ಆ್ಯಪ್ನಗರ

ಪ್ಯಾಂಟ್ ಬಿಟ್ಟು, ಸಿಎಂ ಧೋತಿ ಧರಿಸಲು ಆರಂಭಿಸಿದ್ದು ಏಕೆ ಗೊತ್ತಾ?

ಮೊದಲು ಪ್ಯಾಂಟ್‌ ಧರಿಸುತ್ತಿದ್ದ ​ ಮುಖ್ಯಮಂತ್ರಿ ಸಿದ್ದರಾಮಯ್ಯ ಧೋತಿಗೆ ಮೊರೆಹೋದ ಸ್ವಾರಸ್ಯಕರ ಸಂಗತಿಯನ್ನು ಶುಕ್ರವಾರ ಬೆಂಗಳೂರು ವೈದ್ಯಕೀಯ ಕಾಲೇಜಿನ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದರು.

Vijaya Karnataka 16 Sep 2017, 7:31 am

ಬೆಂಗಳೂರು: ಮೊದಲು ಪ್ಯಾಂಟ್‌ ಧರಿಸುತ್ತಿದ್ದ ​ ಮುಖ್ಯಮಂತ್ರಿ ಸಿದ್ದರಾಮಯ್ಯ ಧೋತಿಗೆ ಮೊರೆಹೋದ ಸ್ವಾರಸ್ಯಕರ ಸಂಗತಿಯನ್ನು ಶುಕ್ರವಾರ ಬೆಂಗಳೂರು ವೈದ್ಯಕೀಯ ಕಾಲೇಜಿನ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದರು.

Vijaya Karnataka Web siddaramaya dhoti
ಪ್ಯಾಂಟ್ ಬಿಟ್ಟು, ಸಿಎಂ ಧೋತಿ ಧರಿಸಲು ಆರಂಭಿಸಿದ್ದು ಏಕೆ ಗೊತ್ತಾ?


ಕಾರ್ಯಕ್ರಮದಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್‌ ಚರ್ಮರೋಗ ತಜ್ಞ ಎಂದು ಕೇಳಿ ತಿಳಿದ ಸಿಎಂ,'ನನಗೆ 1993-94ರಲ್ಲಿ ಒಣಚರ್ಮದ (ಡ್ರೈ ಸ್ಕಿನ್‌) ಕಾಯಿಲೆ ಬಂದಿತ್ತು. ಹಲವು ವೈದ್ಯರ ಬಳಿ ಹೋಗಿದ್ದರೂ ವಾಸಿಯಾಗಿರಲಿಲ್ಲ. ಕೊನೆಗೊಬ್ಬ ವೈದ್ಯರು, ಮೈಗೆ ಹಚ್ಚಿಕೊಳ್ಳಲು ಹಲವು ರೀತಿಯ ಔಷಧ, ಮುಲಾಮು ಕೊಟ್ಟರಲ್ಲದೆ ,ಅದಕ್ಕೆ ಗಾಳಿ ಬೇಕಿದ್ದ ಕಾರಣ, 'ನೀವು ಯಾವುದೇ ಕಾರಣಕ್ಕೂ ಪ್ಯಾಂಟು ಧರಿಸಬಾರದು,'ಎಂದು ಹೇಳಿದರು.

ಅದರಂತೆ ನಡೆದುಕೊಂಡೆ ಕೊನೆಗೆ ಕಾಯಿಲೆಯೂ ವಾಸಿಯಾಯಿತು. ಈ ಧೋತಿ ಹಾಕುವುದು ಕಾಯಂ ಆಯಿತು. ಆದರೆ, ಚಳಿಗಾಲದಲ್ಲಿ ಭಾರಿ ಹಿಂಸೆ ಅನುಭವಿಸುವಂತಾಗಿದೆ,' ಎಂದು ಹೇಳುತ್ತಿದ್ದಂತೆ ಸಬಿಕರು ನಗೆಗಡಲಲ್ಲಿ ತೇಲಿದರು.

ಕೈಕೊಟ್ಟ ಲಿಫ್ಟ್‌

ಮೊನ್ನೆ ತಾನೆ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರು ನಗರ ದರ್ಶನ ಮಾಡುತ್ತಿದ್ದ ವೋಲ್ವೊ ಬಸ್‌ ಕೆಟ್ಟು ನಿಂತಿತ್ತು. ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರಿಗೆ ಲಿಫ್ಟ್‌ ಕೈಕೊಟ್ಟು ಆತಂಕಕ್ಕೆ ಕಾರಣವಾಗಿತ್ತು. ನೂತನ ಕಟ್ಟಡ ಲಿಫ್ಟ್‌ನಲ್ಲಿ 4ನೇ ಮಹಡಿಗೆ ಹೋಗುವಾಗ ತಕ್ಷ ಣ ಅದು ಮೇಲೆ ಚಲಿಸಲಿಲ್ಲ. ಮೆಕ್ಯಾನಿಕ್‌ ಬಂದು ಅದನ್ನು ಸರಿಪಡಿಸಿದರು.

ಮೇಲೆ ಹೋಗಿ ಕೆಳಕ್ಕೆ ಬರುವಾಗ ಲಿಫ್ಟ್‌ನ ಮೇಲ್ಛಾವಣಿ ಅರ್ಧದಷ್ಟು ಕುಸಿಯಿತು. ಆಗ ಲಿಫ್ಟ್‌ನಲ್ಲಿದ್ದ ಪೊಲೀಸ್‌ ಭದ್ರತಾ ಸಿಬ್ಬಂದಿ ತಕ್ಷ ಣ ಅದನ್ನು ಹಿಡಿದುಕೊಂಡರು. ಆದರೆ, ಅದು ಸಂಪೂರ್ಣ ಕುಸಿಯದೆ ಅರ್ಧಕ್ಕೆ ನಿಂತಿತು. ಅಷ್ಟರಲ್ಲಿ ಸಿಎಂ ನೆಲಮಹಡಿ ತಲುಪಿದರು.ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ