ಆ್ಯಪ್ನಗರ

ಪಕ್ಷಾಂತರದ ಪಿಡುಗು ಪ್ರಜಾಪ್ರಭುತ್ವ ವ್ಯಸ್ಥೆಯ ಅಡಿಗಲ್ಲನ್ನೇ ಅಲ್ಲಾಡಿಸುತ್ತದೆ: ಸಿದ್ದರಾಮಯ್ಯ

ಸದನದಲ್ಲಿ ವಿಶ್ವಾಸ ಮತ ಪ್ರಸ್ತಾಪದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಷಣ ಮಾಡಿದರು.

Vijaya Karnataka Web 18 Jul 2019, 12:39 pm
ಬೆಂಗಳೂರು: ಸದನದಲ್ಲಿ ಕ್ರಿಯಾಲೋಪ ಎತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷಾಂತರದ ಪಿಡುಗು ಪ್ರಜಾಪ್ರಭುತ್ವ ವ್ಯಸ್ಥೆಯ ಅಡಿಗಲ್ಲನ್ನೇ ಅಲ್ಲಾಡಿಸುತ್ತದೆ ಎಂದು ಹೇಳಿದರು.
Vijaya Karnataka Web siddaramaiah


ವಿಶ್ವಾಸ ಮತ ಪ್ರಸ್ತಾಪದ ಮೇಲೆ ಭಾಷಣ ಮಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು 10ನೇ ಷಡ್ಯುಲ್ ಬಗ್ಗೆ ಪ್ರಸ್ತಾಪಿಸಿದರು. 1967ರಲ್ಲಿ ಗಯಾ ಲಾಲ್ ಮೂರು ಭಾರಿ ಪಕ್ಷಾಂತರ ಮಾಡುತ್ತಾರೆ. ಒಂದೇ ದಿನದಲ್ಲಿ 3 ಭಾರಿ ಪಕ್ಷಾತಂರ ಮಾಡುತ್ತಾರೆ. ಆಗ ಪಕ್ಷಾಂತರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತದೆ. ಇದನ್ನು ತಪ್ಪಿಸಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾಯಿತು. ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವದ ಅಡ್ಡಿಗಲು ಅಲ್ಲಾಡಿಸುತ್ತೆ. ಪ್ರಜಾಪ್ರಭುತ್ವ ಶುದ್ದೀಕರಣಕ್ಕೆ ಪಕ್ಷಾಂತರ ಪಿಡುಗಿಗೆ ಕಡಿವಾಣ ಹಾಕಲೇಬೇಕಿದೆ ಎಂದರು.

HDK Trust Vote LIVE: ಎಚ್‌ಡಿಕೆ ವಿಶ್ವಾಸಮತ ನಿರ್ಣಯ ಮಂಡನೆ, ಪ್ರತಿಪಕ್ಷದ ವಿರುದ್ಧ ವಾಗ್ದಾಳಿ


ಸಿದ್ದರಾಮಯ್ಯ ಭಾಷಣದ ವೇಳೆ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಸಂವಿಧಾನದ ಕುರಿತು ಸ್ಪಷ್ಟನೆ ಕೇಳಲು ಸದನದಲ್ಲಿ ಕ್ರಿಯಾಲೋಪದ ಕುರಿತು ಚರ್ಚಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಸಿದ್ದರಾಮಯ್ಯ ಅವರು ಕ್ರಿಯಾಲೋಪ ಎತ್ತಿದ್ದಕ್ಕೆ ಮಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಶಾಸಕ ಕೆ.ಜಿ.ಬೋಪಯ್ಯ ಮಧ್ಯ ಪ್ರವೇಶಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಡಿ.ಕೆ.ಶಿವಕುಮಾರ್ ಆಕ್ಷೇಪ, 'ನಿಮ್ಮ ತೀರ್ಪಿಗೆ ಸುಪ್ರೀಂಕೋರ್ಟ್ ಛಿಮಾರಿ ಹಾಕಿದೆ. ಇದಕ್ಕೆ ಸಾಕ್ಷಿ ಬೀದಿಪಾಲಾದ ವೆಂಕಟರಾಮಪ್ಪ ಇದ್ದಾರೆ' ಎಂದರು.

ಸಿದ್ದರಾಮಯ್ಯ ಸುದೀರ್ಘ ಭಾಷಣದ ಮೂಲಕ ಕಾಲಹರಣ ತಂತ್ರ, ಪ್ರತಿಪಕ್ಷದ ತೀವ್ರ ವಿರೋಧ

ಪಾಯಿಂಟ್ ಆಫ್ ಆರ್ಡರ್ ಎತ್ತುವ ಪ್ರಶ್ನೆ ಈ ಪ್ರಸ್ತಾವನೆಯಲ್ಲಿ ಇಲ್ಲ. ಹಾಗಿದ್ದರೂ ಕ್ರಿಯಾಲೋಪ ಎತ್ತಿರುವುದರ ಉದ್ದೇಶವೇನು?: ಸದನವನ್ನು ದುರುಪಯೋಗಪಡಿಸಿಕೊಳ್ಳಲು ಸಭಾಧ್ಯಕ್ಷರು ಅವಕಾಶ ನೀಡಬಾರದು ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಪ್ರಶ್ನೆ ಆಗ್ರಹಿಸಿದ್ದಾರೆ.

ಕ್ರಿಯಾಲೋಪ ಎತ್ತುವ ಮೂಲಕ ಸಿದ್ದರಾಮಯ್ಯ ಸುದೀರ್ಘ ಭಾಷಣ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದ್ದು, ಸಿಎಲ್‌ಪಿ ನಾಯಕರಾಗಿ ನಿರ್ದಿಷ್ಟ ವಿಷಯದ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ