ಆ್ಯಪ್ನಗರ

ಯಡಿಯೂರಪ್ಪರಿಂದ ಪಾಠ ಕಲಿಯಬೇಕಾಗಿಲ್ಲ: ಸಿದ್ದರಾಮಯ್ಯ

ಹೊನ್ನಾಳಿಯಲ್ಲಿ ಮುಖ್ಯಮಂತ್ರಿ ತಿರುಗೇಟು

Vijaya Karnataka Web 26 Dec 2017, 5:21 pm
ದಾವಣಗೆರೆ: ಆರ್ಥಿಕ ನಿರ್ವಹಣೆ ಕುರಿತು ಯಡಿಯೂರಪ್ಪರಿಂದ ಪಾಠ ಕಲಿಯಬೇಕಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.
Vijaya Karnataka Web siddaramaiah attacks bsy
ಯಡಿಯೂರಪ್ಪರಿಂದ ಪಾಠ ಕಲಿಯಬೇಕಾಗಿಲ್ಲ: ಸಿದ್ದರಾಮಯ್ಯ


ಹೊನ್ನಾಳಿಯಲ್ಲಿ ಮಂಗಳವಾರ ನಡೆದ ಸಾಧನಾ ಸಮಾವೇಶದಲ್ಲಿ ಮುಖ್ಯಮಂತ್ರಿ ಮಾತನಾಡಿದರು.

ಯಡಿಯೂರಪ್ಪಗೆ ಹಣಕಾಸು ವ್ಯವಹಾರ ಗೊತ್ತಿಲ್ಲದೆ ಮಾತನಾಡುತ್ತಾರೆ. ನಾವು 2012 ರಲ್ಲಿ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಆಕ್ಟ್ ಜಾರಿಗೆ ತಂದಿದ್ದೇವೆ. ಆರ್ಥಿಕ ಸುಸ್ಥಿತಿ ಬಗ್ಗೆ ಮಾನದಂಡ ನಿಗಧಿ ಆಗಿದೆ. ಆದಾಯ ಹೆಚ್ಚಿರಬೇಕು, ಜಿಡಿಪಿ ಶೇ 25 ಇರಬೇಕು, ವಿತ್ತೀಯ ಕೊರತೆ ಶೇ 3 ದಾಟಬಾರದು. ಯಡಿಯೂರಪ್ಪ ಇದನ್ನು ಓದಿಕೊಂಡಿಲ್ಲ ಎಂದು ಟೀಕಿಸಿದರು.

ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದೆ. ರಾಜ್ಯಕ್ಕೆ ಎರಡು ತಿಂಗಳ ಹಿಂದೆ ಬಂದಿದ್ದ ಮಾಜಿ ಪ್ರಧಾನಿ , ಆರ್ಥಿಕ ತಜ್ಞ ಮನಮೋಹನ್ ಸಿಂಗ್, ರಾಜ್ಯದ ಆರ್ಥಿಕತೆ ಸುಸ್ಥಿತಿಯಲ್ಲಿದ್ದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ, ನಮಗೆ ಯಡಿಯೂರಪ್ಪ ನ ಸರ್ಟಿಫಿಕೇಟ್ ಬೇಕಿಲ್ಲ ಎಂದರು.

ಬಜೆಟ್ ನ ಉದ್ದೇಶವೇ ಸರ್ವರಿಗೂ ಸಮಪಾಲು, ಸಮಬಾಳು ಕಲ್ಪಿಸುವುದಾಗಿದೆ. ಇದರಲ್ಲಿ ದಲಿತ ಬಜೆಟ್, ಹಿಂದುಳಿದ ಬಜೆಟ್, ಯುವಕ ಯುವತಿ, ರೈತ ಬಜೆಟ್ ಅಂತ ಇರುವುದಿಲ್ಲ. ಯಡಿಯೂರಪ್ಪ ಹಸಿರುಶಾಲು ಹಾಕಿಕೊಂಡು ಕೃಷಿ ಬಜೆಟ್ ಮಂಡಿಸಿದರು. ಯಾವ ಕಾರ್ಯ ಕ್ರಮಗಳನ್ನು ಕೊಡಲಿಲ್ಲ. ಗೊಬ್ಬರ ಕೇಳಿದ ರೈತರ ಮೇಲೆ ಗುಂಡು ಹಾರಿಸಿದರು ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಯಡಿಯೂರಪ್ಪರ ಮಿಷನ್ 150 ಠುಸ್ ಆಗಿ 50 ಆಗಿದೆ, ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ. ತಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ. ಅವರ ನಾಲಗೆ ಅವರ ಸಂಸ್ಕೃತಿ ಯನ್ನ ಹೇಳುತ್ತದೆ. ಇದೇ ರೀತಿ ಅನಂತ ಕುಮಾರ ಹೆಗಡೆ ಬೇಕಾ ಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಬಿಜೆಪಿ ಮುಂದಾದ್ರೆ ದೇಶದಲ್ಲಿ ದೊಡ್ಡ ದಂಗೆ ಆಗುತ್ತದೆ. ಇಡಿ ಶೋಷಿತ ಸಮಾಜಗಳು ಜಾಗೃತ ಆಗಿದೆ. ಬಿಜೆಪಿ ಎಚ್ಚರಿಕೆಯಿಂದ ಇರಬೇಕು ಎಂದು ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ