ಆ್ಯಪ್ನಗರ

ಎದೆಬಗೆದರೆ ಈಗ ನಾನು ಕಾಣಲ್ವಾ: ಎಂಟಿಬಿ ನಾಗರಾಜ್‌ಗೆ ಸಿದ್ದರಾಮಯ್ಯ ಪ್ರಶ್ನೆ

ಎಂ.ಟಿ.ಬಿ.ನಾಗರಾಜ್‌ಗೆ ಈಗ ಎದೆ ಬಗೆದ್ರೆ ನಾನು ಕಾಣಲ್ಲಾ ಅನಿಸುತ್ತೆ..! ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಈ ರೀತಿ ಟಾಂಗ್‌ ನೀಡಿದ್ದಾರೆ.

Vijaya Karnataka 13 Jul 2019, 5:00 am
Vijaya Karnataka Web Sidaramaih CM
ಬೆಂಗಳೂರು: ಎಂ.ಟಿ.ಬಿ.ನಾಗರಾಜ್‌ಗೆ ಈಗ ಎದೆ ಬಗೆದ್ರೆ ನಾನು ಕಾಣಲ್ಲಾ ಅನಿಸುತ್ತೆ..! ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಸತಿ ಸಚಿವ ಎಂ.ಟಿ.ಬಿ.ನಾಗರಾಜ್‌ ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಈ ರೀತಿ ಟಾಂಗ್‌ ನೀಡಿದ್ದಾರೆ.

''ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣ್ತಾರೆ ಅಂತಾ ಎಂಟಿಬಿ ಹೇಳ್ತಿದ್ರು. ಹಾಗೇ ಹೇಳ್ತಿದ್ದವರೇ ರಾಜೀನಾಮೆ ಕೊಟ್ಟಿದ್ದಾರೆ. ಈಗ ಎದೆ ಬಗೆಯೋಕೆ ಆಗಲ್ಲಾ ಅನಿಸುತ್ತೆ ಅಲ್ವಾ...'' ಎಂದು ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಾಜೀನಾಮೆ ಕೊಟ್ಟಿದ್ದರೂ ಡಾ.ಸುಧಾಕರ್‌, ಎಂ.ಟಿ.ಬಿ.ನಾಗರಾಜ್‌ ಮುಂಬೈಗೆ ಹೋಗಿಲ್ಲ. ಸರಕಾರಕ್ಕೆ ಅಪಾಯ ಇಲ್ಲ. ವಿಶ್ವಾಸವಿರುವ ಕಾರಣಕ್ಕೇ ನಾವೆಲ್ಲಾ ಚರ್ಚಿಸಿ ವಿಶ್ವಾಸಮತ ಕೋರಲು ನಿರ್ಧಾರ ಕೈಗೊಂಡಿದ್ದೇವೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ