ಆ್ಯಪ್ನಗರ

ರಾಮಮಂದಿರ ಕಟ್ತೇವೆಂದು ಮೋಸ ಮಾಡಿದವರು ಶ್ರೀರಾಮನಿಂದ ಕಲಿತಿದ್ದೇನು?: ಸಿದ್ದರಾಮಯ್ಯ

ಮುಖ್ಯಮಂತ್ರಿಯಾಗಿ ನಾನು ಶ್ರೀರಾಮಚಂದ್ರನಿಂದ ಕಲಿತ ಮೊದಲ ಪಾಠ ನುಡಿದಂತೆ ನಡೆಯಬೇಕು ಎಂಬ ವಚನ ಪಾಲನೆ ಎಂದು ವಿವರಿಸಿರುವ ಸಿದ್ದರಾಮಯ್ಯ ರಾಮ ಮಂದಿರು ನಿರ್ಮಾಣದ ಭರವಸೆ ಯಾಕೆ ಈಡೇರಿಸಿಲ್ಲಎಂದು ಯಾರ ಹೆಸರನ್ನು, ಪಕ್ಷವನ್ನು ಉಲ್ಲೇಖಿಸದೆ ಪ್ರಶ್ನಿಸಿದ್ದಾರೆ.

Vijaya Karnataka Web 13 Apr 2019, 12:50 pm
ಬೆಂಗಳೂರು: ರಾಮಮಂದಿರ ಕಟ್ಟುತ್ತೇವೆ ಎಂದು ಚಂದಾ ಎತ್ತಿ, ಇಟ್ಟಿಗೆ ಒಟ್ಟು ಮಾಡಿ ಮೋಸ ಮಾಡಿದ ವಚನ ಭ್ರಷ್ಟರೆಲ್ಲ ಶ್ರೀರಾಮನಿಂದ ಕಲಿತಿದ್ದೇನು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
Vijaya Karnataka Web Siddaramaiah


ಸಿದ್ದರಾಮಯ್ಯ ಅವರು ಶ್ರೀರಾಮ ನವಮಿ ಅಂಗವಾಗಿ ಶನಿವಾರ ಟ್ವೀಟರ್‌ ಮೂಲಕ ನಾಡಿನ ಜನತೆಗೆ ಶುಭ ಕೋರಿದ್ದಾರೆ. ಪಾನಕ ಕೋಸಂಬರಿಯ ಜತೆಗೆ ಪ್ರೀತಿ ವಿಶ್ವಾಸಗಳು ಮಿಳಿತಗೊಳ್ಳಲಿ. ಈ ಪವಿತ್ರ ಹಬ್ಬವೂ ನಾಡಿನಲ್ಲಿ ಸ್ನೇಹ ಸೌಹರ್ದತೆಯನ್ನು ಬೆಳೆಸಲು ಪ್ರೇರಕ ಶಕ್ತಿಯಾಗಲಿ. ಸರ್ವರಿಗೂ ಶ್ರೀ ರಾಮನವಮಿ ಹಾರ್ದಿಕ ಶುಭಾಶಯಗಳು ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

ಮುಖ್ಯಮಂತ್ರಿಯಾಗಿ ನಾನು ಶ್ರೀರಾಮಚಂದ್ರನಿಂದ ಕಲಿತ ಮೊದಲ ಪಾಠ ನುಡಿದಂತೆ ನಡೆಯಬೇಕು ಎಂಬ ವಚನ ಪಾಲನೆ ಎಂದು ವಿವರಿಸಿರುವ ಸಿದ್ದರಾಮಯ್ಯ ರಾಮ ಮಂದಿರು ನಿರ್ಮಾಣದ ಭರವಸೆ ಯಾಕೆ ಈಡೇರಿಸಿಲ್ಲಎಂದು ಯಾರ ಹೆಸರನ್ನು, ಪಕ್ಷವನ್ನು ಉಲ್ಲೇಖಿಸದೆ ಪ್ರಶ್ನಿಸಿದ್ದಾರೆ.

ರಾಮಮಂದಿರ ಕಟ್ಟುತ್ತೇವೆ ಎಂದು ಚಂದಾ ಸಂಗ್ರಹಿಸಿದರು. ಇಟ್ಟಿಗೆ ಗಳನ್ನು ಒಟ್ಟು ಮಾಡಿದರು. ಆದರೆ ಕೊನೆಗೆ ಮೋಸ ಮಾಡಿದ ವಚನ ಭ್ರಷ್ಟರೆಲ್ಲ ಶ್ರೀರಾಮನಿಂದ ಕಲಿತಿದ್ದೇನು? ಎಂದು ಮಾರ್ಮಿಕವಾಗಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

2014ರ ಲೋಕಸಭೆ ಚುನಾವಣೆ ವೇಳೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಭರವಸೆಯನ್ನು ಬಿಜೆಪಿ ನೀಡಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬದ್ಧರಾಗಿರುವುದಾಗಿ ತಿಳಿಸಿದೆ. ಇತ್ತೀಚೆಗೆ ಶಿವಸೇನೆಯು ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿಗೆ 2019 ಕೊನೆಯ ಅವಕಾಶ ಎಂದಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ