ಆ್ಯಪ್ನಗರ

ಎಸ್‌ಡಿಎ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಕ್ಕೆ ಅವಮಾನ

ಎಸ್‌ಡಿಎ ಪರೀಕ್ಷೆಗೆ ಕೆಪಿಎಸ್‌ಸಿ ರೂಪಿಸಿದ್ದ ಸಾಮಾನ್ಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಭಾಷೆಯನ್ನು ಅವಹೇಳನಕರವಾಗಿ ಬಳಸಿಕೊಳ್ಳಲಾಗಿದೆ ಎಂಬ ಆರೋಪ ...

Vijaya Karnataka 18 Jun 2019, 5:00 am
ಬೆಂಗಳೂರು: ಎಸ್‌ಡಿಎ ಪರೀಕ್ಷೆಗೆ ಕೆಪಿಎಸ್‌ಸಿ ರೂಪಿಸಿದ್ದ ಸಾಮಾನ್ಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಭಾಷೆಯನ್ನು ಅವಹೇಳನಕರವಾಗಿ ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.
Vijaya Karnataka Web sda question paper kannda
ಎಸ್‌ಡಿಎ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಕ್ಕೆ ಅವಮಾನ


ಕಳೆದ ಭಾನುವಾರ ನಡೆದ ಎಸ್‌ಡಿಎ ಪರೀಕ್ಷೆ ಬಳಿಕ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡಕ್ಕೆ ಸಂಬಂಧಪಟ್ಟಂತೆ ಬಾಲಿಶವಾದ ಪ್ರಶ್ನೆ ಕೇಳಿರುವುದು ಬೆಳಕಿಗೆ ಬಂದಿದೆ. ಗದ್ಯ ಭಾಗವನ್ನು ಓದಿ ಅರ್ಥ ಗ್ರಹಿಸಿ ಉತ್ತರಿಸುವ ವಿಭಾಗದಲ್ಲಿ ಪ್ರಶ್ನೆಗಳು ಹಾಗೂ ಬಹು ಆಯ್ಕೆಯ ಉತ್ತರಕ್ಕೆ ಒಂದಕ್ಕೊಂದು ತಾಳೆಯೇ ಆಗದಂತೆ ಪ್ರಶ್ನೆ ತಯಾರಿಸಲಾಗಿತ್ತು. ಈ ಬಗ್ಗೆ ಪರೀಕ್ಷಾರ್ಥಿಗಳಿಂದ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

ಗದ್ಯ ಭಾಗವಂತೂ ಓದುವುದಕ್ಕೆ ಸಾಧ್ಯವಿಲ್ಲದ ರೀತಿ ರೂಪಿಸಲಾಗಿದೆ. ಅಲ್ಪ ಪ್ರಾಣ, ಮಹಾಪ್ರಾಣ, ಪೂರ್ಣ ವಿರಾಮಗಳ ಜತೆಗೆ ವಾಕ್ಯದ ಮಧ್ಯೆ ಸಂಪರ್ಕವೇ ಇಲ್ಲವಾಗಿದೆ. ಕನ್ನಡ ಭಾಷೆ ಶಾಸ್ತ್ರೀಯವೇ, ಅಲ್ಲವೇ ? ಎಂಬುದನ್ನು ನಿರ್ಧರಿಸುವುದಕ್ಕೆ ಈ ಗದ್ಯ ಭಾಗದಲ್ಲಿ ಸಾಧ್ಯವಾಗಿಲ್ಲ. ಇನ್ನು ಬೊಂಬಾಯಿ ಬೋಂಡ ಎಂದರೇನು ಎಂಬ ಪ್ರಶ್ನೆಯನ್ನು ಕೇಳುವ ಮೂಲಕ ಉದ್ಯೋಗಾಂಕ್ಷಿಗಳ ಕನ್ನಡ ಸಾಮಾನ್ಯ ಜ್ಞಾನವನ್ನು ಭಾರಿ ಪ್ರಮಾಣದಲ್ಲಿ ಪರೀಕ್ಷೆಗೆ ಒಡ್ಡಲಾಗಿದೆ. ಬಹುತೇಕ ಎಲ್ಲ ಬಹು ಆಯ್ಕೆಯ ಪ್ರಶ್ನೆಗಳು ಗೊಂದಲದಿಂದ ಕೂಡಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ