ಆ್ಯಪ್ನಗರ

ಇಷ್ಟ ಕಷ್ಟಗಳ ಸುಳಿಯಲ್ಲಿ ಸಿದ್ದರಾಮಯ್ಯ

ದೋಸ್ತಿ ಪಕ್ಷಗಳ ಶಾಸಕರ ರಾಜೀನಾಮೆ ಪರ್ವ ಪ್ರಾರಂಭವಾಗುತ್ತಿದ್ದಂತೆ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಸಂದಿಗ್ಧದಲ್ಲಿ ಮುಳುಗಿದಂತಾಗಿದೆ.

Vijaya Karnataka 7 Jul 2019, 5:00 am
ಬೆಂಗಳೂರು : ದೋಸ್ತಿ ಪಕ್ಷಗಳ ಶಾಸಕರ ರಾಜೀನಾಮೆ ಪರ್ವ ಪ್ರಾರಂಭವಾಗುತ್ತಿದ್ದಂತೆ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಸಂದಿಗ್ಧದಲ್ಲಿ ಮುಳುಗಿದಂತಾಗಿದೆ.
Vijaya Karnataka Web siddaramaiah is in like and dislike circle
ಇಷ್ಟ ಕಷ್ಟಗಳ ಸುಳಿಯಲ್ಲಿ ಸಿದ್ದರಾಮಯ್ಯ


ಎಲ್ಲಿಯವರೆಗೆ ಸಿದ್ದು ಭದ್ರಕಾವಲು ಇರುತ್ತದೆ ಅಲ್ಲಿಯವರೆಗೆ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರಕಾರ ಸುಭದ್ರವೆಂಬ ಅಭಿಪ್ರಾಯ ಮೊದಲಿನಿಂದಲೂ ಇತ್ತು. ಇದೇ ಕಾರಣದಿಂದ ಕಾಂಗ್ರೆಸ್‌ ವರಿಷ್ಠರು ಸಿದ್ದು ಅವರಿಗೇ ಸಮನ್ವಯ ಸಮಿತಿಯ ಅಧ್ಯಕ್ಷ ಪಟ್ಟ ಕಟ್ಟಿದ್ದರು. ಸರಕಾರದಲ್ಲಿ ಕಾಂಗ್ರೆಸ್‌ ಕಡೆಯ ನಾಯಕತ್ವವನ್ನು ಡಿಸಿಎಂ ಜಿ.ಪರಮೇಶ್ವರ ಅವರಿಗೆ ವಹಿಸಿದ್ದರೂ ಸಿಎಲ್‌ಪಿ ನಾಯಕರಾಗಿಯೂ ಸಿದ್ದು ಅವರನ್ನು ಪ್ರತಿಷ್ಠಾಪಿಸಲಾಗಿದೆ. ಅಂದರೆ ಮಾಜಿ ಸಿಎಂ ಅವರೊಬ್ಬರೇ ಈ ಸರಕಾರವನ್ನು ಸುರಕ್ಷಿತವಾಗಿ ಇರಿಸಬಲ್ಲರು ಎಂಬುದು ಹೈಕಮಾಂಡ್‌ನ ಆಶಯವಾಗಿತ್ತು.ಆದರೆ ಈಗ ಸಿದ್ದು ಆಪ್ತರೇ ರಾಜೀನಾಮೆ ನೀಡಿರುವುದು ಅವರಿಗೆ ಕಸಿವಿಸಿ ತಂದಿದೆ.

ಇಷ್ಟವೂ ಉಂಟು?

ಹಾಗೆ ನೋಡಿದರೆ ಈ ಸರಕಾರ ಅಸ್ತಿತ್ವಕ್ಕೆ ಬರುವುದು ಸಿದ್ದು ಅವರಿಗೂ ಬೇಕಿರಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಏಕೈಕ ಉದ್ದೇಶದಿಂದ ಜೆಡಿಎಸ್‌ ಹೆಗಲ ಮೇಲೆ ಕಾಂಗ್ರೆಸ್‌ ವರಿಷ್ಠರು ಕೈಹಾಕಿದಾಗ ಸಿದ್ದು ಅವರಿಗೂ ಸಹಕರಿಸುವುದು ಅನಿವಾರ್ಯವಾಯಿತು. ಆದರೆ, ಸರಕಾರದಲ್ಲಿ ಕಾಂಗ್ರೆಸ್‌ ಶಾಸಕರ ಕೆಲಸ ಮಾಡಿಸಿ ಕೊಡಲು ಸಾಧ್ಯವಾಗದಿರುವ ಬಗ್ಗೆ ಸಿದ್ದರಾಮಯ್ಯ ಅವರಿಗೂ ಬೇಸರವಿದೆ. ಈ ಮೈತ್ರಿ ಮುಂದುವರಿದರೆ ಕಾಂಗ್ರೆಸ್‌ ಸಂಘಟನೆ ಮತ್ತಷ್ಟು ನೆಲಕಚ್ಚುವ ಆತಂಕವೂ ಇದೆ. ಈಗ ಎದುರಾಗಿರುವ ಬಿಕ್ಕಟ್ಟಿನಿಂದ ಜೆಡಿಎಸ್‌ನೊಂದಿಗಿನ ನಂಟು ಕಡಿದು ಹೋದರೆ ಕಾಂಗ್ರೆಸ್‌ಗೇ ಅನುಕೂಲ. ಒಂದು ವೇಳೆ ಬಿಜೆಪಿ ಪರ್ಯಾಯ ಸರಕಾರ ರಚಿಸಿದರೂ ತಾವು ಪ್ರತಿಪಕ್ಷದ ನಾಯಕರ ಸ್ಥಾನದಲ್ಲಿ ಕುಳಿತುಕೊಳ್ಳಬಹುದು. ಬಳಿಕ ಚುನಾವಣೆಯಾದರೆ ವೈಯಕ್ತಿಕವಾಗಿಯೂ ತಮ್ಮ ಮಹತ್ವಾಕಾಂಕ್ಷೆಗೆ ಬಲ ಬರುತ್ತದೆ ಎಂಬ ಆಲೋಚನೆಯೂ ಸಿದ್ದು ಮನಸ್ಸಿನಲ್ಲಿದೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ