ಆ್ಯಪ್ನಗರ

ಸಿದ್ದರಾಮಯ್ಯ ನೀವು ದಲಿತರನ್ನು, ಹಿಂದುಳಿದವರನ್ನು, ಮುಸ್ಲಿಮರನ್ನು ನುಂಗಿದ್ರಿ

ಮೀಸಲಾತಿ ಕಾಂಗ್ರೆಸ್ ಕೊಟ್ಟಿದ್ದಲ್ಲ, ಅಂಬೇಡ್ಕರ್ ಕೊಟ್ಟಿದ್ದು. ದಲಿತರು ಕಾಂಗ್ರೆಸ್ ಆಸ್ತಿ ಅಲ್ಲ.‌ ಇದೀಗ ದಲಿತರ ನಡೆ ಬಿಜೆಪಿ ಕಡೆಯಾಗಿದ್ದು ಎಲ್ಲಾ ದಲಿತರು ಬಿಜೆಪಿಯಲ್ಲಿ ಸಂಗಮವಾಗುತ್ತಿದ್ದಾರೆ.

Vijaya Karnataka Web 3 Nov 2021, 1:17 pm
ಬೆಂಗಳೂರು: ದಲಿತ ನಾಯಕರು ಹೊಟ್ಟೆಪಾಡಿಗಾಗಿ ಬಿಜೆಪಿ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಕೂಡಲೇ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
Vijaya Karnataka Web ಬಿಜೆಪಿ ಪ್ರತಿಭಟನೆ
ಬಿಜೆಪಿ ಪ್ರತಿಭಟನೆ


ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬೆಂಗಳೂರಿನ ಮೌರ್ಯ ಸರ್ಕಲ್‌ನಲ್ಲಿ ಬುಧವಾರ ಬಿಜೆಪಿ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಕುಡಚಿ ಬಿಜೆಪಿ ಶಾಸಕ ಪಿ ರಾಜೀವ್ ಮಾತನಾಡಿ, ಸಿದ್ದರಾಮಯ್ಯ ಹೇಳಿಕೆ ಅಂಬೇಡ್ಕರ್ ಕೊಟ್ಟ ಹಕ್ಕನ್ನು ಕಿತ್ತುಕೊಳ್ಳುವ ಹೇಳಿಕೆ. ದಲಿತರು ಸ್ವಾಭಿಮಾನಕ್ಕಾಗಿ ರಾಜಕೀಯ ಆಂದೋಲನ ನಡೆಸುತ್ತಿದ್ದಾರೆ‌. ಬದಲಾಗಿ ಹೊಟ್ಟೆಪಾಡಿಗಾಗಿ ಅಲ್ಲ ಎಂದು ಹೇಳಿದರು.

ಆದರೆ ಸಿದ್ದರಾಮಯ್ಯ ಹೊಟ್ಟೆ ಪಾಡಿಗಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಬಂದಿದ್ದಾರೆ. ಸಿದ್ದರಾಮಯ್ಯ ಹೇಳಿಕೆಯಿಂದ ದಲಿತ ಸಮುದಾಯಕ್ಕೆ ನೋವಾಗಿದೆ. ಈ ರೀತಿಯ ಹೇಳಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕ್ಷಮೆ ಕೇಳಲು ಆಗ್ರಹಿಸಿದರು.

ಜೆಡಿಎಸ್‌ನಿಂದ ಪಕ್ಷಾಂತರ; ಕಾರ್ಯಕರ್ತರ ಸಮನ್ವಯತೆಯೇ ದೊಡ್ಡ ಸವಾಲು!

ಮೀಸಲಾತಿ ಕಾಂಗ್ರೆಸ್ ಕೊಟ್ಟಿದ್ದಲ್ಲ, ಅಂಬೇಡ್ಕರ್ ಕೊಟ್ಟಿದ್ದು. ದಲಿತರು ಕಾಂಗ್ರೆಸ್ ಆಸ್ತಿ ಅಲ್ಲ.‌ ಇದೀಗ ದಲಿತರ ನಡೆ ಬಿಜೆಪಿ ಕಡೆಯಾಗಿದ್ದು ಎಲ್ಲಾ ದಲಿತರು ಬಿಜೆಪಿಯಲ್ಲಿ ಸಂಗಮವಾಗುತ್ತಿದ್ದಾರೆ. ಸಿದ್ದರಾಮಯ್ಯ ವಿಷ ಸರ್ಪದಂತೆ ಸರ್ಪದ ರೀತಿಯಲ್ಲಿ ಕಾಂಗ್ರೆಸ್ ಗೆ ಬಂದು ಉಳಿದವರನ್ನು ಮುಗಿಸಿ ಬಿಟ್ಟಿದ್ದಾರೆ. ದಲಿತರು ಬಿಜೆಪಿಗೆ ಬರುತ್ತಿರುವುದರಿಂದ ಸಿದ್ದರಾಮಯ್ಯಗೆ ಹೊಟ್ಟೆ ಉರಿ ಎಂದರು.

ಸಿದ್ದರಾಮಯ್ಯ ಅವರದ್ದು ದೊಡ್ಡ ಹೊಟ್ಟೆ. ದಲಿತರನ್ನು ನುಂಗಿದ್ರಿ, ಹಿಂದುಳಿದವರನ್ನು, ಮುಸ್ಲಿಮರನ್ನು ನುಂಗಿದ್ರಿ ಎಂದು ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದರು.

ಬಿಟ್‌ ಕಾಯಿನ್‌ ದಂಧೆ ಪ್ರಕರಣದಲ್ಲಿ ಬಿಜೆಪಿಯ ಯಾವ ನಾಯಕರೂ ಇಲ್ಲ; ಆರಗ ಜ್ಞಾನೇಂದ್ರ

ದಲಿತರು ಅಂದು ಮತ ಹಾಕದಿದ್ರೆ, ನಿಮ್ಮ ರಾಜಕೀಯ ಭವಿಷ್ಯ ಅಂದೇ ಹೋಗುತ್ತಿತ್ತು. ದಲಿತ ನಾಯಕರು ನಿಮ್ಮನ್ನು ಬರಮಾಡಿಕೊಳ್ಳದಿದ್ರೆ ಏನಾಗ್ತಿದ್ದೆ. ನೀವು ನಮ್ಮ ಹೊಟ್ಟೆ ಪಾಡಿನ ಬಗ್ಗೆ ಮಾತನಾಡ್ತೀಯಾ? ಶ್ರೀನಿವಾಸ್ ಪ್ರಸಾದ್‌ಗೆ ನೀನು ಏನು ಮಾಡಿದೆ ಗೊತ್ತಿದೆ. ಎಚ್‌ ಸಿ ಮಹದೇವಪ್ಪ ಮಾತೆತ್ತಿದರೆ ನಿನ್ನ ಜೊತೆಯಲ್ಲೇ ಇರ್ತಿದ್ರು, ಯಾಕಪ್ಪ ಸೋಲಿಸಿದೆ. ಪರಮೇಶ್ವರ್ ಬಗ್ಗೆ ಏನಾಯ್ತು? ಎಂದು ಏಕವಚನದಲ್ಲಿ ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ