ಆ್ಯಪ್ನಗರ

ವಿಪಕ್ಷ ನಾಯಕ ಸ್ಥಾನದಲ್ಲಿ ಸಿದ್ದು ಮುಂದುವರಿಕೆ ? ಎಂ. ಬಿ. ಪಾಟೀಲ್‌ ವಿಶ್ವಾಸ

ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಮಾತ್ರಕ್ಕೆ ಜಾಗ ಖಾಲಿ ಇದೆ ಎಂದು ಭಾವಿಸಬೇಕಿಲ್ಲ. ಶೀಘ್ರದಲ್ಲೇ ಈ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Vijaya Karnataka Web 10 Dec 2019, 4:47 pm
ಬೆಂಗಳೂರು: ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅವರ ನಡೆಯನ್ನ ನಾನು ಅಭಿನಂದಿಸುತ್ತೇನೆ. ಆದರೆ, ಆ ಜಾಗ ಖಾಲಿ ಇದೆ ಎಂದು ಭಾವಿಸಬೇಕಿಲ್ಲ. ಶೀಘ್ರದಲ್ಲೇ ಈ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಿಸೈನ್ ಮಾಡಿದ್ದಾರೆ. ಇದನ್ನ ನಾನು ಸ್ವಾಗತಿಸುತ್ತೇನೆ. ಆದರೆ,ರಾಜೀನಾಮೆ ನೀಡಿದ ತಕ್ಷಣ ಅಂಗೀಕಾರವಾಗಲ್ಲ. ಆ ಜಾಗಗಳು ಖಾಲಿಯಾಗಲ್ಲ ಎಂದರು. ಈ ಮೂಲಕ ಸಿದ್ದರಾಮಯ್ಯ ಅವರು ವಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web M B patil


ಸಿದ್ದರಾಮಯ್ಯ ರಾಜೀನಾಮೆ ಕುರಿತು ಹೈಕಮಾಂಡ್ ಎಲ್ಲರ ಅಭಿಪ್ರಾಯ ಪಡೆಯಲಿದೆ. ಆ ಸಂದರ್ಭದಲ್ಲಿ ನಾನು ನನ್ನ ಅಭಿಪ್ರಾಯ ಹೇಳುತ್ತೇನೆ. ವೀರೇಂದ್ರ ಪಾಟೀಲರ ಬಳಿಕ ಲಿಂಗಾಯತ ಸಮುದಾಯ, ಎಸ್ ಎಂ ಕೃಷ್ಣ ಅವರ ಬಳಿಕ ಒಕ್ಕಲಿಗ ಸಮುದಾಯ ಕಾಂಗ್ರೆಸ್ ನಿಂದ ದೂರವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಚಿತ್ರ ಸಹಿತ ಫಲಿತಾಂಶ ವಿವರ: ಉಪ ಸಮರದಲ್ಲಿ ಗೆದ್ದ ಸೇನಾನಿಗಳಿವರು

ಕಾಂಗ್ರೆಸ್ ಪಕ್ಷದಲ್ಲಿ ವೀರೇಂದ್ರ ಪಾಟೀಲ್ ನಂತರ ಲಿಂಗಾಯತ ಸಮುದಾಯವನ್ನ ಹಾಗೂ ಎಸ್.ಎಂ.ಕೃಷ್ಣ ನಂತರ ಒಕ್ಕಲಿಗ ಸಮುದಾಯವನ್ನ ಕಡೆಗಣಿಸಲಾಗಿದೆ. ಜನರಲ್ಲಿ ಕೂಡ ಈ ಭಾವನೆ ಬೇರೂರಿದೆ. ಇದನ್ನು ನಾನೂ ಕೂಡ ಒಪ್ಪಿಕೊಳ್ಳುತ್ತೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ವಿಚಾರ. ಹಲವು ಅಂಶಗಳಿಂದ ನಮಗೆ ಹಿನ್ನಡೆಯಾಗಿದೆ. ಸೋಲಿನ ಬಗ್ಗೆ ಆತ್ಮಾವಲೋಕನ ಬೇಕಾಗಿದೆ. ಎಲ್ಲ ಸಮುದಾಯಗಳ ವಿಶ್ವಾಸ ಪಡೆಯಬೇಕಿದೆ. ದಲಿತ,ಅಲ್ಪಸಂಖ್ಯಾತ ಸಮುದಾಯ ರಕ್ಷಣೆ ಮಾಡಿಕೊಳ್ಳಬೇಕು. ಉಳಿದ. ಸಮುದಾಯಗಳನ್ನೂ ಹತ್ತಿರ ಕರೆದುಕೊಳ್ಳಬೇಕು. ನೇಕಾರ,ಕುಂಬಾರ,ದೊಡ್ಡ ಸಮುದಾಯ ವಿಶ್ಚಾಸಗಳಿಸಬೇಕು. ಇದೆಲ್ಲವನ್ನೂ ನಾವು ಮಾಡಬೇಕಿದೆ. ಈ ರೀತಿ ಮಾಡಿದರೆ ಪಕ್ಷವನ್ನ ಬಲಗೊಳಿಸಬಹುದು ಎಂದರು.

'ನಮ್ಮ ಮೆಟ್ರೋ' ಅವಧಿ ವಿಸ್ತರಣೆ: ಜ.1ರಿಂದ ರಾತ್ರಿ 12 ರವರೆಗೂ ರೈಲುಸೇವೆ ಲಭ್ಯ

ತಪ್ಪು ಸಂದೇಶಗಳು ಕೂಡ ನಮಗೆ ಹಿನ್ನಡೆ ತಂದಿವೆ. ಲಿಂಗಾಯತ,ಒಕ್ಕಲಿಗರ ವಿಶ್ವಾಸ ಗಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ಮುನ್ನಡೆಯಬೇಕು. ಖರ್ಗೆ,ಸಿದ್ದರಾಮಯ್ಯ ಅವರಂತಹ ಹಿರಿಯರ, ಸಮರ್ಥರ ನೇತೃತ್ವದಲ್ಲಿ ಪಕ್ಷವನ್ನ ಮತ್ತೆ ಕಟ್ಟಬೇಕಿದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ