ತುಮಕೂರು :ಸಿದ್ಧಗಂಗಾ ಶ್ರೀಗಳಿಗೆ ಬುಧವಾರ ಹೃದಯ ಸಂಬಂಧಿತ ತಪಾಸಣೆ ನಡೆಸಿದ್ದು, ಶ್ರೀಗಳ ಹೃದಯ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ನೇತೃತ್ವದ ತಂಡವು ಶ್ರೀಗಳ ಆರೋಗ್ಯ ತಪಾಸಣೆ ನಡೆಸಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ರವೀಂದ್ರ, ''ಶ್ರೀಗಳ ಹೃದಯ ಪರಿಕ್ಷೀಸಲಾಗಿದೆ. ಅವರ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ. ಪಲ್ಸ್ ರೇಟ್ ಕೂಡಾ ಚೆನ್ನಾಗಿದೆ. ಶ್ರೀಗಳಿಗೆ ಶ್ವಾಸಕೋಶದ ಸೋಂಕು ಇರುವುದರಿಂದ ಸ್ವಲ್ಪ ನೀರು ಸೇರಿಕೊಂಡಿದೆ. ಶ್ವಾಸಕೋಶದಲ್ಲಿ ನೀರು ಜಾಸ್ತಿಯಾದರೆ ಅದನ್ನು ತೆಗೆಯಲು ನಿರ್ಧಾರ ಮಾಡಲಾಗಿದೆ. ಪ್ರೋಟಿನ್ ಕಡಿಮೆಯಾಗಿರುವ ಕಾರಣ ನೀರು ಸೇರಿಕೊಳ್ಳುತ್ತಿದೆ. ಪ್ರೋಟಿನ್ ಪೂರೈಸಿ ನೀರು ಸೇರುವುದನ್ನು ಕಡಿಮೆ ಮಾಡಬೇಕು. ಸದ್ಯ ದ್ರವರೂಪದ ಆಹಾರ ನೀಡಲಾಗುತ್ತಿದೆ. ಪ್ರೋಟಿನ್ ಪ್ರಮಾಣ ದೇಹದಲ್ಲಿ ಕನಿಷ್ಠ 3.5ರಷ್ಟಿರಬೇಕು. ಆದರೆ ಶ್ರೀಗಳ ದೇಹದಲ್ಲಿ 2.5 ಪ್ರೋಟೀನ್ ಇದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಇನ್ನೂ ಹೆಚ್ಚಿನ ವಿಶ್ರಾಂತಿ ಬೇಕು ಹಾಗಾಗಿ ಗುಣಮುಖರಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಚಿಕಿತ್ಸೆಯಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. ಡಾ. ಪರಮೇಶ್ ನೇತೃತ್ವದ ತಂಡ ಶ್ರೀಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ,'' ಎಂದರು.
ಸೋಂಕು ಕಡಿಮೆಯಾಗಿದೆ
ಬೆಳಗ್ಗೆ ಶ್ರೀಗಳ ಆರೋಗ್ಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್, ''ಶ್ರೀಗಳ ಆರೋಗ್ಯದಲ್ಲಿ ಹಿಂದಿಗಿಂತಲೂ ಉತ್ತಮವಾಗಿ ಚೇತರಿಕೆ ಕಂಡುಬರುತ್ತಿದೆ. ಸೋಂಕು ಕಡಿಮೆಯಾಗಿರುವುದು ದೃಢಪಟ್ಟಿದೆ. ಇನ್ನೂ ನಾಲ್ಕು ದಿನ ಆಂಟಿಬಯೋಟಿಕ್ ಕೊಡಬೇಕಾಗಿದೆ. ಬೆಳಗ್ಗೆ ರಕ್ತ ಪರೀಕ್ಷೆ ಮಾಡಲಾಗಿದೆ. ವರದಿಯಲ್ಲಿ ಸೋಂಕು ಕಡಿಮೆಯಾಗಿರುವುದು ದೃಢಪಟ್ಟಿದೆ,'' ಎಂದರು. ಶ್ರೀಗಳ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಯಿಂದ ಡಾ.ರವೀಂದ್ರನಾಥ ರೆಡ್ಡಿ, ಡಾ. ಸಂದೀಪ್, ಜಯದೇವ ಆಸ್ಪತ್ರೆಯಿಂದ ಡಾ. ನಾಗೇಶ್ ಬಂದಿದ್ದರು.
ಚಾರುಕೀರ್ತಿ ಭಟ್ಟಾರಕ ಶ್ರೀ ಭೇಟಿ
ಶ್ರೀಕ್ಷೇತ್ರ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, ''ನಾಡಿನ ಶ್ರೇಷ್ಠ ಹಿರಿಯಜ್ಜರಿಗೆ ಆರೋಗ್ಯ ಭಾಗ್ಯ ಸಿಗಲಿ ಎಂದು ಬಾಹುಬಲಿ ಸ್ವಾಮಿಯಲ್ಲಿ ಪ್ರಾರ್ಥಸಿದ್ದೇವೆ. ಅವರ ಆರೋಗ್ಯ ಸುಧಾರಿಸುತ್ತಿದೆ. ಸಿದ್ಧಗಂಗಾ ಶ್ರೀಗಳು ನಮೆಲ್ಲರಿಗೂ ಆದರ್ಶ. ಅವರ ವಿಶ್ರಾಂತಿಗೆ ಅಡ್ಡಿಯಾಗಬಾರದೆಂದು ನಾವು ಮಾತನಾಡಿಸಲಿಲ್ಲ,'' ಎಂದು ತಿಳಿಸಿದರು.
ಹಾಸಿಗೆಯಲ್ಲೇ ಶಿವನಾಮ ಜಪಿಸಿದ ಶ್ರೀ
ಶ್ರೀಗಳು ಬುಧವಾರ ಹಾಸಿಗೆಯಲ್ಲಿ ಮಲಗಿಕೊಂಡೇ ಕೆಲಹೊತ್ತು ಶಿವನಾಮ ಜಪಿಸಿದರು. ಬೆಳಗಿನ ಇಷ್ಟಲಿಂಗ ಪೂಜೆ ಬಳಿಕ ವಿಶ್ರಾಂತಿಯಲ್ಲಿದ್ದ ಶ್ರೀಗಳಿಗೆ ವೈದ್ಯ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಶ್ರೀಗಳು ದೇವರ ನಾಮ ಜಪಿಸಲಾರಂಭಿಸಿದರು. ಶ್ರೀಗಳ ಶಿವನಾಮ ಸ್ಮರಣೆಗೆ ಶಿಷ್ಯವೃಂದ ನೆರವಾದರು. 1 ನಿಮಿಷ 41 ಸೆಕೆಂಡುಗಳ ಈ ದೃಶ್ಯವು ಮೊಬೈಲ್ನಲ್ಲಿ ಸೆರೆಯಾಗಿ ಭಕ್ತರ ಮೊಬೈಲ್ಗಳಲ್ಲಿ ಹರಿದಾಡಿದೆ.
ಪ್ರಮುಖರ ಭೇಟಿ
ವಿಧಾನ ಪರಿಷತ್ ಪ್ರತಿಪಕ್ಷ ದ ಮುಖ್ಯ ಸಚೇತಕ ಮಹಂತೇಶ್ ಕೌಟಗಿ ಮಠ, ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆ, ಶಾಸಕರಾದ ವಿ.ಸೋಮಣ್ಣ, ಎಂ.ವಿ.ವೀರಭದ್ರಯ್ಯ, ಕುಮಾರ ಬಂಗಾರಪ್ಪ, ಬೆಂಗಳೂರು ಮೇಯರ್ ಗಂಗಾಂಭಿಕೆ, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವರಾದ ಸೊಗಡು ಶಿವಣ್ಣ, ಪಿಜಿಆರ್ ಸಿಂಧ್ಯಾ, ವಿಧಾನ ಪರಿಷತ್ ಪ್ರತಿಪಕ್ಷನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮತ್ತಿತರರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ಕುರಿತು ಮಾಹಿತಿ ಪಡೆದುಕೊಂಡರು.
ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ನೇತೃತ್ವದ ತಂಡವು ಶ್ರೀಗಳ ಆರೋಗ್ಯ ತಪಾಸಣೆ ನಡೆಸಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ರವೀಂದ್ರ, ''ಶ್ರೀಗಳ ಹೃದಯ ಪರಿಕ್ಷೀಸಲಾಗಿದೆ. ಅವರ ಹೃದಯ ಚೆನ್ನಾಗಿ ಕೆಲಸ ಮಾಡುತ್ತಿದೆ. ಪಲ್ಸ್ ರೇಟ್ ಕೂಡಾ ಚೆನ್ನಾಗಿದೆ. ಶ್ರೀಗಳಿಗೆ ಶ್ವಾಸಕೋಶದ ಸೋಂಕು ಇರುವುದರಿಂದ ಸ್ವಲ್ಪ ನೀರು ಸೇರಿಕೊಂಡಿದೆ. ಶ್ವಾಸಕೋಶದಲ್ಲಿ ನೀರು ಜಾಸ್ತಿಯಾದರೆ ಅದನ್ನು ತೆಗೆಯಲು ನಿರ್ಧಾರ ಮಾಡಲಾಗಿದೆ. ಪ್ರೋಟಿನ್ ಕಡಿಮೆಯಾಗಿರುವ ಕಾರಣ ನೀರು ಸೇರಿಕೊಳ್ಳುತ್ತಿದೆ. ಪ್ರೋಟಿನ್ ಪೂರೈಸಿ ನೀರು ಸೇರುವುದನ್ನು ಕಡಿಮೆ ಮಾಡಬೇಕು. ಸದ್ಯ ದ್ರವರೂಪದ ಆಹಾರ ನೀಡಲಾಗುತ್ತಿದೆ. ಪ್ರೋಟಿನ್ ಪ್ರಮಾಣ ದೇಹದಲ್ಲಿ ಕನಿಷ್ಠ 3.5ರಷ್ಟಿರಬೇಕು. ಆದರೆ ಶ್ರೀಗಳ ದೇಹದಲ್ಲಿ 2.5 ಪ್ರೋಟೀನ್ ಇದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಇನ್ನೂ ಹೆಚ್ಚಿನ ವಿಶ್ರಾಂತಿ ಬೇಕು ಹಾಗಾಗಿ ಗುಣಮುಖರಾಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಚಿಕಿತ್ಸೆಯಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. ಡಾ. ಪರಮೇಶ್ ನೇತೃತ್ವದ ತಂಡ ಶ್ರೀಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ,'' ಎಂದರು.
ಸೋಂಕು ಕಡಿಮೆಯಾಗಿದೆ
ಬೆಳಗ್ಗೆ ಶ್ರೀಗಳ ಆರೋಗ್ಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್, ''ಶ್ರೀಗಳ ಆರೋಗ್ಯದಲ್ಲಿ ಹಿಂದಿಗಿಂತಲೂ ಉತ್ತಮವಾಗಿ ಚೇತರಿಕೆ ಕಂಡುಬರುತ್ತಿದೆ. ಸೋಂಕು ಕಡಿಮೆಯಾಗಿರುವುದು ದೃಢಪಟ್ಟಿದೆ. ಇನ್ನೂ ನಾಲ್ಕು ದಿನ ಆಂಟಿಬಯೋಟಿಕ್ ಕೊಡಬೇಕಾಗಿದೆ. ಬೆಳಗ್ಗೆ ರಕ್ತ ಪರೀಕ್ಷೆ ಮಾಡಲಾಗಿದೆ. ವರದಿಯಲ್ಲಿ ಸೋಂಕು ಕಡಿಮೆಯಾಗಿರುವುದು ದೃಢಪಟ್ಟಿದೆ,'' ಎಂದರು. ಶ್ರೀಗಳ ಚಿಕಿತ್ಸೆಗೆ ಬಿಜಿಎಸ್ ಆಸ್ಪತ್ರೆಯಿಂದ ಡಾ.ರವೀಂದ್ರನಾಥ ರೆಡ್ಡಿ, ಡಾ. ಸಂದೀಪ್, ಜಯದೇವ ಆಸ್ಪತ್ರೆಯಿಂದ ಡಾ. ನಾಗೇಶ್ ಬಂದಿದ್ದರು.
ಚಾರುಕೀರ್ತಿ ಭಟ್ಟಾರಕ ಶ್ರೀ ಭೇಟಿ
ಶ್ರೀಕ್ಷೇತ್ರ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, ''ನಾಡಿನ ಶ್ರೇಷ್ಠ ಹಿರಿಯಜ್ಜರಿಗೆ ಆರೋಗ್ಯ ಭಾಗ್ಯ ಸಿಗಲಿ ಎಂದು ಬಾಹುಬಲಿ ಸ್ವಾಮಿಯಲ್ಲಿ ಪ್ರಾರ್ಥಸಿದ್ದೇವೆ. ಅವರ ಆರೋಗ್ಯ ಸುಧಾರಿಸುತ್ತಿದೆ. ಸಿದ್ಧಗಂಗಾ ಶ್ರೀಗಳು ನಮೆಲ್ಲರಿಗೂ ಆದರ್ಶ. ಅವರ ವಿಶ್ರಾಂತಿಗೆ ಅಡ್ಡಿಯಾಗಬಾರದೆಂದು ನಾವು ಮಾತನಾಡಿಸಲಿಲ್ಲ,'' ಎಂದು ತಿಳಿಸಿದರು.
ಹಾಸಿಗೆಯಲ್ಲೇ ಶಿವನಾಮ ಜಪಿಸಿದ ಶ್ರೀ
ಶ್ರೀಗಳು ಬುಧವಾರ ಹಾಸಿಗೆಯಲ್ಲಿ ಮಲಗಿಕೊಂಡೇ ಕೆಲಹೊತ್ತು ಶಿವನಾಮ ಜಪಿಸಿದರು. ಬೆಳಗಿನ ಇಷ್ಟಲಿಂಗ ಪೂಜೆ ಬಳಿಕ ವಿಶ್ರಾಂತಿಯಲ್ಲಿದ್ದ ಶ್ರೀಗಳಿಗೆ ವೈದ್ಯ ಸಿಬ್ಬಂದಿ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಶ್ರೀಗಳು ದೇವರ ನಾಮ ಜಪಿಸಲಾರಂಭಿಸಿದರು. ಶ್ರೀಗಳ ಶಿವನಾಮ ಸ್ಮರಣೆಗೆ ಶಿಷ್ಯವೃಂದ ನೆರವಾದರು. 1 ನಿಮಿಷ 41 ಸೆಕೆಂಡುಗಳ ಈ ದೃಶ್ಯವು ಮೊಬೈಲ್ನಲ್ಲಿ ಸೆರೆಯಾಗಿ ಭಕ್ತರ ಮೊಬೈಲ್ಗಳಲ್ಲಿ ಹರಿದಾಡಿದೆ.
ಪ್ರಮುಖರ ಭೇಟಿ
ವಿಧಾನ ಪರಿಷತ್ ಪ್ರತಿಪಕ್ಷ ದ ಮುಖ್ಯ ಸಚೇತಕ ಮಹಂತೇಶ್ ಕೌಟಗಿ ಮಠ, ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆ, ಶಾಸಕರಾದ ವಿ.ಸೋಮಣ್ಣ, ಎಂ.ವಿ.ವೀರಭದ್ರಯ್ಯ, ಕುಮಾರ ಬಂಗಾರಪ್ಪ, ಬೆಂಗಳೂರು ಮೇಯರ್ ಗಂಗಾಂಭಿಕೆ, ಮಾಜಿ ಸಂಸದ ಜಿ.ಎಸ್.ಬಸವರಾಜು, ಮಾಜಿ ಸಚಿವರಾದ ಸೊಗಡು ಶಿವಣ್ಣ, ಪಿಜಿಆರ್ ಸಿಂಧ್ಯಾ, ವಿಧಾನ ಪರಿಷತ್ ಪ್ರತಿಪಕ್ಷನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮತ್ತಿತರರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ಕುರಿತು ಮಾಹಿತಿ ಪಡೆದುಕೊಂಡರು.