ಆ್ಯಪ್ನಗರ

ಮುಂಬಡ್ತಿ, ಹಿಂಬಡ್ತಿ: ಇಂದು ಸುಪ್ರೀಂಕೋರ್ಟ್‌ ತೀರ್ಪು ನಿರೀಕ್ಷೆ

ರಾಜ್ಯ ಸರಕಾರದ ನಾನಾ ಇಲಾಖೆಗಳ ಪರಿಶಿಷ್ಟ ಅಧಿಕಾರಿ ವರ್ಗದ ಬಡ್ತಿ ಮೀಸಲು ಸಂಬಂಧ ಬಹುನಿರೀಕ್ಷಿತ ಪ್ರಕರಣ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತಿದ್ದು, ಕೋರ್ಟ್‌ ತೀರ್ಮಾನ ಕುರಿತ ಕುತೂಹಲ ಹೆಚ್ಚಿದೆ.

Vijaya Karnataka 28 Aug 2018, 5:30 am
ಬೆಂಗಳೂರು: ರಾಜ್ಯ ಸರಕಾರದ ನಾನಾ ಇಲಾಖೆಗಳ ಪರಿಶಿಷ್ಟ ಅಧಿಕಾರಿ ವರ್ಗದ ಬಡ್ತಿ ಮೀಸಲು ಸಂಬಂಧ ಬಹುನಿರೀಕ್ಷಿತ ಪ್ರಕರಣ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತಿದ್ದು, ಕೋರ್ಟ್‌ ತೀರ್ಮಾನ ಕುರಿತ ಕುತೂಹಲ ಹೆಚ್ಚಿದೆ.
Vijaya Karnataka Web ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌


ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರ ವರ್ಗದ ಮುಂಬಡ್ತಿ ಮೀಸಲು ಸೌಲಭ್ಯವನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್‌ ಕಳೆದ ವರ್ಷದ ಫೆಬ್ರವರಿಯಲ್ಲಿ ತೀರ್ಪು ನೀಡಿತ್ತು. ಈ ತೀರ್ಪಿನಿಂದ ಪರಿಶಿಷ್ಟರಿಗೆ ಹಿಂಬಡ್ತಿಯಾಗುವುದನ್ನು ತಪ್ಪಿಸಲು ರಾಜ್ಯ ಸರಕಾರ ಹೊಸ ಕಾಯಿದೆ ರೂಪಿಸಿದೆ. ರಾಷ್ಟ್ರಪತಿಗಳ ಒಪ್ಪಿಗೆ ಪಡೆದಿರುವ ಈ ಕಾಯಿದೆ ಪಾಲನೆ ಮಾಡುವುದೋ ಅಥವಾ ಕೋರ್ಟ್‌ ತೀರ್ಪು ಪಾಲನೆಯೋ ಎಂಬ ಗೊಂದಲದಲ್ಲಿ ಎಲ್ಲ ಇಲಾಖೆಗಳಲ್ಲಿ ಮುಂಬಡ್ತಿ ಮತ್ತು ಹಿಂಬಡ್ತಿಗಳನ್ನು ತಡೆಹಿಡಿಯಲಾಗಿದ್ದು, ಕೋರ್ಟ್‌ ಆದೇಶದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಪ್ರಕರಣದಲ್ಲಿ ಅಂತಿಮ ತೀರ್ಪು ನೀಡಬೇಕು ಅಥವಾ ನೂತನ ಕಾನೂನು ಜಾರಿಗೆ ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಸರಕಾರ ಕಳೆದ ಆ.14 ರಂದು ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ಅನ್ನು ಕೋರಿತ್ತು. ಆದರೆ, ಮುಂದಿನ ಆದೇಶದ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚಿಸಿ ಪ್ರಕರಣವನ್ನು ಆ.28ಕ್ಕೆ ಮುಂದೂಡಲಾಗಿತ್ತು. ಅಂತೆಯೇ, ಪ್ರಕರಣ ಮಂಗಳವಾರ ವಿಚಾರಣೆಗೆ ಬರುತ್ತಿದೆ. ಮುಂಬಡ್ತಿ ಮತ್ತು ಹಿಂಬಡ್ತಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್‌ ನೀಡಬಹುದಾದ ತೀರ್ಮಾನವನ್ನು ರಾಜ್ಯದ ಇಡೀ ನೌಕರಶಾಹಿ ಕುತೂಹಲದಿಂದ ಎದುರು ನೋಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ