ಆ್ಯಪ್ನಗರ

ನನಗೆ ಎಷ್ಟು ವಯಸ್ಸಾಯಿತು ಎಂದು ಕೇಳಿದ್ದ ಶ್ರೀಗಳು, 111 ಎಂದಾಗ ಬಹಳ ಆಯಿತು ಎಂದಿದ್ದರು!

ಡಿಸಿಎಂ ಜಿ. ಪರಮೇಶ್ವರ್‌ ಭೇಟಿ ವೇಳೆ ಸಿದ್ಧಗಂಗಾ ಶ್ರೀಗಳು ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಳಿ ತಮ್ಮ ವಯಸ್ಸಿನ ಕುರಿತು 'ನನಗೆ ಎಷ್ಟಾಯಿತು' ಎಂದು ವಿಚಾರಿಸಿದರು.

Vijaya Karnataka Web 21 Jan 2019, 5:53 pm
ತುಮಕೂರು: ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಇತ್ತೀಚೆಗೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಚೆನ್ನೈ ಆಸ್ಪತ್ರೆಗೆ ಏರ್‌ ಆಂಬುಲೆನ್ಸ್‌ ಮೂಲಕ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.
Vijaya Karnataka Web ಆಸ್ಪತ್ರೆಯಲ್ಲೇ ಇಷ್ಟಲಿಂಗ ಪೂಜೆ
ಆಸ್ಪತ್ರೆಯಲ್ಲೇ ಇಷ್ಟಲಿಂಗ ಪೂಜೆ


ಆಗ ರಾಜ್ಯದ ಬಹುತೇಕ ಎಲ್ಲ ರಾಜಕೀಯ ಮುಖಂಡರು ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಕುಶಲ ವಿಚಾರಿಸಿದ್ದರು.

ಆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಕೂಡ ಭೇಟಿ ನೀಡಿದ್ದರು.

ಆಗ ಮಾತನಾಡಿದ್ದ ಶ್ರೀಗಳು, ನನಗೆ ತುಂಬಾ ವಯಸ್ಸು ಆಗಿ ಹೋಗಿದೆ ಎಂದು ಹೇಳಿದ್ದರು.

ಬಹಳ ವಯಸ್ಸಾಯ್ತು ಎಂದ ಶ್ರೀ

ಡಿಸಿಎಂ ಜಿ. ಪರಮೇಶ್ವರ್‌ ಭೇಟಿ ವೇಳೆ ಸಿದ್ಧಗಂಗಾ ಶ್ರೀಗಳು ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಬಳಿ ತಮ್ಮ ವಯಸ್ಸಿನ ಕುರಿತು 'ನನಗೆ ಎಷ್ಟಾಯಿತು' ಎಂದು ವಿಚಾರಿಸಿದರು. ಆಗ ಕಿರಿಯ ಶ್ರೀಗಳು, 111 ವರ್ಷ ಎಂದು ಉತ್ತರಿಸಿದರು. ಆಗ ಸಿದ್ಧಗಂಗಾ ಶ್ರೀಗಳು ''ಓ... ಬಹಳ ಆಗೊಯ್ತು.. ಬಹಳ ಆಗೋಯ್ತು,'' ಎಂದು ಹಾಸ್ಯ ಮಾಡಿದರು.

ಈ ಪ್ರಸಂಗವನ್ನು ಡಿಸಿಎಂ ಜಿ. ಪರಮೇಶ್ವರ್‌ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದರು.

ಶ್ರೀಗಳ ಈಗ ಶಿವೈಕ್ಯರಾಗಿದ್ದು, ಇಡೀ ಭಕ್ತ ಸಾಗರವನ್ನು ಶೋಕ ಸಾಗರದಲ್ಲಿ ಮುಳುಗಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ