ಆರ್.ತುಳಸಿಕುಮಾರ್ ಬೆಂಗಳೂರು
ಮುಂಗಾರು ಮಳೆ ವಿಳಂಬದ ಬೆನ್ನಲ್ಲೇ ಬಿತ್ತನೆ ಹಾಗೂ ಇಳುವರಿ ಕುಸಿತದ ಆತಂಕ ಎದುರಾಗಿರುವುದು ರೈತರ ದುಗುಡವನ್ನು ಇನ್ನಷ್ಟು ಹೆಚ್ಚಿಸಿದೆ.
ಜೂನ್ ಮೂರನೇ ವಾರ ಕಳೆದರೂ ವಾಡಿಕೆ ಮಳೆ ಕಣ್ಣಾಮುಚ್ಚಾಲೆ ಆಡಿಸುತ್ತಿದೆ. ಅಲ್ಲಲ್ಲಿ ಮಳೆಯಾಗುತ್ತಿದ್ದರೂ, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿಲ್ಲ. ಕರಾವಳಿ, ಘಟ್ಟ ಪ್ರದೇಶದಲ್ಲೇ ಕಡಿಮೆ ಮಳೆಯಾಗಿದ್ದು, ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆ ಬಂದರಷ್ಟೇ ಬಿತ್ತನೆಗೆ ವೇಗ ಸಿಗಲಿದೆ.
ಮುಂಗಾರು ದುರ್ಬಲಗೊಳ್ಳಲು 'ಫೋನಿ' ಹಾಗೂ 'ವಾಯು' ಚಂಡಮಾರುತ ಕಾರಣವಾಗಿದ್ದು, ಅದರ ಪ್ರಮಾಣವೀಗ ಕಡಿಮೆಯಾಗುತ್ತಿದೆ. ಇದರಿಂದಾಗಿ ಮುಂಗಾರು ಚುರುಕಾಗುವ ಸಾಧ್ಯತೆ ಇದ್ದು, ವಾಡಿಕೆ ಮಳೆಗಿಂತ ಹೆಚ್ಚಾದಲ್ಲಿ ಮಾತ್ರ ಜಲಾಶಯಗಳಿಗೆ ನೀರು ಹರಿದು ಬರಲು ಸಾಧ್ಯ. ಆದರೆ, 2017ರಲ್ಲಿ ಮುಂಗಾರು ಕೈಕೊಟ್ಟರೂ ಹಿಂಗಾರಿನಲ್ಲಿ ಹೆಚ್ಚು ಮಳೆಯಾಗಿ ರೈತರ ಆತಂಕವನ್ನು ದೂರ ಮಾಡಿತ್ತು. ಅದೇ ಸ್ಥಿತಿ ಈ ವರ್ಷವೂ ಪುನರಾವರ್ತನೆಯಾದರೆ ಅಚ್ಚರಿ ಪಡಬೇಕಿಲ್ಲ ಎಂದು ಬೆಂಗಳೂರು ಕೃಷಿ ವಿವಿಯ ವಿಜ್ಞಾನಿಯೊಬ್ಬರು ವಿಜಯ ಕರ್ನಾಟಕಕ್ಕೆ ಪ್ರತಿಕ್ರಿಯಿಸಿದರು.
ಶೇ. 9.45ರಷ್ಟು ಮಾತ್ರ ಬಿತ್ತನೆ
ಹಾಲಿ ಮುಂಗಾರು ಹಂಗಾಮಿನಲ್ಲಿ 76.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಹೊಂದಿದ್ದು, ಜೂ.20ರ ವೇಳೆ 7.24 ಲಕ್ಷ ಹೆ.(ಶೇ. 9.45) ಮಾತ್ರ ಬಿತ್ತನೆಯಾಗಿದೆ. ಹಿಂದಿನ ವರ್ಷದಲ್ಲಿ ಇದೇ ಅವಧಿಯಲ್ಲಿ ಶೇ.25ರಷ್ಟು ಬಿತ್ತನೆಯಾಗಿತ್ತ್ತು. ಹಳೆ ಮೈಸೂರು ಭಾಗಕ್ಕೆ ಸೇರಿದ ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ ಶೇ.50ರಷ್ಟು ಬಿತ್ತನೆ ಪೂರ್ಣವಾಗಿದೆ. ಚಾಮರಾಜನಗರ-ಶೇ.31, ಹಾಸನ-ಶೇ.16ರಷ್ಟು ಬಿತ್ತನೆ ಹೊರತುಪಡಿಸಿ ಉಳಿದೆಡೆ ಬಿತ್ತನೆ ಎರಡಂಕಿ ದಾಟಿಲ್ಲ. ರಾಜಧಾನಿ ಸುತ್ತಲಿನ ಜಲ್ಲೆಗಳಲ್ಲಿ ಶೇ.2ರಷ್ಟೂ ಬಿತ್ತನೆ ಆಗಿಲ್ಲ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬೆಳಗಾವಿ, ಬಾಗಲಕೋಟದಲ್ಲಿ ಕ್ರಮವಾಗಿ ಶೇ.38 ಹಾಗೂ ಶೇ.36ರಷ್ಟು ಬಿತ್ತನೆಯಾಗಿದೆ. ಉಳಿದೆಡೆ ಬಿತ್ತನೆಗೆ ಇನ್ನೂ ಕಾಲಾವಕಾಶ ಇದ್ದರೂ, ಭೂಮಿಯಲ್ಲಿ ತೇವಾಂಶ ಪ್ರಮಾಣ ಹೆಚ್ಚಿದರಷ್ಟೇ ಬೆಳೆ ಕೈಹಿಡಿಯಲಿದೆ. ಜುಲೈ ಮೊದಲ ವಾರದಿಂದ ಮಳೆ ಇಡೀ ರಾಜ್ಯವನ್ನು ಆವರಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಆಗಸ್ಟ್ ಮಧ್ಯ ಭಾಗದಲ್ಲಿ ಮಳೆ ಕೊರತೆಯಾದಲ್ಲಿ ಮಾತ್ರ ನಿರೀಕ್ಷಿತ ಬೆಳೆ ಕೈಸೇರುವುದು ಕಷ್ಟ. ಈ ಸಮಸ್ಯೆಗೆ ಒಳಗಾಗದಿರಲು ರೈತರು ಬೆಳೆ ವಿಮೆಯಡಿ ಹೆಸರು ನೋಂದಾಯಿಸಿಕೊಳ್ಳುವುದು ಯುಕ್ತ.
ಇಳುವರಿ ಕುಸಿತ?
ಮುಂಗಾರಿನಲ್ಲಿ ಕಡಿಮೆ ಮಳೆಯಾದಲ್ಲಿ ಬಿತ್ತನೆ ಗುರಿ ತಲುಪುವುದು ಕಷ್ಟವಾಗಬಹುದು. ಜತೆಗೆ ಕೀಟ ಬಾಧೆಯಿಂದ ಇಳುವರಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ವಾಡಿಕೆಗಿಂತ ಕಡಿಮೆ ಮಳೆಯಾದಲ್ಲಿ ಶೇ.5ರಷ್ಟು ಇಳುವರಿ ನಷ್ಟವಾಗಬಹುದು. ಈ ಸ್ಥಿತಿ ಹಿಂಗಾರಿನಲ್ಲೂ ಮುಂದುವರಿದರೆ ತೊಗರಿ ಇಳುವರಿ ಕಡಿಮೆಯಾಗಬಹುದು.
''ಈ ಬಾರಿ ಪೂರ್ವ ಮುಂಗಾರು ವೇಳೆ ಉತ್ತಮ ಮಳೆಯಾಗಿದ್ದ ಕಾರಣ ಮೈಸೂರು ಸುತ್ತಲಿನ ಜಿಲ್ಲೆಗಳಲ್ಲಿ ರೈತರು ಬಿತ್ತನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಜೂನ್ ಅಂತ್ಯದಿಂದ ಮಳೆ ಹೆಚ್ಚಾಗುವ ಸಾಧ್ಯೆತೆ. ಜುಲೈನಲ್ಲೂ ಇದೇ ಟ್ರೇಂಡ್ ಮುಂದುವರಿಯಲಿದ್ದು, ಆಗಸ್ಟ್ ಮಧ್ಯ ಭಾಗದಲ್ಲಿ ಮಳೆ ದಿನಗಳು ಕಡಿಮೆಯಾದಲ್ಲಿ ಮಾತ್ರ ಅಲ್ಪ ಪ್ರಮಾಣದ ಇಳುವರಿ ನಷ್ಟವಾಗಬಹುದು. ಮುನ್ನೆಚ್ಚರಿಕೆ ಕೈಗೊಂಡಲ್ಲಿ ರೈತರು ನಷ್ಟದಿಂದ ಪಾರಾಬಹುದು,'' ಎಂದು ಕೃಷಿ-ಹವಾಮಾನ ತಜ್ಞ ಪ್ರೊ. ಎಚ್.ಎಸ್. ಶಿವರಾಮು ತಿಳಿಸಿದರು.
2019-20ರ ಮುಂಗಾರು ಬಿತ್ತನೆ ವಿವರ
ಬಿತ್ತನೆ ಗುರಿ-76.69 ಲಕ್ಷ ಹೆ.
ಜೂ.20ರ ವರೆಗೆ ಬಿತ್ತನೆ-7.24 ಲಕ್ಷ ಹೆ.(ಶೇ. 9.45)
ವಾರ್ಷಿಕ ಆಹಾರ ಧಾನ್ಯ ಉತ್ಪಾದನೆ ಗುರಿ-138.67 ಲಕ್ಷ ಟನ್
ಬಿತ್ತನೆಯಾಗಿರುವ ಜಿಲ್ಲೆಗಳು: ಮೈಸೂರು-ಶೇ.50, ಚಾಮರಾಜನಗರ-31, ಹಾಸನ-16, ಬಾಗಲಕೋಟ-38, ಬೆಳಗಾವಿ-36, ಉತ್ತರಕನ್ನಡ-14, ಕೊಪ್ಪಳ-ಶೇ.10.
ಅತ್ಯಲ್ಪ ಬಿತ್ತನೆ ಕಂಡ ಜಿಲ್ಲೆಗಳು: ಚಿಕ್ಕಮಗಳೂರು-ಶೇ.6, ಚಿತ್ರದುರ್ಗ-3, ತುಮಕೂರು-2. ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂ.ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ತಲಾ ಶೇ.1ರಷ್ಟು.
(ಅಂಕಿ-ಅಂಶ: ರಾಜ್ಯ ಕೃಷಿ ಇಲಾಖೆ )
ಮುಂಗಾರು ಮಳೆ ಸ್ವಲಮಟ್ಟಿಗೆ ವಿಳಂಬವಾಗಿದ್ದರೂ, ಕೆಲ ದಿನಗಳಲ್ಲಿ ಚುರುಕುಗೊಳ್ಳುವ ನಿರೀಕ್ಷೆ ಇದೆ. ಕೃಷಿ ಚಟುವಟಿಕೆಗೆ ಬೇಕಿರುವ ಬಿತ್ತನೆ ಬೀಜ, ರಸಗೊಬ್ಬರ, ಇತರೆ ಪರಿಕರವನ್ನು ರೈತರಿಗೆ ತಲುಪಿಸಿದ್ದು, ಹೆಚ್ಚುವರಿ ದಾಸ್ತಾನು ಹೊಂದಲಾಗಿದೆ
- ಬಿ.ವೈ.ಶ್ರೀನಿವಾಸ್, ನಿರ್ದೇಶಕ, ಕೃಷಿ ಇಲಾಖೆ
ಕರಾವಳಿಯಲ್ಲಿ ಪ್ರಬಲಗೊಂಡ ಮುಂಗಾರು
ಬೆಂಗಳೂರು: ರಾಜ್ಯದ ಒಳನಾಡು ಹಾಗೂ ಕರಾವಳಿಯ ಹಲವು ಭಾಗಗಳನ್ನು ಮುಂಗಾರು ಆವರಿಸಿದ್ದು, ಜೋರಾಗಿ ಮಳೆ ಸುರಿಯುತ್ತಿದೆ. ಇನ್ನು ಮೂರು ದಿನಗಳಲ್ಲಿ ಮತ್ತಷ್ಟು ಭಾಗಗಳನ್ನು ಮುಂಗಾರು ಮಳೆ ವ್ಯಾಪಿಸಲಿದೆ. ಮುಂಗಾರು ಪ್ರಬಲವಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲೆಡೆ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಸುರಿದಿದೆ. ಮುಂಗಾರು ಈಗ ಕ್ರಮೇಣವಾಗಿ ವ್ಯಾಪಿಸುತ್ತಾ ಮುಂದುವರಿದಿದೆ. ಇನ್ನು ಮೂರು ದಿನಗಳಲ್ಲಿ ರಾಜ್ಯದ ಬಹುತೇಕ ಭಾಗಗಳನ್ನು ಆವರಿಸುವ ಸಾಧ್ಯತೆ ಇದೆ. ಗುರುವಾರ ಶಿರಾಲಿಯಲ್ಲಿ 160 ಮಿ.ಮೀ., ಮಂಕಿ, ಕಾರವಾರದಲ್ಲಿ 130 ಮಿ.ಮೀ., ಮಂಗಳೂರಿನಲ್ಲಿ 90 ಮಿ.ಮೀ., ಪಣಂಬೂರು, ಭಟ್ಕಳ, ಗೋಕರ್ಣ, ಆಗುಂಬೆಯಲ್ಲಿ 70 ಮಿ.ಮೀ., ಕುಮಟ, ಅಂಕೋಲದಲ್ಲಿ 60 ಮಿ.ಮೀ., ಕಾರ್ಕಳ, ಹೊನ್ನಾವರ, ಕದ್ರ, ಭಾಗಮಂಡಲದಲ್ಲಿ 50 ಮಿ.ಮೀ., ಸುಬ್ರಹ್ಮಣ್ಯ, ಸುಳ್ಯ, ಉಡುಪಿ, ಕೋಟ, ಕೊಲ್ಲೂರು, ಸಿದ್ದಾಪುರ, ಗೇರುಸೊಪ್ಪ, ಕ್ಯಾಸಲ್ ರಾಕ್ನಲ್ಲಿ 40 ಮಿ.ಮೀ., ತಾಳಗುಪ್ಪ, ಶೃಂಗೇರಿ, ಮೂಡಿಗೆರೆ, ಕಮ್ಮರಡಿಯಲ್ಲಿ 30 ಮಿ.ಮೀ. ಮಳೆ ಸುರಿದಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಜೂ.24 ರವರೆಗೆ ಹಾಗೂ ಕರಾವಳಿಯಲ್ಲಿ ಜೂ.25 ರವರೆಗೆ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂಗಾರು ಮಳೆ ವಿಳಂಬದ ಬೆನ್ನಲ್ಲೇ ಬಿತ್ತನೆ ಹಾಗೂ ಇಳುವರಿ ಕುಸಿತದ ಆತಂಕ ಎದುರಾಗಿರುವುದು ರೈತರ ದುಗುಡವನ್ನು ಇನ್ನಷ್ಟು ಹೆಚ್ಚಿಸಿದೆ.
ಜೂನ್ ಮೂರನೇ ವಾರ ಕಳೆದರೂ ವಾಡಿಕೆ ಮಳೆ ಕಣ್ಣಾಮುಚ್ಚಾಲೆ ಆಡಿಸುತ್ತಿದೆ. ಅಲ್ಲಲ್ಲಿ ಮಳೆಯಾಗುತ್ತಿದ್ದರೂ, ಕೃಷಿ ಚಟುವಟಿಕೆಗೆ ಪೂರಕ ವಾತಾವರಣ ಸೃಷ್ಟಿಯಾಗಿಲ್ಲ. ಕರಾವಳಿ, ಘಟ್ಟ ಪ್ರದೇಶದಲ್ಲೇ ಕಡಿಮೆ ಮಳೆಯಾಗಿದ್ದು, ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆ ಬಂದರಷ್ಟೇ ಬಿತ್ತನೆಗೆ ವೇಗ ಸಿಗಲಿದೆ.
ಮುಂಗಾರು ದುರ್ಬಲಗೊಳ್ಳಲು 'ಫೋನಿ' ಹಾಗೂ 'ವಾಯು' ಚಂಡಮಾರುತ ಕಾರಣವಾಗಿದ್ದು, ಅದರ ಪ್ರಮಾಣವೀಗ ಕಡಿಮೆಯಾಗುತ್ತಿದೆ. ಇದರಿಂದಾಗಿ ಮುಂಗಾರು ಚುರುಕಾಗುವ ಸಾಧ್ಯತೆ ಇದ್ದು, ವಾಡಿಕೆ ಮಳೆಗಿಂತ ಹೆಚ್ಚಾದಲ್ಲಿ ಮಾತ್ರ ಜಲಾಶಯಗಳಿಗೆ ನೀರು ಹರಿದು ಬರಲು ಸಾಧ್ಯ. ಆದರೆ, 2017ರಲ್ಲಿ ಮುಂಗಾರು ಕೈಕೊಟ್ಟರೂ ಹಿಂಗಾರಿನಲ್ಲಿ ಹೆಚ್ಚು ಮಳೆಯಾಗಿ ರೈತರ ಆತಂಕವನ್ನು ದೂರ ಮಾಡಿತ್ತು. ಅದೇ ಸ್ಥಿತಿ ಈ ವರ್ಷವೂ ಪುನರಾವರ್ತನೆಯಾದರೆ ಅಚ್ಚರಿ ಪಡಬೇಕಿಲ್ಲ ಎಂದು ಬೆಂಗಳೂರು ಕೃಷಿ ವಿವಿಯ ವಿಜ್ಞಾನಿಯೊಬ್ಬರು ವಿಜಯ ಕರ್ನಾಟಕಕ್ಕೆ ಪ್ರತಿಕ್ರಿಯಿಸಿದರು.
ಶೇ. 9.45ರಷ್ಟು ಮಾತ್ರ ಬಿತ್ತನೆ
ಹಾಲಿ ಮುಂಗಾರು ಹಂಗಾಮಿನಲ್ಲಿ 76.69 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಹೊಂದಿದ್ದು, ಜೂ.20ರ ವೇಳೆ 7.24 ಲಕ್ಷ ಹೆ.(ಶೇ. 9.45) ಮಾತ್ರ ಬಿತ್ತನೆಯಾಗಿದೆ. ಹಿಂದಿನ ವರ್ಷದಲ್ಲಿ ಇದೇ ಅವಧಿಯಲ್ಲಿ ಶೇ.25ರಷ್ಟು ಬಿತ್ತನೆಯಾಗಿತ್ತ್ತು. ಹಳೆ ಮೈಸೂರು ಭಾಗಕ್ಕೆ ಸೇರಿದ ಜಿಲ್ಲೆಗಳ ಪೈಕಿ ಮೈಸೂರಿನಲ್ಲಿ ಶೇ.50ರಷ್ಟು ಬಿತ್ತನೆ ಪೂರ್ಣವಾಗಿದೆ. ಚಾಮರಾಜನಗರ-ಶೇ.31, ಹಾಸನ-ಶೇ.16ರಷ್ಟು ಬಿತ್ತನೆ ಹೊರತುಪಡಿಸಿ ಉಳಿದೆಡೆ ಬಿತ್ತನೆ ಎರಡಂಕಿ ದಾಟಿಲ್ಲ. ರಾಜಧಾನಿ ಸುತ್ತಲಿನ ಜಲ್ಲೆಗಳಲ್ಲಿ ಶೇ.2ರಷ್ಟೂ ಬಿತ್ತನೆ ಆಗಿಲ್ಲ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಬೆಳಗಾವಿ, ಬಾಗಲಕೋಟದಲ್ಲಿ ಕ್ರಮವಾಗಿ ಶೇ.38 ಹಾಗೂ ಶೇ.36ರಷ್ಟು ಬಿತ್ತನೆಯಾಗಿದೆ. ಉಳಿದೆಡೆ ಬಿತ್ತನೆಗೆ ಇನ್ನೂ ಕಾಲಾವಕಾಶ ಇದ್ದರೂ, ಭೂಮಿಯಲ್ಲಿ ತೇವಾಂಶ ಪ್ರಮಾಣ ಹೆಚ್ಚಿದರಷ್ಟೇ ಬೆಳೆ ಕೈಹಿಡಿಯಲಿದೆ. ಜುಲೈ ಮೊದಲ ವಾರದಿಂದ ಮಳೆ ಇಡೀ ರಾಜ್ಯವನ್ನು ಆವರಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಆಗಸ್ಟ್ ಮಧ್ಯ ಭಾಗದಲ್ಲಿ ಮಳೆ ಕೊರತೆಯಾದಲ್ಲಿ ಮಾತ್ರ ನಿರೀಕ್ಷಿತ ಬೆಳೆ ಕೈಸೇರುವುದು ಕಷ್ಟ. ಈ ಸಮಸ್ಯೆಗೆ ಒಳಗಾಗದಿರಲು ರೈತರು ಬೆಳೆ ವಿಮೆಯಡಿ ಹೆಸರು ನೋಂದಾಯಿಸಿಕೊಳ್ಳುವುದು ಯುಕ್ತ.
ಇಳುವರಿ ಕುಸಿತ?
ಮುಂಗಾರಿನಲ್ಲಿ ಕಡಿಮೆ ಮಳೆಯಾದಲ್ಲಿ ಬಿತ್ತನೆ ಗುರಿ ತಲುಪುವುದು ಕಷ್ಟವಾಗಬಹುದು. ಜತೆಗೆ ಕೀಟ ಬಾಧೆಯಿಂದ ಇಳುವರಿ ಕುಸಿತ ಉಂಟಾಗುವ ಸಾಧ್ಯತೆ ಇದೆ. ವಾಡಿಕೆಗಿಂತ ಕಡಿಮೆ ಮಳೆಯಾದಲ್ಲಿ ಶೇ.5ರಷ್ಟು ಇಳುವರಿ ನಷ್ಟವಾಗಬಹುದು. ಈ ಸ್ಥಿತಿ ಹಿಂಗಾರಿನಲ್ಲೂ ಮುಂದುವರಿದರೆ ತೊಗರಿ ಇಳುವರಿ ಕಡಿಮೆಯಾಗಬಹುದು.
''ಈ ಬಾರಿ ಪೂರ್ವ ಮುಂಗಾರು ವೇಳೆ ಉತ್ತಮ ಮಳೆಯಾಗಿದ್ದ ಕಾರಣ ಮೈಸೂರು ಸುತ್ತಲಿನ ಜಿಲ್ಲೆಗಳಲ್ಲಿ ರೈತರು ಬಿತ್ತನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಜೂನ್ ಅಂತ್ಯದಿಂದ ಮಳೆ ಹೆಚ್ಚಾಗುವ ಸಾಧ್ಯೆತೆ. ಜುಲೈನಲ್ಲೂ ಇದೇ ಟ್ರೇಂಡ್ ಮುಂದುವರಿಯಲಿದ್ದು, ಆಗಸ್ಟ್ ಮಧ್ಯ ಭಾಗದಲ್ಲಿ ಮಳೆ ದಿನಗಳು ಕಡಿಮೆಯಾದಲ್ಲಿ ಮಾತ್ರ ಅಲ್ಪ ಪ್ರಮಾಣದ ಇಳುವರಿ ನಷ್ಟವಾಗಬಹುದು. ಮುನ್ನೆಚ್ಚರಿಕೆ ಕೈಗೊಂಡಲ್ಲಿ ರೈತರು ನಷ್ಟದಿಂದ ಪಾರಾಬಹುದು,'' ಎಂದು ಕೃಷಿ-ಹವಾಮಾನ ತಜ್ಞ ಪ್ರೊ. ಎಚ್.ಎಸ್. ಶಿವರಾಮು ತಿಳಿಸಿದರು.
2019-20ರ ಮುಂಗಾರು ಬಿತ್ತನೆ ವಿವರ
ಬಿತ್ತನೆ ಗುರಿ-76.69 ಲಕ್ಷ ಹೆ.
ಜೂ.20ರ ವರೆಗೆ ಬಿತ್ತನೆ-7.24 ಲಕ್ಷ ಹೆ.(ಶೇ. 9.45)
ವಾರ್ಷಿಕ ಆಹಾರ ಧಾನ್ಯ ಉತ್ಪಾದನೆ ಗುರಿ-138.67 ಲಕ್ಷ ಟನ್
ಬಿತ್ತನೆಯಾಗಿರುವ ಜಿಲ್ಲೆಗಳು: ಮೈಸೂರು-ಶೇ.50, ಚಾಮರಾಜನಗರ-31, ಹಾಸನ-16, ಬಾಗಲಕೋಟ-38, ಬೆಳಗಾವಿ-36, ಉತ್ತರಕನ್ನಡ-14, ಕೊಪ್ಪಳ-ಶೇ.10.
ಅತ್ಯಲ್ಪ ಬಿತ್ತನೆ ಕಂಡ ಜಿಲ್ಲೆಗಳು: ಚಿಕ್ಕಮಗಳೂರು-ಶೇ.6, ಚಿತ್ರದುರ್ಗ-3, ತುಮಕೂರು-2. ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂ.ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ತಲಾ ಶೇ.1ರಷ್ಟು.
(ಅಂಕಿ-ಅಂಶ: ರಾಜ್ಯ ಕೃಷಿ ಇಲಾಖೆ )
ಮುಂಗಾರು ಮಳೆ ಸ್ವಲಮಟ್ಟಿಗೆ ವಿಳಂಬವಾಗಿದ್ದರೂ, ಕೆಲ ದಿನಗಳಲ್ಲಿ ಚುರುಕುಗೊಳ್ಳುವ ನಿರೀಕ್ಷೆ ಇದೆ. ಕೃಷಿ ಚಟುವಟಿಕೆಗೆ ಬೇಕಿರುವ ಬಿತ್ತನೆ ಬೀಜ, ರಸಗೊಬ್ಬರ, ಇತರೆ ಪರಿಕರವನ್ನು ರೈತರಿಗೆ ತಲುಪಿಸಿದ್ದು, ಹೆಚ್ಚುವರಿ ದಾಸ್ತಾನು ಹೊಂದಲಾಗಿದೆ
- ಬಿ.ವೈ.ಶ್ರೀನಿವಾಸ್, ನಿರ್ದೇಶಕ, ಕೃಷಿ ಇಲಾಖೆ
ಕರಾವಳಿಯಲ್ಲಿ ಪ್ರಬಲಗೊಂಡ ಮುಂಗಾರು
ಬೆಂಗಳೂರು: ರಾಜ್ಯದ ಒಳನಾಡು ಹಾಗೂ ಕರಾವಳಿಯ ಹಲವು ಭಾಗಗಳನ್ನು ಮುಂಗಾರು ಆವರಿಸಿದ್ದು, ಜೋರಾಗಿ ಮಳೆ ಸುರಿಯುತ್ತಿದೆ. ಇನ್ನು ಮೂರು ದಿನಗಳಲ್ಲಿ ಮತ್ತಷ್ಟು ಭಾಗಗಳನ್ನು ಮುಂಗಾರು ಮಳೆ ವ್ಯಾಪಿಸಲಿದೆ. ಮುಂಗಾರು ಪ್ರಬಲವಾಗುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲೆಡೆ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಳೆ ಸುರಿದಿದೆ. ಮುಂಗಾರು ಈಗ ಕ್ರಮೇಣವಾಗಿ ವ್ಯಾಪಿಸುತ್ತಾ ಮುಂದುವರಿದಿದೆ. ಇನ್ನು ಮೂರು ದಿನಗಳಲ್ಲಿ ರಾಜ್ಯದ ಬಹುತೇಕ ಭಾಗಗಳನ್ನು ಆವರಿಸುವ ಸಾಧ್ಯತೆ ಇದೆ. ಗುರುವಾರ ಶಿರಾಲಿಯಲ್ಲಿ 160 ಮಿ.ಮೀ., ಮಂಕಿ, ಕಾರವಾರದಲ್ಲಿ 130 ಮಿ.ಮೀ., ಮಂಗಳೂರಿನಲ್ಲಿ 90 ಮಿ.ಮೀ., ಪಣಂಬೂರು, ಭಟ್ಕಳ, ಗೋಕರ್ಣ, ಆಗುಂಬೆಯಲ್ಲಿ 70 ಮಿ.ಮೀ., ಕುಮಟ, ಅಂಕೋಲದಲ್ಲಿ 60 ಮಿ.ಮೀ., ಕಾರ್ಕಳ, ಹೊನ್ನಾವರ, ಕದ್ರ, ಭಾಗಮಂಡಲದಲ್ಲಿ 50 ಮಿ.ಮೀ., ಸುಬ್ರಹ್ಮಣ್ಯ, ಸುಳ್ಯ, ಉಡುಪಿ, ಕೋಟ, ಕೊಲ್ಲೂರು, ಸಿದ್ದಾಪುರ, ಗೇರುಸೊಪ್ಪ, ಕ್ಯಾಸಲ್ ರಾಕ್ನಲ್ಲಿ 40 ಮಿ.ಮೀ., ತಾಳಗುಪ್ಪ, ಶೃಂಗೇರಿ, ಮೂಡಿಗೆರೆ, ಕಮ್ಮರಡಿಯಲ್ಲಿ 30 ಮಿ.ಮೀ. ಮಳೆ ಸುರಿದಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಜೂ.24 ರವರೆಗೆ ಹಾಗೂ ಕರಾವಳಿಯಲ್ಲಿ ಜೂ.25 ರವರೆಗೆ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.