ಆ್ಯಪ್ನಗರ

ಸಿದ್ದರಾಮಯ್ಯನಂತ ಒಳ್ಳೆಯ ಆ್ಯಕ್ಟರ್‌ ನೋಡಿಲ್ಲವೆಂದ ಈಶ್ವರಪ್ಪ

ಬೆಂಗಳೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಂಜೆ ಒಳ್ಳೆಯ ಮೂಡ್‌ನಲ್ಲಿದ್ದರು...

ವಿಕ ಸುದ್ದಿಲೋಕ 22 Jun 2017, 3:00 am

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಸಂಜೆ ಒಳ್ಳೆಯ ಮೂಡ್‌ನಲ್ಲಿದ್ದರು. ಮಾತಿನ ಮಧ್ಯೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪಅವರ ಹಾವ-ಭಾವ ಅನುಕರಿಸಿದ ಅವರು, ತಮ್ಮ ನಟನಾ ಚಾತುರ್ಯವನ್ನು ಪ್ರದರ್ಶಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದರು.

ಪರಿಷತ್‌ನಲ್ಲಿ ಹಣಕಾಸು ವಿಧೇಯಕ ಮಂಡನೆ ಮಾಡಿ ಮಾತನಾಡುತ್ತಿದ್ದ ಅವರು ''ಬಿಎಸ್‌ವೈ ಶೈಲಿಯನ್ನು ಅಣಕಿಸಿದ ಅವರು, ಯಡಿಯೂರಪ್ಪ ಮಿಷನ್‌ 150ಅಂತಾ ತಮ್ಮ ಸೂಟಿನ ಜೇಬಲ್ಲಿ ಎರಡೂ ಕೈ ಇಟ್ಟುಕೊತಾರೆ, ಆಗ್ಲೇ 150 ಸೀಟಲ್ಲಿ ಗೆದ್ದೀವಿ ಅನ್ನೂ ಭಮೆಯಲ್ಲಿದ್ದಾರೆ ಅದೆಲ್ಲಾ ಆಗೋದಿಲ್ಲ''ಎಂದು ಕುಟುಕಿದರು.

ಉಪ ಚುನಾವಣೆ, 2018ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಅಂತ ಬಿಜೆಪಿಯವರೆಲ್ಲಾ ಬೊಬ್ಬೆಇಟ್ರು, ಆದರೆ ಏನಾಯ್ತು? ಎಂದು ಎಂದಿನಂತೆ ಮಾತಿನಲ್ಲೇ ಚುಚ್ಚಿದರು. ದಿಕ್ಸೂಚಿ ಎನ್ನುವುದನ್ನು ಬಿಲ್ಲು ಬಾಣ ಹಿಡಿಯುವ ಆಕಾರದಲ್ಲಿ ನಿಂತು ತೋರಿಸಿದರು. ಅಲ್ಲದೆ, ಬಿಎಸ್‌ವೈ ಸದಾ ಜೇಬಿನಲ್ಲಿ ಕೈ ಇಟ್ಟುಕೊಳ್ಳುವ ಬಗೆಯನ್ನೂ ಅಗ್ಗಾಗ್ಗೆ ತೋರುತ್ತಲೇ ಇದ್ದರು.

ಇದೆಲ್ಲಾ ಗಮನಿಸಿದ ಪ್ರತಿಪಕ್ಷದ ಕೆ.ಎಸ್‌. ಈಶ್ವರಪ್ಪ ''ನಾನು ಒಳ್ಳೆ ನಾಟಕ ನೋಡಿ, ಒಳ್ಳೆಯ ನಟನನ್ನು ನೋಡಿ ತುಂಬಾ ದಿನ ಆಗಿತ್ತು. ಇವತ್ತು ನೀವು ನಾನು ಒಬ್ಬ ಒಳ್ಳೆಯ ನಟ'' ಎಂದು ನಿರೂಪಿಸಿದ್ದೀರಿ. ತಾರಾ, ಉಮಾಶ್ರೀ ಮತ್ತು ಜಯಮಾಲಾ ಅವರು ನಟನೆಯನ್ನು ಮೈಗೂಡಿಸಿಕೊಂಡವರು, ನೀವು ಅವರನ್ನೆಲ್ಲಾ ಮೀರಿಸಿದ್ದೀರಿ,'' ಎಂದರು. ಅದಕ್ಕೆ ಜಯಮಾಲಾ ''ನಾವು ಬಣ್ಣ ಹಚ್ಚಿ ನಟನೆ ಮಾಡ್ತಿವಿ, ಆದರೆ ಸಿಎಂ ಬಣ್ಣ ಹಚ್ಚದವರ ನಾಟಕವನ್ನು ಬಯಲಿಗೆ ತಂದಿದ್ದಾರೆ''ಎಂದು ಕುಟುಕಿದರು.

ಆನಂತರ ಸಿಎಂ ''ಹೌದು ನಾನು ಕಾಲೇಜು ದಿನಗಳಲ್ಲಿ 'ಯಮನ ಸನ್ನಿಧಿ' ನಾಟಕದಲ್ಲಿ ಡಾಕ್ಟರ್‌ ಪಾತ್ರ ಮಾಡಿದ್ದೆ, ಅದರಲ್ಲಿ ಎಚ್‌.ವಿಶ್ವನಾಥ್‌ ಕೂಡ ಶೆಟ್ರ ರೂಲ್‌ ಮಾಡಿದ್ದರು. ಆನಂತರ ಯಾವುದೇ ನಾಟಕದಲ್ಲಿ ಅಭಿನಯಿಸಿಲ್ಲ''ಎಂದರು. ಜೆಡಿಎಸ್‌ ನಾಯಕ ಬಸವರಾಜ ಹೊರಟ್ಟಿ ''ಈ ಬಾರಿ ಶಾಸಕರ ದಿನಾಚರಣೆಗೆ ಎಲ್ಲ ಸೇರಿ ನಾಟಕ ಮಾಡ್ರೋಣ ಸಾರ''ಎಂದು ಸಲಹೆ ಮಾಡಿದರು.

ಅದೇನು ಮಿಷನ್‌ 150..!

Vijaya Karnataka Web siddaramayya best actor eswarappa
ಸಿದ್ದರಾಮಯ್ಯನಂತ ಒಳ್ಳೆಯ ಆ್ಯಕ್ಟರ್‌ ನೋಡಿಲ್ಲವೆಂದ ಈಶ್ವರಪ್ಪ

''ಯಡಿಯೂರಪ್ಪ ಸೇರಿದಂತೆ ಬಿಜೆಪಿಯವ್ರು ಆಗ್ಲೇ ಅಧಿಕಾರಕ್ಕೆ ಬಂದ್ವಿ ಅಂತ ಬೀಗ್ತಾ ಇದ್ದಾರೆ, ಅಂತಹ ಭ್ರಮೆ ಬೇಡ. ಪುನಃ ನಾವೇ ಅಧಿಕಾರಕ್ಕೆ ಬರೋದು '' ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ನಟನೆಗೆ ನಾನ್‌ ರೆಡಿ

ಚರ್ಚೆಯ ಮಧ್ಯೆ, ಬಿಜೆಪಿ ಸದಸ್ಯೆ ತಾರಾ ಅನುರಾಧ ''ಅಣ್ಣಾ ನೀವು ರಾಜಕೀಯದಲ್ಲಿರಬಾರ್ದು , ಸಿನಿಮಾ ರಂಗದಲ್ಲಿರಬೇಕಿತ್ತು.ಎಲ್ಲರನ್ನು ಮೀರಿಸುತ್ತಿದ್ದೀರಿ''ಎಂದರು. ಅದಕ್ಕೆ ಸಿದ್ದರಾಮಯ್ಯ, ''ಆಯ್ತು ನೀನು ಪ್ರಡ್ಯೂಸ್‌ ಮಾಡು, ನಾನು ಆಕ್ಟ್ ಮಾಡ್ತಿನಿ''ಎಂದರು. ಆಗ ತಾರಾ ''ಇಲ್ಲ ನೀವು ಫೈನಾನ್ಸ್‌ ಮಾಡಿ , ಜೊತೆಗೆ ನಟನೆ ಮಾಡಿ ನಾನæೕ ಪ್ರಡ್ಯೂಸರ್‌ ಆಗ್ತಿನಿ''ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ