ಆ್ಯಪ್ನಗರ

ಸಮರ್ಥ ಭಾರತ ಸಂಸ್ಥೆಯಿಂದ ರಾಜ್ಯಾದ್ಯಂತ 14 ದಿನ ಅಭಿಯಾನ: ಜ.12ರಿಂದ ಬಿ ಗುಡ್‌-ಡು ಗುಡ್‌!

ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಸಾರುವ 'ಬಿ ಗುಡ್‌, ಡು ಗುಡ್‌-2021' ಯುವ ಅಭಿಯಾನ ಜ.12ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಉದ್ಯೋಗಿಗಳೂ ಸೇರಿದಂತೆ ಯುವಜನರು ತಮ್ಮ ಜೀವನದಲ್ಲಿ ಉತ್ತಮ ಗುಣ ಸ್ವಭಾವ ಮೈಗೂಡಿಸಿ ಕೊಳ್ಳುವುದು ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

Vijaya Karnataka Web 5 Jan 2021, 8:12 am
ಬೆಂಗಳೂರು: ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆ ಪೋಷಿಸುವ 'ಉತ್ತಮನಾಗು-ಉಪಕಾರಿಯಾಗು' ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಸಾರುವ 'ಬಿ ಗುಡ್‌, ಡು ಗುಡ್‌-2021' ಯುವ ಅಭಿಯಾನ ಜ.12ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ.
Vijaya Karnataka Web ಸ್ವಾಮಿ ವಿವೇಕಾನಂದ


ಸಮರ್ಥ ಭಾರತ ಸಂಸ್ಥೆ ಆಯೋಜಿಸಿರುವ ಈ ಅಭಿಯಾನಕ್ಕೆ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಮತ್ತು ರಾಷ್ಟೀಯ ಯುವ ದಿನದಂದು ಚಾಲನೆ ದೊರೆಯಲಿದೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಉದ್ಯೋಗಿಗಳೂ ಸೇರಿದಂತೆ ಯುವಜನರು ತಮ್ಮ ಜೀವನದಲ್ಲಿ ಉತ್ತಮ ಗುಣ ಸ್ವಭಾವ ಮೈಗೂಡಿಸಿ ಕೊಳ್ಳುವುದು ಮತ್ತು ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ಯುವಕರಿಗೆ ಯಾರು ಮಾದರಿ ವ್ಯಕ್ತಿಗಳಾಗಿರಬೇಕು?

ಈ ಬಾರಿಯ ಅಭಿಯಾನವು 'ಆತ್ಮನಿರ್ಭರ ಭಾರತಕ್ಕಾಗಿ ನಾನು' ಎಂಬ ಧ್ಯೇಯ ಹೊಂದಿದ್ದು, ಸ್ವಾವಲಂಬನೆ, ಸ್ವಾಭಿಮಾನ ಮತ್ತು ಸ್ವದೇಶಿ ಎಂಬ ಮೂರು ವಿಷಯಗಳಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ವಿಳಾಸ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್‌ ಸೊಸೈಟಿ, ನೃಪತುಂಗ ರಸ್ತೆ, ಕೆ.ಆರ್‌.ವೃತ್ತದ ಬಳಿ, ಬೆಂಗಳೂರು- 560001 ಈ ವಿಳಾಸಕ್ಕೆ ಕಳುಹಿಸಿಕೊಡಬಹುದು. ಹೆಚ್ಚಿನ ಮಾಹಿತಿಗೆ ಮೊ: 9483150527 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 9880621824, 9731264009 ಸಂಪರ್ಕಿಸಬಹುದು.
ರಾಷ್ಟ್ರೀಯ ಯುವ ದಿನ : ಇಲ್ಲಿವೆ ಜ್ಞಾನದ ದೀವಿಗೆ ಹಚ್ಚಿದ ವೀರ ಸನ್ಯಾಸಿಯ ಸಂದೇಶಗಳು

ಜ.12ರಿಂದ 26ತನಕ ಅಭಿಯಾನದ ನಿಮಿತ್ತ ಪ್ರತಿದಿನ ಸಂಜೆ 6.00 ಕ್ಕೆ ಸಮರ್ಥ ಭಾರತ ಫೇಸ್‌ಬುಕ್‌ ಮೂಲಕ ಆನ್‌ಲೈನ್‌ ಉಪನ್ಯಾಸ ಕಾರ‍್ಯಕ್ರಮಗಳು ನಡೆಯಲಿವೆ. ಶಿಕ್ಷಣ ತಜ್ಞರು, ಚಿಂತಕರು, ಲೇಖಕರು, ಯುವಸಾಧಕರು, ಸಾಮಾಜಿಕ ಕಾರ‍್ಯಕರ್ತರು ಸ್ವಾಮಿ ವಿವೇಕಾನಂದರ ಜೀವನ, ವಿಚಾರಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ