ಆ್ಯಪ್ನಗರ

ಸಾವರ್ಕರ್‌ ವಿವಾದಾತ್ಮಕ ವ್ಯಕ್ತಿ: ಅವರಿಗೆ ಭಾರತ ರತ್ನ ನೀಡೋದು ಸರಿಯಲ್ಲ ಎಂದ ಕೆಪಿಸಿಸಿ ಅಧ್ಯಕ್ಷರು

ವಿನಾಯಕ ದಾಮೋದರ್‌ ಸಾವರ್ಕರ್‌ಗೆ ಭಾರತ ರತ್ನ ನೀಡಲು ಮುಂದಾಗಿರುವ ಬಿಜೆಪಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಮಹಾರಾಷ್ಟ್ರಕ್ಕೆ ನೀರು ಬಿಡುವ ಬಗ್ಗೆ ಸಿಎಂ ಭರವಸೆ ನೀಡಿದ್ದಕ್ಕೂ ಕೆಪಿಸಿಸಿ ಅಧ್ಯಕ್ಷರು ಸಿಎಂ ವಿರುದ್ಧ ಗರಂ ಆಗಿದ್ದಾರೆ.

Vijaya Karnataka Web 18 Oct 2019, 4:56 pm
ಬೆಂಗಳೂರು: ಸಾವರ್ಕರ್‌ ವಿವಾದಾತ್ಮಕ ವ್ಯಕ್ತಿ. ಗಾಂಧೀಜಿ ಹತ್ಯೆಗೆ ಅವರು ಪ್ರಯತ್ನ ಮಾಡಿದ್ದರು. ಗಾಂಧಿ ಕೊಂದ ಗೋಡ್ಸೆಗೆ ಸಹಾಯ ಮಾಡಿದ್ದರು. ಅಲ್ಲದೆ, ಬ್ರಿಟಿಷರ ವಿರುದ್ಧ ಸಾವರ್ಕರ್‌ ಹೋರಾಡಿದವರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Vijaya Karnataka Web dinesh gundurao


ಸಾವರ್ಕರ್‌ಗೆ ಭಾರತ ರತ್ನ ನೀಡುವ ಬಗ್ಗೆ ಬಿಜೆಪಿ ಶಿಫಾರಸು ಮಾಡುವುದಾಗಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದ್ದು, ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಾವರ್ಕರ್‌ಗೆ ಭಾರತ ರತ್ನ ಕೊಡುವುದಾದರೆ ಗೋಡ್ಸೆಗೇಕೆ ಕೊಡಬಾರದು: ಕಾಂಗ್ರೆಸ್ ನಾಯಕ ಮನೀಶ್‌ ತಿವಾರಿ ವ್ಯಂಗ್ಯ

ಗಾಂಧಿಜೀ ಹತ್ಯೆಯ ಸಂಚಿನಲ್ಲಿ ಸಾವರ್ಕರ್‌ ಕೂಡ ಬಹಳ ಹತ್ತಿರದಲ್ಲಿದ್ರು. ಇವರ ಪಾತ್ರ ಪ್ರಶ್ನಾತೀತ ಅಲ್ಲ ಅಂತಾ ಹೇಳಲು ಸಾಧ್ಯವಿಲ್ಲ. ಅವರಿಗೆ ಭಾರತರತ್ನ ಕೊಡೋದು ಸರಿಯಲ್ಲ. ಅವರಿಗೆ ಭಾರತರತ್ನ ಕೊಟ್ರೆ ಆ ಪ್ರಶಸ್ತಿಗೆ ಮೌಲ್ಯ ಕಡಿಮೆಯಾಗುತ್ತೆ. ಹಿಂದೆ ಭಾರತ ರತ್ನ ತೆಗದುಕೊಂಡವವರಿಗೆ ಇದು ಅವಮಾನ. ಗಾಂಧಿ ಕೊಂದ ಗೋಡ್ಸೆ ಸಮರ್ಥನೆ ಮಾಡಿಕೊಳ್ಳುವವರು ಇವರು ಎಂದೂ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ರಣಹೇಡಿಗಳಿಗೆ ಭಾರತ ರತ್ನ ಕೊಡುತ್ತಿರುವ ಸರ್ಕಾರ : ಕಿಡಿ ಕಾರಿದ ಕನ್ಹಯ್ಯ ಕುಮಾರ್‌

ಇನ್ನೊಂದೆಡೆ, ಮಹಾರಾಷ್ಟ್ರಕ್ಕೆ ನೀರು ಬಿಡುಗಡೆ ಮಾಡುವ ಬಗ್ಗೆ ಸಿಎಂ ಹೇಳಿಕೆ ವಿಚಾರದ ಬಗ್ಗೆಯೂ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಹೀಗೆ ಹೇಳಬಾರದಿತ್ತು. ಏಕಾಏಕಿ ಇಂತಹ ಘೋಷಣೆ ಮಾಡೋದು ಸರಿಯಲ್ಲ. ಇದು ಕೇವಲ ಚುನಾವಣಾ ಗಿಮಿಕ್. ಇಂತಹ ವಿಚಾರವನ್ನ ಚರ್ಚಿಸಿ ತೀರ್ಮಾನ ಮಾಡಬೇಕು. ಆದ್ರೆ ಏಕಾಏಕಿ ಸಿಎಂ ಹೇಳಿದ್ದು ಚುನಾವಣೆಗೋಸ್ಕರ ಅಷ್ಟೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಿಎಂ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನು ಜೀವನದಲ್ಲಿ ಎಂದೂ ಚುನಾವಣಾ ಗಿಮಿಕ್ ಮಾಡಿಲ್ಲ: ಸಿದ್ದರಾಮಯ್ಯಗೆ ಸಿಎಂ ತಿರುಗೇಟು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ