ಆ್ಯಪ್ನಗರ

ಕೊನೆಗೂ ಮನೆ ಬದಲಿಸಲು ಮುಂದಾದ ಸಿದ್ದರಾಮಯ್ಯ: ಹೊಸ ನಿವಾಸದಲ್ಲಿ ಪೂಜೆ

ಕಾವೇರಿ ನಿವಾಸದಲ್ಲಿದ್ದ ಸಿದ್ದರಾಮಯ್ಯ ಅಂತೂ ಇಂತೂ ತಮ್ಮ ಮನೆ ಖಾಲಿ ಮಾಡಲು ನಿರ್ಧರಿಸಿದ್ದಾರೆ. ಈ ಹಿಂದೆ ತಾವು ಪ್ರತಿಪಕ್ಷ ನಾಯಕರಾಗಿದ್ದಾಗ ವಾಸ್ತವ್ಯ ಹೂಡಿದ್ದ ಕುಮಾರಪಾರ್ಕ್ ಪೂರ್ವ ನಿವಾಸಕ್ಕೆ ಸಿದ್ದರಾಮಯ್ಯ ವಾಪಸಾಗಲಿದ್ದಾರೆ ಎಂದು ತಿಳಿದುಬಂದಿದೆ.

Vijaya Karnataka Web 29 Jan 2020, 4:36 pm
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕಾವೇರಿ ನಿವಾಸ ಖಾಲಿ ಮಾಡಲು ನಿರ್ಧರಿಸಿದ್ದು ಹೊಸ ನಿವಾಸ ಪ್ರವೇಶಕ್ಕೆ ಇಂದು ಅಧಿಕೃತ ಸೂಚನೆ ನೀಡಿದ್ದಾರೆ. ಅಲ್ಲದೆ, ಈ ಹಿಂದೆ ತಾವು ಪ್ರತಿಪಕ್ಷ ನಾಯಕರಾಗಿದ್ದಾಗ ವಾಸ್ತವ್ಯ ಹೂಡಿದ್ದ ಕುಮಾರಪಾರ್ಕ್ ಪೂರ್ವ ನಿವಾಸಕ್ಕೆ ಸಿದ್ದರಾಮಯ್ಯ ವಾಪಸಾಗಲಿದ್ದಾರೆ ಎಂದು ತಿಳಿದುಬಂದಿದೆ.
Vijaya Karnataka Web siddaramaiah cauvery bm


ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ನಿವಾಸದಲ್ಲಿ ಪೂಜೆ ಕೂಡ ನೆರವೇರಿಸಿದ್ದಾರೆ. ಅಲ್ಲದೆ, ಇನ್ನೆರಡು ದಿನಗಳಲ್ಲಿ ಕಾವೇರಿ ನಿವಾಸ ಖಾಲಿ ಮಾಡಲಿದ್ದಾರೆ ಎಂದು ತಿಳಿದುಬಂದಿದ್ದು, ಗಾಂಧಿ ಭವನದ ಹಿಂಭಾಗದಲ್ಲಿರುವ ಕುಮಾರಪಾರ್ಕ್ ಪೂರ್ವ ನಿವಾಸಕ್ಕೆ ಪ್ರವೇಶ ಮಾಡಲಿದ್ದಾರೆ. ಹಿಂದೆ ಮಾಜಿ ಸಚಿವ ಎಚ್ಡಿ ರೇವಣ್ಣ ಇದ್ದ ಮನೆ ಖಾಲಿ ಮಾಡಿ ಸುಣ್ಣ, ಬಣ್ಣ ಬಳಿಯಲಾಗಿದೆ. ಇಂದು ನಿವಾಸದಲ್ಲಿ ಪೂಜೆ ಕೂಡ ನೆರವೇರಿದ್ದು ಸಿದ್ದರಾಮಯ್ಯ ಇದರಲ್ಲಿ ಪಾಲ್ಗೊಂಡು ತೆರಳಿದ್ದಾರೆ. ಇನ್ನೆರಡು ದಿನಗಳಲ್ಲಿ ಸಿದ್ದರಾಮಯ್ಯ ಹೊಸ ಮನೆ ಪ್ರವೇಶ ಮಾಡಲಿದ್ದಾರೆ. ಹೊಸ ಮನೆಯಲ್ಲಿ ಇಂದು ಪೂಜೆ ನೆರವೇರಿಸಿದ್ದಾರೆ. ಮನೆ ಬಾಗಿಲಿಗೆ ಹೂ ಕಟ್ಟಿ, ಪ್ರವೇಶದ್ವಾರಕ್ಕೆ ಕುಂಬಳಕಾಯಿ ಒಡೆದು, ತುಳಸಿಕಟ್ಟೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದೆ.

ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದು, ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ನಂತರ ಸತತ 6.5 ವರ್ಷಗಳ ಕಾಲ ಕಾವೇರಿಯಲ್ಲಿ ವಾಸ್ತವ್ಯ ಹೂಡಿದ್ದರು. ಇದೀಗ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಬರಲು ಮುಂದಾಗಿರುವ ಹಿನ್ನೆಲೆ ಅನಿವಾರ್ಯವಾಗಿ ಮನೆ ಮಾಡಲಿದ್ದಾರೆ. ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸುವ ಮುನ್ನ ಪ್ರತಿಪಕ್ಷದ ನಾಯಕರಾಗಿದ್ದ ಸಂದರ್ಭ ಹಾಗೂ ಅಧಿಕಾರ ವಹಿಸಿಕೊಂಡ ಮೊದಲ ಒಂದು ವಾರ ಸಿದ್ದರಾಮಯ್ಯ ಇದೇ ಕುಮಾರಕೃಪ ಪೂರ್ವ ನಿವಾಸದಲ್ಲಿ ವಾಸವಾಗಿದ್ದರು. ಮರಳಿ ಅದೇ ನಿವಾಸಕ್ಕೆ ಇನ್ನೆರಡು ದಿನಗಳಲ್ಲಿ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ಉಡುಪಿ: ದಲಿತನೆಂಬ ಕಾರಣಕ್ಕಾಗಿ ಹಿಂದೂ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಕಾರ; ಸಿದ್ದರಾಮಯ್ಯ ಕಿಡಿ

ಸಿದ್ದರಾಮಯ್ಯ ಗರಂ
ಇನ್ನು, ಸಿದ್ದರಾಮಯ್ಯ ಕುಟುಂಬಸ್ಥರಿಂದ ಕುಮಾರಕೃಪ ಪೂರ್ವ ಗೃಹದಲ್ಲಿ ಪೂಜೆ ನೆರವೇರಿದೆ. ಅರ್ಚಕರನ್ನು ಕರೆಸಿ ವಿಶೇಷವಾಗಿ ಪೂಜೆ ನಡೆಸಲಾಗಿದೆ. ತುಳಸಿ ಕಟ್ಟೆಗೆ ಕುಟುಂಬ ಸದಸ್ಯರು ಪೂಜೆ ನೆರವೇರಿಸಿದ ನಂತರವೇ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿದ್ದಾರೆ. ಇವರ ಆಗಮನವನ್ನು ಚಿತ್ರೀಕರಿಸಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಗರಂ ಆದ ಸಿದ್ದರಾಮಯ್ಯ ಅಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ಮಾಧ್ಯಮ ಸಿಬ್ಬಂದಿ ಹೊರ ಬಂದ ನಂತರ ನಿವಾಸದ ಒಳ ತೆರಳಿದ ಮಾಜಿ ಸಿಎಂ, ಮುಂದುವರಿದ ಪೂಜಾ ವಿಧಿವಿಧಾನಗಳಲ್ಲಿ ಪಾಲ್ಗೊಂಡಿದ್ದಾರೆ.

ಉಪಹಾರದ ನೆಪದಲ್ಲಿ ಸಿದ್ದು, ಖರ್ಗೆ ಮಾತುಕತೆ; ‘ಕೈ’ ಸಂಧಾನಕ್ಕೆ ನಾಯಕರ ಪ್ರಯತ್ನ !

ನೂತನ ಸರಕಾರಿ ನಿವಾಸದ ಪೂಜೆ ಮುಗಿಸಿ ತೆರಳಿದ ಸಿದ್ದರಾಮಯ್ಯ, ಆಗಲೂ ಸಹ ಮಾಧ್ಯಮದವರ ಜೊತೆ ಮಾತನಾಡದೆ ತೆರಳಿದ್ದಾರೆ. ನೂತನ ನಿವಾಸದಿಂದ ಕಾವೇರಿ ನಿವಾಸಕ್ಕೆ ನೇರವಾಗಿ ತೆರಳಿದ್ದಾರೆ.

ರಾಜ್ಯದಲ್ಲೂ ಪರಿಷತ್‌ ವಿಸರ್ಜನೆ ಪ್ರಸ್ತಾಪ: ಸಿದ್ದರಾಮಯ್ಯ ಸರಕಾರದಲ್ಲಿ ಮಂಡನೆಯಾಗಿದ್ದ ಮಸೂದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ