ಆ್ಯಪ್ನಗರ

ಸಿದ್ದರಾಮಯ್ಯ ಪ್ರಕಾರ ದೇವೇಗೌಡರು ಎಂದರೆ ಹೇಗೆ ಗೊತ್ತೆ?

ಅಂದು ಕಾಂಗ್ರೆಸ್‌ ಬೆಂಬಲ ಕೊಟ್ಟು ಎಚ್‌ಡಿ ದೇವೇಗೌಡ ಅವರನ್ನು ಪ್ರಧಾನಿ ಮಾಡಿತು. ಕೊನೆಗೆ ಕಾಂಗ್ರೆಸ್‌ ಬೆಂಬಲ ವಾಪಸ್‌ ಪಡೆದಿದ್ದು ಏಕೆ? ಸೀತಾರಾಮ್‌ ಕೇಸರಿ ವಿರುದ್ಧ ಕೇಸು ಹಾಕಿಸದವರು ಯಾರು? ಸಿದ್ದರಾಮಯ್ಯರ ಮಾತಲ್ಲೇ ಕೇಳಿ.

Vijaya Karnataka Web 23 Aug 2019, 7:59 pm
ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಪತನವಾಗಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಆರೋಪಕ್ಕೆ ಸಂಬಂಧಿಸಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತ್ಯುತ್ತ ನೀಡಿದ ಸಿದ್ದರಾಮಯ್ಯ, ದೇವೇಗೌಡರನ್ನು ಬೆಂಬಲಿಸುವ ಪಕ್ಷಕ್ಕೆ ದ್ರೋಹ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.
Vijaya Karnataka Web Siddaramaiah ex cm


ದೇವೇಗೌಡರು ಹೇಗೆ ಅಂದರೆ ಯಾವ ಪಕ್ಷ ಬೆಂಬಲ ಕೊಡುತ್ತೋ ಆ ಪಕ್ಷಕ್ಕೆ ದ್ರೋಹ ಮಾಡುವುದು. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್‌. ಆದರೆ ಸೀತಾರಾಮ್‌ ಕೇಸರಿ ಅವರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಿಸಿದ್ದು ಯಾರು? ಇದರಿಂದಾಗಿ ಸೀತಾರಾಮ್‌ ಕೇಸರಿ ಬೆಂಬಲ ವಾಪಸ್‌ ತೆಗೆದುಕೊಂಡರು. ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದರು. ಸೀತಾರಾಮ್‌ ಕೇಸರಿ ಮೇಲೆ ಕೇಸು ಹಾಕಿಸದೆ ಇದ್ದಿದ್ದರೆ ಮತ್ತಷ್ಟು ದಿನಗಳ ಕಾಲ ಪ್ರಧಾನಿಯಾಗಿ ಇರುತ್ತಿದ್ದರು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈತ್ರಿ ಸರಕಾರ ಪತನಕ್ಕೆ ಅಪ್ಪ-ಮಕ್ಕಳೇ ಕಾರಣ: ಗೌಡರ ಕುಟುಂಬದ ವಿರುದ್ಧ ಕೆಂಡಕಾರಿದ ಸಿದ್ದರಾಮಯ್ಯ

ಬೆಂಬಲಿಸಿದವರಿಗೆ ದ್ರೋಹ ಮಾಡುವುದು ದೇವೇಗೌಡ ಮತ್ತು ಅವರ ಮಕ್ಕಳ ಹುಟ್ಟುಗುಣ. ನಾನು ಮುಖ್ಯಮಂತ್ರಿಯಾಗುವುದನ್ನು, ಮಂತ್ರಿಯಾಗುವುದನ್ನೆಲ್ಲಾ ತಪ್ಪಿಸಿದ್ದು ದೇವೇಗೌಡರು. ಅಂದು ಧರ್ಮಸಿಂಗ್‌ ಸರಕಾರವನ್ನು ಕೆಡವಿದ್ದು ಯಾರು? ಬಿಜೆಪಿ ಜತೆ 20-20 ಸರಕಾರ ಮಾಡಿದ ನಂತರ ಅವರಿಗೂ ಅಧಿಕಾರ ಬಿಟ್ಟುಕೊಡದೆ ದ್ರೋಹ ಮಾಡಿದರು. ಅಂದು ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕಿತ್ತು. ಅಪ್ಪ-ಮಕ್ಕಳು ವಚನಭ್ರಷ್ಟರಾದರು. 37 ಶಾಸಕರ ಬಲ ಹೊಂದಿದ್ದ ಜೆಡಿಎಸ್‌ಗೆ 80 ಶಾಸಕರಿದ್ದ ಕಾಂಗ್ರೆಸ್‌ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡುವ ಮೂಲಕ ಬೇಶರತ್‌ ಬೆಂಬಲಿಸಿತ್ತು. ಆದರೆ ಕಾಂಗ್ರೆಸ್‌ಗೆ ಮತ್ತೆ ದ್ರೋಹ ಮಾಡಿದರು ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ