ಆ್ಯಪ್ನಗರ

ರಾಜಕೀಯ ಬೇರೆ ಮನುಷ್ಯ ಸಂಬಂಧ ಬೇರೆ, ಬಿಎಸ್‌ವೈ ಅಭಿನಂದನಾ ಸಮಾವೇಶದಲ್ಲಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಗುರುವಾರ ತಮ್ಮ 78ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದು, ಅರಮನೆ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದು ಹೀಗೆ.

Vijaya Karnataka Web 27 Feb 2020, 7:03 pm
ಬೆಂಗಳೂರು: ರಾಜಕೀಯ ಬೇರೆ ಹಾಗೂ ಮನುಷ್ಯ ಸಂಬಂಧಗಳು ಬೇರೆಯಾಗಿದೆ. ನಾವು ಎಷ್ಟೇ ದೀರ್ಘಕಾಲ ರಾಜಕೀಯದಲ್ಲಿದ್ದರೂ, ಪರಸ್ಪರ ವಿರೋಧ ವ್ಯಕ್ತಮಾಡುತ್ತಿದ್ದರೂ ಮನುಷ್ಯ ಸಂಬಂಧಗಳಿಗೆ ಧಕ್ಕೆ ಬರಬಾರದು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
Vijaya Karnataka Web siddaramaiah speech at bs yeddyurappa birthday celebration
ರಾಜಕೀಯ ಬೇರೆ ಮನುಷ್ಯ ಸಂಬಂಧ ಬೇರೆ, ಬಿಎಸ್‌ವೈ ಅಭಿನಂದನಾ ಸಮಾವೇಶದಲ್ಲಿ ಸಿದ್ದರಾಮಯ್ಯ


ಬೆಂಗಳೂರಿನ ನೆಹರೂ ಮೈದಾನದಲ್ಲಿ ನಡೆದ ಬಿಎಸ್‌ವೈ ಅಭಿನಂದನಾ ಸಮಾವೇಶದಲ್ಲಿ ಭಾಗಿಯಾಗಿ ಹುಟ್ಟುಹಬ್ಬಕ್ಕೆ ಶುಭಕೋರಿದರು.

ಬಿಎಸ್‌ವೈಗೆ ಜನ್ಮದಿನದ ಸಂಭ್ರಮ, ಅರಮನೆ ಮೈದಾನದಲ್ಲಿ ನಡೆಯುತ್ತಿದೆ ಅಭಿನಂದನಾ ಸಮಾವೇಶ

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನನ್ನ ಸಿದ್ಧಾಂತ ಬೇರೆ ಬಿಎಸ್‌ವೈ ಸಿದ್ದಾಂತ ಬೇರೆಯಾಗಿದೆ. ಆದರೆ ಅದು ಕೇವಲ ರಾಜಕಾರಣಕ್ಕೆ ಸೀಮಿತ. ನಮ್ಮ ನಮ್ಮ ಸಿದ್ಶಾಂತವನ್ನು ಜನರ ಮುಂದಿಡುತ್ತೇವೆ ಜನರು ಅಂತಿಮ ತೀರ್ಮಾನ ಮಾಡುತ್ತಾರೆ. ಆದರೆ ಇದರಿಂಂದ ವೈಯಕ್ತಿಕ ಸಂಬಂಧಕ್ಕೆ ಯಾವುದೇ ಸಮಸ್ಯೆಯಾಗಬಾರದು” ಎಂದರು.

ಬಿಎಸ್‌ವೈ ಹೋರಾಟದ ಹಿನ್ನೆಲೆಯಿಂದ ಬಂದವರು ಎಂದ ಸಿದ್ದರಾಮಯ್ಯ, ಅವರು ನಾಲ್ಕು ಬಾರಿ ಸಿಎಂ ಆಗಿದ್ದಾರೆ, ನಾನು ಒಂದೇ ಬಾರಿ ಸಿಎಂ ಆಗಿದ್ದೇನೆ ಎಂದು ಹಾಸ್ಯ ಚಟಾಕಿಯನ್ನು ಈ ವೇಳೆ ಹಾರಿಸಿದರು.

ಬಿಎಸ್‌ವೈ ಉತ್ತರಾಧಿಕಾರಿ ವಿಜಯೇಂದ್ರ ! ಪುತ್ರನ ಪಟ್ಟಾಭಿಷೇಕಕ್ಕೆ ಅಡ್ಡಿ ಯಾರು?

ಬಿಜೆಪಿ ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬಂದಿದ್ದರೆ ಅದಕ್ಕೆ ಬಿಎಸ್‌ ಯಡಿಯೂರಪ್ಪ ಕಾರಣ. ಇದನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ. ಅನೇಕ ಒತ್ತಡಗಳು ಸಿಎಂ ಆಗಿದ್ದಾಗ ಇರುವುದು ಸಹಜ, ಅವುಗಳನ್ನು ಸಹಿಸಿಕೊಂಡು ಹೋಗುವ ಶಕ್ತಿ ಅವರಿಗೆ ಸಿಗಲಿ ಎಂದು ಹಾರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ