ಆ್ಯಪ್ನಗರ

ಚೇತರಿಕೆ ಕಾಣದ ಶ್ರೀಗಳ ಆರೋಗ್ಯ; ಹೊಟ್ಟೆಯಲ್ಲೂ ನೀರು ಸಂಗ್ರಹ

ಇಷ್ಟು ದಿನ ಸಿದ್ಧಗಂಗಾ ಶ್ರೀಗಳ ಶ್ವಾಸಕೋಶದಲ್ಲಿ ಮಾತ್ರ ನೀರು ಸೇರುತ್ತಿತ್ತು ಇದೀಗ ಹೊಟ್ಟೆಯಲ್ಲಿ ಸೇರುತ್ತಿದೆ...

Vijaya Karnataka 16 Jan 2019, 5:00 am
ತುಮಕೂರು : ಇಷ್ಟು ದಿನ ಸಿದ್ಧಗಂಗಾ ಶ್ರೀಗಳ ಶ್ವಾಸಕೋಶದಲ್ಲಿ ಮಾತ್ರ ನೀರು ಸೇರುತ್ತಿತ್ತು. ಇದೀಗ ಹೊಟ್ಟೆಯಲ್ಲಿ ಸೇರುತ್ತಿದೆ. ಆ್ಯಂಟಿಬಯೋಟಿಕ್‌ ಸಹ ಬದಲಾಯಿಸಿದ್ದೇವೆ. ಎದೆ ಬಡಿತ ಏರಿಳಿತವಾಗಿದೆ ಎಂದು ಬಿಜಿಎಸ್‌ ವೈದ್ಯ ಡಾ.ರವೀಂದ್ರ ತಿಳಿಸಿದರು.
Vijaya Karnataka Web siddaganga  wamijisr


ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಮಂಗಳವಾರ ಮಾತನಾಡಿ, ''ಶ್ರೀಗಳ ಹೊಟ್ಟೆ, ಶ್ವಾಸಕೋಶದಲ್ಲಿ ನೀರು ಸೇರಿಕೊಳ್ಳುತ್ತಿದೆ. ನಿನ್ನೆ 550 ಎಂ.ಎಲ್‌ ನೀರನ್ನು ಹೊರ ತೆಗೆಯಲಾಗಿದೆ. ಎಲ್ಲದಕ್ಕೂ ಔಷಧ ಬದಲಾಯಿಸುತ್ತಿದ್ದೇವೆ. ಮೆಡಿಕಲ್‌ ಪ್ರಕಾರ ಏನೆಲ್ಲಾ ಮಾಡಬೇಕೋ ಎಲ್ಲಾ ಮಾಡಿದ್ದೇವೆ. ಅವರ ಸ್ಪಂದನೆ ಹೇಗಿರುತ್ತದೆ ಕಾದು ನೋಡಬೇಕಿದೆ. ಎರಡೂ ಶ್ವಾಸಕೋಶದಲ್ಲಿ ನೀರು ಸೇರಿದಾಗ ಉಸಿರಾಡಲು ಕಷ್ಟವಾಗುತ್ತದೆ. ಸುಸ್ತಾದ ಬಳಿಕ ವೆಂಟಿಲೇಷನ್‌ ಮುಂದುವರೆಸುತ್ತಿದ್ದೇವೆ. ಸೋಂಕು ಕಡಿಮೆಯಾಗಿದೆ. ಪ್ರೋಟೀನ್‌ ಉತ್ಪಾದನೆ ಆಗುತ್ತಿಲ್ಲ. ದ್ರವಾಹಾರದ ಮೂಲಕ ಪ್ರೋಟೀನ್‌ ಅಂಶ ಉತ್ಪಾದನೆಯಾಗಬೇಕು. ಆದರೆ ಪ್ರೋಟೀನ್‌ ಅಂಶ ಉತ್ಪಾದನೆಯಾಗದೆ ಸಮಸ್ಯೆಯಾಗುತ್ತಿದೆ,'' ಎಂದು ತಿಳಿಸಿದರು.

ಸಿದ್ಧಗಂಗಾ ಶ್ರೀಗಳ ದೇಹಕ್ಕೆ ಅಡ್ಡಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಆಲ್ಬಮಿನ್‌ ಅಂಶ ಹೆಚ್ಚಳವಾಗಲು ನೀಡುತ್ತಿದ್ದ ಔಷಧ ನಿಲ್ಲಿಸಲಾಗಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್‌ ತಿಳಿಸಿದರು.

''ಶ್ರೀಗಳ ಆರೋಗ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆಯಾಗಿಲ್ಲ. ಪದೇಪದೆ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ,''ಎಂದರು.

ಇಂದು ಮಠಕ್ಕೆ?

''ಶ್ರೀಗಳನ್ನು ಮಠಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಕಿರಿಯ ಶ್ರೀಗಳ ನೇತೃತ್ವದಲ್ಲಿ ಬುಧವಾರ ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುತ್ತದೆ,'' ಎಂದು ಮಾಹಿತಿ ನೀಡಿದರು.

ಶಾಸಕರಾದ ವಿ.ಸೋಮಣ್ಣ, ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯದ ಮಾಹಿತಿ ಪಡೆದುಕೊಂಡರು.

ಅಧಿಕಾರಿಗಳ ಭೇಟಿ: ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಂಶಿ ಕೃಷ್ಣ, ಎಎಸ್ಪಿ ಶೋಭರಾಣಿ ಮತ್ತಿತರರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ