ಆ್ಯಪ್ನಗರ

ಬೀಜ ಮಸೂದೆ ಕುರಿತು ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ: ರೈತರ ಹಿತರಕ್ಷಣೆ ಮಾಡುವಂತೆ ಮನವಿ

ಕೇಂದ್ರ ಸರಕಾರ ಕಾಯ್ದೆಯಾಗಿ ತರಲು ಹೊರಟಿರುವ ಬೀಜ ಮಸೂದೆ ಕುರಿತು ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಹಾಗೂ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಸದಾಂದಗೌಡರಿಗೆ ಪತ್ರ ಬರೆದಿದ್ದಾರೆ.

Vijaya Karnataka Web 11 Feb 2020, 12:36 pm
ಬೆಂಗಳೂರು: 2019ರ ಬೀಜ ಮಸೂದೆ ಕುರಿತು ದೇಶಾದ್ಯಂತ ರೈತರು ಚರ್ಚೆ ನಡೆಸುತ್ತಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ರೈತರಿಗೆ ಮಾರಕವಾಗಿರುವ ಬೀಜ ಮಸೂದೆಯನ್ನು ಕಾಯ್ದೆ ಮಾಡುವ ಬದಲು ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ. ಅಲ್ಲದೆ, ಕೇಂದ್ರ ಸರಕಾರಕ್ಕೆ ಈ ಕುರಿತು ಒತ್ತಡ ತರಬೇಕೆಂದು ಕೇಂದ್ರ ಸಚಿವ ಸದಾನಂದ ಗೌಡರಿಗೂ ಕನ್ನಡದಲ್ಲಿ ಪತ್ರ ಬರೆದಿದ್ದಾರೆ.
Vijaya Karnataka Web siddaramaiah modi toi


2019ರ ಬೀಜ ಮಸೂದೆಯು ಜೀವ ವೈವಿಧ್ಯ ರಕ್ಷಣೆ, ರೈತರ ಹಿತಾಸಕ್ತಿಯನ್ನು ರಕ್ಷಿಸುವುದರ ಪರವಾಗಿಲ್ಲ. ಬದಲಾಗಿ ಖಾಸಗಿ ಬೀಜ ಉತ್ಪಾದಕರಿಗೆ, ಬಹು ರಾಷ್ಟ್ರೀಯ ಕಂಪೆನಿಗಳಿಗೆ ಮಣೆ ಹಾಕಿ ಲಾಭ ತಂದುಕೊಡಲು ಹೊರಟಿರುವಂತಿದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಅಲ್ಲದೆ, ಈಗಾಗಲೇ ಬೀಜ, ಔಷಧಿ ಮತ್ತು ಕೃಷಿ ಯಂತ್ರೋಪಪಕರಣಗಳನ್ನು ತಯಾರಿಸಿ ಮಾರುವ ಬೃಹತ್‌ ಕಂಪೆನಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಬಳಲುತ್ತಿರುವ ರೈತಾಪಿ ಸಮುದಾಯಗಳು ತಾವು ಉತ್ಪಾದಿಸಿದ ಬೀಜವನ್ನು ಕೊಡು - ಕೊಳ್ಳಲು ಈ ಕಾಯಿದೆಯು ಅಡ್ಡಿ ಮಾಡುತ್ತಿದೆ. ಬೀಜ, ಗೊಬ್ಬರ, ಔಷಧಿ, ಮಾರುಕಟ್ಟೆಯ ಕುರಿತು ಕೇಂದ್ರ ಸರಕಾರವು ಜನಪರವಾದ ನೀತಿಯನ್ನು ರೂಪಿಸಬೇಕಾಗಿದೆ.

ರೈತರ ಹಕ್ಕು ರಕ್ಷಿಸದ ಬೀಜ ಮಸೂದೆ ಬೇಡ: ರೈತರು, ತಜ್ಞರಿಂದ ಹೋರಾಟದ ಎಚ್ಚರಿಕೆ

ದೇಶದ ಕೃಷಿ ಸಂಸ್ಕೃತಿಯಲ್ಲಿ ಬೀಜವೆಂಬುದು ಸಮುದಾಯದ ಸ್ವತ್ತು. ಇದನ್ನು ಜೀವ ವೈವಿಧ್ಯ ಕಾನೂನು ಸಹ ಪುರಸ್ಕರಿಸುತ್ತದೆ. ಇವುಗಳನ್ನು ಪರಿಗಣಿಸದ ಈ ಮಸೂದೆಯು ಬೀಜ ನೋಂದಣಿ, ಧೃಡೀಕರಣ ಇವುಗಳಿಗೆ ಮಹತ್ವ ನೀಡುತ್ತದೆ. ಇಂಥದನ್ನು ಆದಿವಾಸಿ, ಅಲೆಮಾರಿ ರೈತರು ಮಾಡಲು ಸಾಧ್ಯವೆ? ಹಾಗಾಗಿ ಇದು ಬೃಹತ್‌ ಕಂಪೆನಿಗಳಿಗೆ ಅನುಕೂಲ ಮಾಡಿಕೊಡುವುದಕ್ಕೆ ಹುನ್ನಾರದಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿಗೆ ಹಾಗೂ ಸದಾನಂದಗೌಡರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ.

ಬಿತ್ತನೆ ಬೀಜ ವಿಧೇಯಕ: ರೈತ ಹಿತಕ್ಕಿಂತ ಕಂಪನಿ ಲಾಬಿ ಮೇಲಾಯಿತೆ?

ಜತೆಗೆ, ಡಾ. ಸ್ವಾಮಿನಾಥನ್‌ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು. ಈ ಸಂಬಂಧ ಕೇಂದ್ರ ಸರಕಾರಕ್ಕೆ ಒತ್ತಡ ತರಬೇಕು ಎಂದೂ ಕನ್ನಡದಲ್ಲಿ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಸದಾನಂದಗೌಡರಿಗೆ ಬರೆದಿರುವ ಪತ್ರದಲ್ಲಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೃಷಿಕರ ಮೇಲೆ ಬಿತ್ತನೆ ಬೀಜ ವಿಧೇಯಕದ ತೂಗುಗತ್ತಿ: ಬಜೆಟ್‌ ಅಧಿವೇಶನದಲ್ಲಿ ಮಂಡನೆ ಸಾಧ್ಯತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ