಕರ್ತ ಟಿ.ನರಸಿಂಹಮೂರ್ತಿ ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ದೂರು ದಾಖಲಾಗಿ ಮೂರು ತಿಂಗಳಾಗುತ್ತಾ ಬಂದರೂ ಆರೋಪಿಯನ್ನು ಬಂಧಿಸದಿರುವ ಪೊಲೀಸರ ಕ್ರಮ ಪ್ರಶ್ನಿಸಿ ಬಿ.ಎಂ.ಸುರೇಶ್ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ.ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠ ಮಂಗಳವಾರ ಬೆಳಿಗ್ಗೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.
ಅಲ್ಲದೆ, ಸಂಜೆಯೊಳಗೆ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸದಿದ್ದಲ್ಲಿ ಪೊಲೀಸ್ ಇನ್ಸ್ಪೆಕ್ಟೆರ್ ಅಮಾನತುಗೊಳಿಸಲಾಗುವುದು. ಆರೋಪಿ ರಾಜಾರೋಷವಾಗಿ ಎಲ್ಲೆಡೆ ಓಡಾಡಿಕೊಂಡಿದ್ದರೂ ಏಕೆ ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.
ನ್ಯಾಯಾಲಯದ ಆದೇಶದಿಂದ ಎಚ್ಚೆತ್ತ ಪೊಲೀಸರು ಮಂಗಳವಾರ ಮಧ್ಯಾಹ್ನ ನರಸಿಂಹಮೂರ್ತಿಯನ್ನು ಬಂಧಿಸಿದ್ದು, ಸರಕಾರಿ ವಕೀಲ ವಿಜಯ್ಕುಮಾರ್ ಪಾಟೀಲ್ ಸಂಜೆ 4.30ಕ್ಕೆ ಮೆಮೊ ಮೂಲಕ ನ್ಯಾಯಪೀಠಕ್ಕೆ ಈ ವಿಷಯ ತಿಳಿಸಿದರು.
ಸಂಜೆ ಅರ್ಜಿಯನ್ನು ಇತ್ಯರ್ಥಗೊಳಿಸಿದ ನ್ಯಾಯಪೀಠ, ನರಸಿಂಹಮೂರ್ತಿ ಪರ ವಕೀಲರಿಗೆ ನಿಮ್ಮ ವಾದ ಏನೇ ಇದ್ದರೂ ಪ್ರಕರಣ ರದ್ದು ಕೋರಿ ಈಗಾಗಲೇ ಸಲ್ಲಿಸಿರುವ ಅರ್ಜಿ ವಿಚಾರಣೆ ಸಂದರ್ಭ ನ್ಯಾಯಪೀಠದ ಮುಂದೆ ಮಂಡಿಸಬಹುದು ಎಂದು ಹೇಳಿತು.
ಏ.27ರಂದು ಖಾಸಗಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ನರಸಿಂಹಮೂರ್ತಿ, ತಿರುಪತಿ ವೆಂಕಟೇಶ್ವರ ದೇವರ ಹಣೆಯ ಮೇಲಿರುವ ನಾಮ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು.
ದೂರು ದಾಖಲಾಗಿ ಮೂರು ತಿಂಗಳಾಗುತ್ತಾ ಬಂದರೂ ಆರೋಪಿಯನ್ನು ಬಂಧಿಸದಿರುವ ಪೊಲೀಸರ ಕ್ರಮ ಪ್ರಶ್ನಿಸಿ ಬಿ.ಎಂ.ಸುರೇಶ್ ಸಲ್ಲಿಸಿದ್ದ ಅರ್ಜಿ ಆಲಿಸಿದ ನ್ಯಾ.ಅರವಿಂದ್ ಕುಮಾರ್ ಅವರಿದ್ದ ನ್ಯಾಯಪೀಠ ಮಂಗಳವಾರ ಬೆಳಿಗ್ಗೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.
ಅಲ್ಲದೆ, ಸಂಜೆಯೊಳಗೆ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸದಿದ್ದಲ್ಲಿ ಪೊಲೀಸ್ ಇನ್ಸ್ಪೆಕ್ಟೆರ್ ಅಮಾನತುಗೊಳಿಸಲಾಗುವುದು. ಆರೋಪಿ ರಾಜಾರೋಷವಾಗಿ ಎಲ್ಲೆಡೆ ಓಡಾಡಿಕೊಂಡಿದ್ದರೂ ಏಕೆ ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿತ್ತು.
ನ್ಯಾಯಾಲಯದ ಆದೇಶದಿಂದ ಎಚ್ಚೆತ್ತ ಪೊಲೀಸರು ಮಂಗಳವಾರ ಮಧ್ಯಾಹ್ನ ನರಸಿಂಹಮೂರ್ತಿಯನ್ನು ಬಂಧಿಸಿದ್ದು, ಸರಕಾರಿ ವಕೀಲ ವಿಜಯ್ಕುಮಾರ್ ಪಾಟೀಲ್ ಸಂಜೆ 4.30ಕ್ಕೆ ಮೆಮೊ ಮೂಲಕ ನ್ಯಾಯಪೀಠಕ್ಕೆ ಈ ವಿಷಯ ತಿಳಿಸಿದರು.
ಸಂಜೆ ಅರ್ಜಿಯನ್ನು ಇತ್ಯರ್ಥಗೊಳಿಸಿದ ನ್ಯಾಯಪೀಠ, ನರಸಿಂಹಮೂರ್ತಿ ಪರ ವಕೀಲರಿಗೆ ನಿಮ್ಮ ವಾದ ಏನೇ ಇದ್ದರೂ ಪ್ರಕರಣ ರದ್ದು ಕೋರಿ ಈಗಾಗಲೇ ಸಲ್ಲಿಸಿರುವ ಅರ್ಜಿ ವಿಚಾರಣೆ ಸಂದರ್ಭ ನ್ಯಾಯಪೀಠದ ಮುಂದೆ ಮಂಡಿಸಬಹುದು ಎಂದು ಹೇಳಿತು.
ಏ.27ರಂದು ಖಾಸಗಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ನರಸಿಂಹಮೂರ್ತಿ, ತಿರುಪತಿ ವೆಂಕಟೇಶ್ವರ ದೇವರ ಹಣೆಯ ಮೇಲಿರುವ ನಾಮ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು.