ಆ್ಯಪ್ನಗರ

ವ್ಯಸನದ ಬಗ್ಗೆ ಅಸಹ್ಯ ಭಾವನೆ ಹೊಂದಿ

ನೀವು ಪ್ರಯಾಣ ಮಾಡುವ ವಿಮಾನದ ಪೈಲೆಟ್‌ ಅಥವಾ ನಿಮಗೆ ಸರ್ಜರಿ ಮಾಡುವ ವೈದ್ಯ ಗಾಂಜಾ ಸೇವಿಸಿಕೊಂಡು ಬಂದಿದ್ದರೆ ನಿಮಗೆ ಭಯ ಮತ್ತು ಅಸಹ್ಯವಾಗುವುದಿಲ್ಲವೇ? ಅದೇ ರೀತಿ ಗಾಂಜಾ ವ್ಯಸನದ ಬಗ್ಗೆ ಅಸಹ್ಯ ಭಾವನೆ ಹೊಂದಲು ಶುರುಮಾಡಿದರೆ , ಅದರ ಬಳಕೆಯನ್ನು ತಡೆಗಟ್ಟಬಹುದು.

Vijaya Karnataka 3 Feb 2019, 5:00 am
ಬೆಂಗಳೂರು :ನೀವು ಪ್ರಯಾಣ ಮಾಡುವ ವಿಮಾನದ ಪೈಲೆಟ್‌ ಅಥವಾ ನಿಮಗೆ ಸರ್ಜರಿ ಮಾಡುವ ವೈದ್ಯ ಗಾಂಜಾ ಸೇವಿಸಿಕೊಂಡು ಬಂದಿದ್ದರೆ ನಿಮಗೆ ಭಯ ಮತ್ತು ಅಸಹ್ಯವಾಗುವುದಿಲ್ಲವೇ? ಅದೇ ರೀತಿ ಗಾಂಜಾ ವ್ಯಸನದ ಬಗ್ಗೆ ಅಸಹ್ಯ ಭಾವನೆ ಹೊಂದಲು ಶುರುಮಾಡಿದರೆ , ಅದರ ಬಳಕೆಯನ್ನು ತಡೆಗಟ್ಟಬಹುದು.
Vijaya Karnataka Web sdguru jaggi vasudev suggest to students
ವ್ಯಸನದ ಬಗ್ಗೆ ಅಸಹ್ಯ ಭಾವನೆ ಹೊಂದಿ


ಶನಿವಾರ ಆರಂಭವಾದ ಎರಡು ದಿನಗಳ 'ಅಂಡರ್‌ 25 ಸಮ್ಮಿಟ್‌' ನಲ್ಲಿ ಈಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌, ಯುವಕರು ಕೇಳಿದ ಪ್ರಶ್ನೆಗಳಿಗೆ ಮೇಲಿನ ಉತ್ತರ ನೀಡಿದರು.

ಜೀವನದಲ್ಲಿ ಗುರಿ ಸಾಧಿಸುವುದು ಹೇಗೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ''ಎಲ್ಲೋ ಒಂದು ಕಡೆ ಗಿರಕಿ ಹೊಡೆಯದೇ, ಧಕ್ಷತೆಯಿಂದ ಕೆಲಸ ಮಾಡಿದರೆ ಗುರಿ ತಲುಪಬಹುದು,''ಎಂದು ಕಿವಿ ಮಾತು ಹೇಳಿದರು.

''ಸಾಮಾನ್ಯವಾಗಿ ಕನಸು ನನಸಾಗಲಿ ಎಂದು ಬಯಸುತ್ತಾರೆ. ಆದರೆ ನಾನು ಕನಸು ನನಸಾಗದಿರಲಿ ಎಂದು ಆಶಿಸುತ್ತೇನೆ. ನಿರಾಸೆಯಾದಾಗ, ಕನಸಗಿಂತ ಮಿಗಿಲಾದದ್ದು ಜೀವನದಲ್ಲಿ ನಡೆಯುತ್ತದೆ,'' ಎಂದರು.

ದೇಶದ ಕಡೆ ಗಮನವಿಲ್ಲ

''ಹಿಂದಿನ ಪೀಳಿಗೆಯ ಜನ ವೈಯಕ್ತಿಕ ಜೀವನಕ್ಕಿಂತ ದೇಶದ ಒಳಿತಿಗೆ ಯೋಚಿಸುತ್ತಿದ್ದರು. ಸಮುದಾಯ ಹಾಗೂ ದೇಶಕ್ಕೆ ಸೇವೆ ನೀಡುವ ಕುರಿತು ಚಿಂತಿಸುತ್ತಿದ್ದರು. ಈಗಿನ ಯುವಕರ ಯೋಚನೆ ಆ ರೀತಿ ಇಲ್ಲ. ಹೀಗಾಗಿ ರಾಷ್ಟ್ರದ ಒಳಿತಿಗೆ ಏನಾದರೂ ಮಾಡುವತ್ತ ಯೋಚಿಸಬೇಕು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ