ಆ್ಯಪ್ನಗರ

ಶಾಲಾ ವಾಹನ ಮಗುಚಿ ಎರಡು ಮಕ್ಕಳ ಸಾವು

ಮಕ್ಕಳನ್ನು ಕರೆದೊಯ್ಯುವ ವಾಹನಗಳು ಅಪಘಾತಕ್ಕೀಡಾಗುವುದು ಇತ್ತೀಚೆಗೆ ಹೆಚ್ಚುತ್ತಿದ್ದು, ತರೀಕೆರೆ ತಾಲೂಕು ಅಜ್ಜಂಪುರದಲ್ಲಿ ಶಾಲಾ ಬಸ್ ಮಗುಚಿ ಬಿದ್ದು ಎಲ್‌ಕೆಜಿ ಮಗು ಪ್ರೀತಂ ಸ್ಥಳದಲ್ಲೇ ಮೃತಪಟ್ಟಿದೆ.

ವಿಕ ಸುದ್ದಿಲೋಕ 4 Aug 2016, 7:22 pm
ಚಿಕ್ಕಮಗಳೂರು: ಮಕ್ಕಳನ್ನು ಕರೆದೊಯ್ಯುವ ವಾಹನಗಳು ಅಪಘಾತಕ್ಕೀಡಾಗುವುದು ಇತ್ತೀಚೆಗೆ ಹೆಚ್ಚುತ್ತಿದ್ದು, ತರೀಕೆರೆ ತಾಲೂಕು ಅಜ್ಜಂಪುರದಲ್ಲಿ ಶಾಲಾ ಬಸ್ ಮಗುಚಿ ಬಿದ್ದು ಎಲ್‌ಕೆಜಿಯ ಪ್ರೀತಂ ಹಾಗೂ ಛಾಯಾ ಎಂಬ ಮಗು ಮೃತಪಟ್ಟಿವೆ. ಮತ್ತೊಬ್ಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.
Vijaya Karnataka Web school bus accident lkg kid dies
ಶಾಲಾ ವಾಹನ ಮಗುಚಿ ಎರಡು ಮಕ್ಕಳ ಸಾವು


ಅಜ್ಜಂಪುರ ಸಮೀಪದ ನಾರಣಾಪುರದಲ್ಲಿ ಈ ಘಟನೆ ನಡೆದಿದೆ. ಹಿರೇನಲ್ಲೂರಿನ ಪ್ರಮೋದ್, ಪೂರ್ಣಿಮಾ ದಂಪತಿ ಪುತ್ರ ಪ್ರೀತಂ ಮೃತಪಟ್ಟ ಬಾಲಕ. ಗಂಭೀರವಾಗಿ ಗಾಯಗೊಂಡಿದ್ದ ಛಾಯಾಳನ್ನು ಶಿವಮೊಗ್ಗ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಅಸುನೀಗಿದ್ದಾಳೆ.

ಘಟನೆಯಲ್ಲಿ ಒಟ್ಟು ಎಂಟು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅಜ್ಜಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಕ್ಕಳನ್ನು ಸಂಜೆ ಮನೆಗೆ ಬಿಡಲು ಹೋಗುತ್ತಿದ್ದ ಅಜ್ಜಂಪುರದ ಸಾಂದೀಪನಿ ಶಾಲೆಯ ಬಸ್‌, ಬೇರೊಂದು ವಾಹನಕ್ಕೆ ದಾರಿ ಬಿಡಲು ಹೋಗಿ, ಪಕ್ಕಕ್ಕೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ