ಆ್ಯಪ್ನಗರ

ಮೋದಿ, ಯಡಿಯೂರಪ್ಪಯಿಂದ ಸರ್ಜಿಕಲ್‌ ಸ್ಟ್ರೈಕ್‌ ರಾಜಕೀಯ: ಸಿದ್ದರಾಮಯ್ಯ

56 ಇಂಚಿನ ಎದೆ ಇದ್ದರೆ ಸಾಲದು, ಜನರ ಕಷ್ಟ ಅರಿಯುವ ಹೃದಯ ಬೇಕು. ಅವರ ಸರಕಾರ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿದೆ. ಜನರಿಗೆ ಮರಳು ಮಾಡಿ ಅವರು ಪ್ರಧಾನಿಯಾಗಿದ್ದು, ದಕ್ಷಿಣ ಕನ್ನಡದ ಪ್ರಜ್ಞಾವಂತ ನಾಗರಿಕರು ಮತ್ತೆ ಅವರ ಬಣ್ಣದ ಮಾತುಗಳಿಗೆ ಮರುಳಾಗಬಾರದು

Vijaya Karnataka Web 6 Mar 2019, 10:12 pm
ಮಂಗಳೂರು: 44 ಯೋಧರ ಹತ್ಯೆಯನ್ನು ಬಿಜೆಪಿ ರಾಜಕೀಯಕ್ಕೆ ಬಳಸುತ್ತಿರುವುದು ನೀಚತನ. ನಮಗೆ ಯೋಧರ ಬಗ್ಗೆ ಹೆಮ್ಮೆ ಇದೆ. ಅವರ ಸಾಮರ್ಥ್ಯದ ಬಗ್ಗೆ ನಂಬಿಕೆ ಇದೆ. ಯೋಧರ ಹತ್ಯೆಯಿಂದ 22 ಸೀಟು ಹೆಚ್ಚು ಬರುತ್ತದೆ ಎಂದು ಯಡಿಯೂರಪ್ಪ ಹೇಳಿದರೆ, ಪ್ರಧಾನಿ ಮೋದಿಯೂ ತನ್ನ ಸಾಧನೆ ಎಂಬಂತೆ ಬಿಂಬಿಸಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದ್ದಾರೆ. ಯೋಧರ ಹತ್ಯಾಕಾಂಡವು ಕೇಂದ್ರ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯ ಅಲ್ಲದೆ ಮತ್ತೇನು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Vijaya Karnataka Web ಸಿದ್ದರಾಮಯ್ಯ
ಸಿದ್ದರಾಮಯ್ಯ


ಅಡ್ಯಾರ್‌ನ ಅಡ್ಯಾರ್ ಗಾರ್ಡನ್‌ನಲ್ಲಿ ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ್ದ ಜಿಲ್ಲಾಮಟ್ಟದ ಪರಿವರ್ತನಾ ಯಾತ್ರೆ ಉದ್ಘಾಟಿಸಿ ಸಿದ್ದರಾಮಯ್ಯ ಮಾತನಾಡಿದರು.

ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ನಿಷ್ಪ್ರಯೋಜಕ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬೆಂಕಿ ಹಚ್ಚುವ, ದ್ವೇಷ ಹರಡುವ ಭಾಷಣ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಹಾಗಾಗಿ ಅವರನ್ನು ಸೋಲಿಸಲು ಶತಾಯಗತಾಯ ಸಂಕಲ್ಪ ಮಾಡಬೇಕು. ಆ ಮೂಲಕ ದೇಶದಲ್ಲಿ ಪರಿವರ್ತನೆಗೆ ನಾಂದಿ ಹಾಡಬೇಕು ಎಂದರು.

ಹಲವಾರು ಭರವಸೆಗಳನ್ನು ನೀಡಿ ನರೇಂದ್ರ ಮೋದಿ ಪ್ರಧಾನಿಯಾಗಿ ಐದು ವರ್ಷ ಕಳೆದಿದೆ. ಹಿಂದಿನ ಯಾವುದೇ ಭರವಸೆ ಬಗ್ಗೆ ಮಾತನಾಡುವ ನೈತಿಕತೆ ಪ್ರಧಾನಿಗೆ ಇಲ್ಲ. 56 ಇಂಚಿನ ಎದೆ ಇದ್ದರೆ ಸಾಲದು, ಜನರ ಕಷ್ಟ ಅರಿಯುವ ಹೃದಯ ಬೇಕು. ಅವರ ಸರಕಾರ ಎಲ್ಲ ಕ್ಷೇತ್ರದಲ್ಲೂ ವಿಫಲವಾಗಿದೆ. ಜನರಿಗೆ ಮರಳು ಮಾಡಿ ಅವರು ಪ್ರಧಾನಿಯಾಗಿದ್ದು, ದಕ್ಷಿಣ ಕನ್ನಡದ ಪ್ರಜ್ಞಾವಂತ ನಾಗರಿಕರು ಮತ್ತೆ ಅವರ ಬಣ್ಣದ ಮಾತುಗಳಿಗೆ ಮರುಳಾಗಬಾರದು ಎಂದು ಅವರು ಹೇಳಿದರು.

ಅಡಕೆ, ಕಾಳುಮೆಣಸು, ರಬ್ಬರ್ ಬೆಲೆ ಕುಸಿದಿದ್ದರೂ, ಬಿಜೆಪಿಯ ಯಾವ ಸಂಸದರಿಗೂ ಪ್ರಧಾನಿ ಮೋದಿ ಮುಂದೆ ಬಾಯಿ ಬಿಚ್ಚುವ ಧೈರ್ಯ ಇಲ್ಲ. ಮೀನುಗಾರರು ನಾಪತ್ತೆಯಾಗಿ ೮೦ ದಿನವಾದರೂ ಪತ್ತೆಹಚ್ಚಲು ಕೇಂದ್ರ ಸರಕಾರ ಯಾವುದೇ ಪ್ರಯತ್ನ ಮಾಡಿಲ್ಲ ಎಂದರು.

ರಾಜ್ಯದಲ್ಲಿ ಸಾಮರಸ್ಯ ಕದಡಲು ಸಂಸದರಾದ ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಟೀಲ್ ಮತ್ತು ಪ್ರತಾಪಸಿಂಹ ಸಾಕು. ಅಂಥವರು ಪಾರ್ಲಿಮೆಂಟ್‌ಗೆ ಹೋಗುವುದನ್ನು ತಡೆಯಬೇಕು ಎಂದು ಸಿದ್ದರಾಮಯ್ಯ ಹೇಳೀದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಸಿದ್ದರಾಮಯ್ಯ ಮಹತ್ವದ ಕೊಡುಗೆ ನೀಡಿದ್ದಾರೆ. ಜಿಲ್ಲೆಗೆ ಯಾವುದೇ ಕೊಡುಗೆ ನೀಡದ ನರೇಂದ್ರ ಮೋದಿಗೆ ಮತ್ತೆ ಪ್ರಧಾನಿಯಾಗಲು ಅವಕಾಶ ಕೊಡಬಾರದು. ರಾಹುಲ್ ಗಾಂಧಿ ಪ್ರಧಾನ ಮಂತ್ರಿಯಾದರೆ ದೇಶದ ಗೌರವ ಉಳಿದಂತೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ