ಆ್ಯಪ್ನಗರ

ಮಂಡ್ಯ ಲೋಕಸಭೆ ಮತ್ತಷ್ಟು ಗೊಂದಲ ಮತ್ತೆ ಸ್ಪರ್ಧೆಗೆ ಶಿವರಾಮೇಗೌಡ ಒಲವು

ದೇವೇಗೌಡರ ಕುಟುಂಬದ 3ನೇ ತಲೆಮಾರಿನ ನಿಖಿಲ್‌ ಕುಮಾರಸ್ವಾಮಿ ರಾಜಕಾರಣ ಪ್ರವೇಶಕ್ಕೆ ತೊಡಕುಗಳು ಹೆಚ್ಚುತ್ತಿದ್ದು, ಮಂಡ್ಯ ಲೋಕಸಭೆ ಕ್ಷೇತ್ರದಿಂದ ಮರುಸ್ಪರ್ಧೆಗೆ ಹಾಲಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹಕ್ಕು ಪ್ರತಿಪಾದಿಸಿದ್ದಾರೆ.

Vijaya Karnataka 3 Feb 2019, 5:00 am
ಬೆಂಗಳೂರು : ದೇವೇಗೌಡರ ಕುಟುಂಬದ 3ನೇ ತಲೆಮಾರಿನ ನಿಖಿಲ್‌ ಕುಮಾರಸ್ವಾಮಿ ರಾಜಕಾರಣ ಪ್ರವೇಶಕ್ಕೆ ತೊಡಕುಗಳು ಹೆಚ್ಚುತ್ತಿದ್ದು, ಮಂಡ್ಯ ಲೋಕಸಭೆ ಕ್ಷೇತ್ರದಿಂದ ಮರುಸ್ಪರ್ಧೆಗೆ ಹಾಲಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಹಕ್ಕು ಪ್ರತಿಪಾದಿಸಿದ್ದಾರೆ.
Vijaya Karnataka Web shivramegowda intrested to contest mandya again
ಮಂಡ್ಯ ಲೋಕಸಭೆ ಮತ್ತಷ್ಟು ಗೊಂದಲ ಮತ್ತೆ ಸ್ಪರ್ಧೆಗೆ ಶಿವರಾಮೇಗೌಡ ಒಲವು


''ಮುಂದಿನ ಸಾರ್ವತ್ರಿಕ ಚುನಾವಣೆಗೆ ಮಂಡ್ಯದಿಂದ ನಾನೇ ಜೆಡಿಎಸ್‌ ಅಭ್ಯರ್ಥಿ. ಕೇವಲ ಆರು ತಿಂಗಳ ಅಧಿಕಾರ ನನಗೆ ಸಾಕಾ? ಮತ್ತೆ ಟಿಕೆಟ್‌ ಕೊಡಿ ಎಂದು ಕೇಳುತ್ತೇನೆ'' ಎಂದು ಅವರು ಮಂಡ್ಯದಲ್ಲಿ ಶನಿವಾರ ಹೇಳಿದ್ದಾರೆ.

ಸುಮಲತಾ ಅಂಬರೀಶ್‌ ಅವರನ್ನು ಅಭ್ಯರ್ಥಿಯಾಗಿಸಲು 'ಕೈ' ಪಕ್ಷದ ನಾಯಕರು ತಂತ್ರಗಾರಿಕೆ ಪ್ರಯೋಗಿಸುತ್ತಿರುವ ಮಧ್ಯೆಯೇ, ಜೆಡಿಎಸ್‌ ಹಾಲಿ ಸಂಸದರ ಈ ಹಕ್ಕು ಪ್ರತಿಪಾದನೆ ಜೆಡಿಎಸ್‌ ವರಿಷ್ಠರ ಪಾಲಿಗೆ ತಲೆನೋವು ಸೃಷ್ಟಿಸುವ ಸಾಧ್ಯತೆಯಿದೆ.


ನಿಖಿಲ್‌ ಸ್ಪರ್ಧಿಸಿದರೆ ಸ್ವಾಗತಿಸುವೆ ಮತ್ತು ಸೀಟು ಬಿಡಲು ಸಿದ್ಧ. ಆದರೆ, ಆರು ತಿಂಗಳ ಅಧಿಕಾರ ನನಗೆ ಸಾಕಾ? ಸುಮಲತಾ ಸ್ಪರ್ಧೆ ಬಗ್ಗೆ ನಾನೇನೂ ಮಾತನಾಡಲ್ಲ.

-ಎಲ್‌.ಆರ್‌.ಶಿವರಾಮೇಗೌಡ, ಸಂಸದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ