ಆ್ಯಪ್ನಗರ

ಗುರುವಾರ ಸಾರಾ ಮಹೇಶ್ ರಾಜೀನಾಮೆ ವಾಪಸ್: ಎಚ್‌ಡಿ ದೇವೇಗೌಡ

“ಸಾರಾ ಮಹೇಶ್ ರಾಜೀನಾಮೆ ನೀಡಿದ್ದು ಸತ್ಯ. ಸ್ಪೀಕರ್‌ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ಆದರೆ ಸ್ಪೀಕರ್ ಅವ್ರು ಈ ಪಂಥಾಹ್ವಾನ ಯಾಕೆ ಅಂತ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯುತ್ತೇನೆ ಅಂತ ಮಹೇಶ್ ಹೇಳಿದ್ದಾರೆ,” -ಎಚ್‌ಡಿ ದೇವೇಗೌಡ.

Vijaya Karnataka Web 16 Oct 2019, 5:50 pm

ಬೆಂಗಳೂರು: ಬುಧವಾರ ಅಚ್ಚರಿಯ ರೀತಿಯಲ್ಲಿ ರಾಜೀನಾಮೆ ನೀಡಿರುವ ಕೆಆರ್‌ ನಗರ ಶಾಸಕ ಸಾರಾ ಮಹೇಶ್‌ ಗುರುವಾರ ರಾಜೀನಾಮೆ ಹಿಂಪಡೆಯಲಿದ್ದಾರೆ ಎಂಬುದಾಗಿ ಜೆಡಿಎಸ್‌ ವರಿಷ್ಠ ಎಚ್‌ಡಿ ದೇವೇಗೌಡ ಹೇಳಿದರು
Vijaya Karnataka Web SaRaMaheshHDDeveGowda


ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿಶ್ವನಾಥ್ ಮತ್ತು ಸಾರಾ ಮಹೇಶ್ ಮಾತುಗಳನ್ನು ಕೇಳಿದ್ದೇನೆ. ಇವರ ಕೆಟ್ಟ ರಾಜಕಾರಣದಲ್ಲಿ ನಾನು ಭಾಗಿಯಾಗುವುದಿಲ್ಲ,” ಎಂದು ಪ್ರತಿಕ್ರಿಯಿಸಿದರು.

“ಸಾರಾ ಮಹೇಶ್ ರಾಜೀನಾಮೆ ನೀಡಿದ್ದು ಸತ್ಯ. ಸ್ಪೀಕರ್‌ ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಕೊಟ್ಟಿದ್ದಾರೆ. ಆದರೆ ಸ್ಪೀಕರ್ ಅವ್ರು ಈ ಪಂಥಾಹ್ವಾನ ಯಾಕೆ ಅಂತ ಹೇಳಿದ್ದಾರೆ. ಹೀಗಾಗಿ ರಾಜೀನಾಮೆ ವಾಪಸ್ ಪಡೆಯುತ್ತೇನೆ ಅಂತ ಸಾರಾ ಮಹೇಶ್ ಹೇಳಿದ್ದಾರೆ,” ಎಂಬುದಾಗಿ ಅವರು ವಿವರ ನೀಡಿದರು.

ಚಾಮುಂಡೇಶ್ವರಿ ತಾಯಿ ಎದುರು ಪ್ರಮಾಣ: ವಿಶ್ವನಾಥ್‌ ಸವಾಲು ಸ್ವೀಕರಿಸಿದ ಸಾ.ರಾ. ಮಹೇಶ್‌

ನಾನು ವಿಶ್ವನಾಥ್ ಬಗ್ಗೆ ಮಾತಾಡುವುದಿಲ್ಲ ಎಂದು ಹೇಳಿರುವ ದೇವೇಗೌಡರು, “ಆಣೆ - ಸತ್ಯ - ಪ್ರಮಾಣ ಇವೆಲ್ಲ ಯಾಕೆ. ಆವೇಶದಿಂದ ಎಲ್ಲರೂ ಮಾತನಾಡುತ್ತಾರೆ. ಇದರಿಂದ ಏನು ಪ್ರಯೋಜನ? ನಾಳೆ ಸಾರಾ ಮಹೇಶ್ ರಾಜೀನಾಮೆ ವಾಪಸ್ ಪಡೆಯುತ್ತಾರೆ,” ಎಂದು ಮಾಹಿತಿ ನೀಡಿದರು.

ಚಾಮುಂಡಿ ಬೆಟ್ಟಕ್ಕೆ ಬರೋಕೆ ನಾನ್ ರೆಡಿ, ನೀವೂ ಬರ್ತೀರಾ? ಸಾರಾ ಮಹೇಶ್‌ಗೆ ವಿಶ್ವನಾಥ್ ಸವಾಲ್

ಸಾರಾ ಮಹೇಶ್ ಜೊತೆ ನಾನೇ ಮಾತಾಡಿದ್ದೇನೆ. ಪರಸ್ಪರ ಆರೋಪ ಪ್ರತ್ಯಾರೋಪ ಮಾಡ್ತಿದ್ದಾರೆ. ಅವರ ಆರೋಪದಿಂದ ನೊಂದು ಮಹೇಶ್ ರಾಜೀನಾಮೆ ನೀಡಿದ್ದಾರೆ. ಅದು ನಿಜ. ದೇವರ ಮುಂದೆ ಹೋಗುವ ಮಾತನ್ನಾಡ್ತಿದ್ದಾರೆ. ಸ್ಪೀಕರ್ ಅವರು ಊರಲ್ಲಿ ಇಲ್ಲ, ವಾಪಸ್ ಪಡೆಯಿರಿ ಎಂಬುದಾಗಿ ಹೇಳಿದ್ದಾರೆ. ಹೀಗಾಗಿ ನಾಳೆ ವಾಪಸ್ ಪಡೆಯುತ್ತಾರೆ ಎಂಬುದಾಗಿ ದೇವೇಗೌಡರು ವಿವರಿಸಿದರು..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ