ಆ್ಯಪ್ನಗರ

ನಾಪತ್ತೆಯಾದ ಉದ್ಯಮಿ ಸಿದ್ದಾರ್ಥ್ ಕಳೆದ ವಾರ ಮೈಸೂರಿನಲ್ಲಿ ವಾಸ್ತವ್ಯ

ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಗಂಗಯ್ಯ ಹೆಗಡೆ ಅವರಿಗೆ 20 ದಿನಗಳಿಂದ ಗೋಪಾಲ ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ಸಿದ್ದಾರ್ಥ್ ಅವರು ಕಳೆದ ಭಾನುವಾರ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಹೋಗಿದ್ದರು

Vijaya Karnataka Web 30 Jul 2019, 8:01 pm
ಮೈಸೂರು: ನಾಪತ್ತೆಯಾದ ಉದ್ಯಮಿ ಸಿದ್ದಾರ್ಥ್ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು.
Vijaya Karnataka Web ಸಿದ್ದಾರ್ಥ್‌
ಸಿದ್ದಾರ್ಥ್‌


ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಗಂಗಯ್ಯ ಹೆಗ್ಡೆ ಅವರನ್ನು ಸಿದ್ದಾರ್ಥ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದರಿಂದ ಆಗಾಗ್ಗೆ ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು.

ಕಳೆದ ಭಾನುವಾರ ಅಂದರೆ ಜುಲೈ 28 ರಂದು ಡಿಸ್‌ಚಾರ್ಜ್ ಮಾಡಿಸಿಕೊಂಡು ಹೋಗಿದ್ದರು. ನಜರ್‌ಬಾದ್‌ನಲ್ಲಿರುವ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ಮಾಲೀಕರಾದ ಲೇಟ್ ಡಾ.ವಿಷ್ಣು ಮೂರ್ತಿ ಅವರ ಪತ್ನಿ ಮತ್ತು ಗಂಗಯ್ಯ ಹೆಗ್ಡೆ ಅವರ ಪತ್ನಿ ಸಹೋದರಿಯರಾಗಿದ್ದು, ಈ ಹಿನ್ನಲೆಯಲ್ಲಿ ಸಿದ್ದಾರ್ಥ್ ತಮ್ಮ ತಂದೆ ಗಂಗಯ್ಯ ಹೆಗ್ಡೆ ಅವರನ್ನು ಗೋಪಾಲ ಗೌಡ ಆಸ್ಪತ್ರೆಗೆ ಕಳೆದ ಜೂನ್ 9 ರಂದು ದಾಖಲಿಸಿದ್ದರು. ಆಸ್ಪತ್ರೆಯ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಅಂದಿನಿಂದಲೂ ಮೈಸೂರಿಗೆ ಬಂದು ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡುತ್ತಿದ್ದ ಸಿದ್ದಾರ್ಥ್ ತಂದೆಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿಕೊಂಡು ತೆರಳುತ್ತಿದ್ದರು.

ಕಳೆದ ಗುರುವಾರ ಸಿದ್ದಾಥ್ ಅವರ ಮಾವ ಮಾಜಿ ಮುಖ್ಯ ಮಂತ್ರಿ ಎಸ್.ಎಂ. ಕೃಷ್ಣ, ಪತ್ನಿ ಪ್ರೇಮಾ ಮತ್ತು ಪುತ್ರಿ ಶಾಂಭವಿ ಅವರೊಂದಿಗೆ ಬೀಗರನ್ನು ನೋಡಲು ಮೈಸೂರಿನ ಆಸ್ಪತ್ರೆಗೆ ಬಂದಿದ್ದರು.

ಇದೇ ವೇಳೆ ಎಚ್.ಡಿ. ಕೋಟೆಯಲ್ಲಿನ ಶೆರಾಯ್ ರೆಸಾರ್ಟ್‌ನಲ್ಲಿ ತಂಗಿದ್ದ ಸಿದ್ದಾರ್ಥ್ ಅವರ ಪತ್ನಿ ಮಾಳವಿಕಾ ಅವರು ಕೂಡ ಮೈಸೂರಿಗೆ ಬಂದು ತಂದೆಯೊಂದಿಗೆ ಮಾವವನ್ನು ಭೇಟಿ ಮಾಡಲು ಬಂದಿದ್ದಾರೆ.

ಅತ್ತೆ ಮಾವ ಬಂದಿರುವ ವಿಷಯ ತಿಳಿದ ಸಿದ್ದಾರ್ಥ್ ಕೂಡ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದರು. ಎಲ್ಲರನ್ನೂ ಸಿದ್ದಾರ್ಥ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಗಂಗಯ್ಯ ಹೆಗಡೆ ಅವರ ಆರೋಗ್ಯ ವಿಚಾರಿಸಿದ ಬೀಗರಾದ ಎಸ್.ಎಂ. ಕೃಷ್ಣ ಮತ್ತು ಅವರ ಕುಟುಂಬದವರು, ಶುಕ್ರವಾರ ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಹಿಂದಿರುಗಿದ್ದಾರೆ.

ಊಟಕ್ಕೆ ಬರುತ್ತೇನೆ ಎಂದಿದ್ದರು

ಎಚ್.ಡಿ. ಕೋಟೆಯ ಕಬಿನಿ ಹಿನ್ನಿರಿನ ಕಾರಾಪುರದ ಬಳಿ ಶೆರಾಯ್ ರೆಸಾರ್ಟ್ ಸಿದ್ದಾರ್ಥ್ ಅವರ ಮಾಲೀಕತ್ವಕ್ಕೆ ಸೇರಿದಾಗಿದ್ದು, ಕಳೆದ ಗುರುವಾರ ಊಟಕ್ಕೆ ಬರುವುದಾಗಿ ರೆಸಾರ್ಟ್ ಸಿಬ್ಬಂದಿಗೆ ತಿಳಿಸಿದ್ದರು. ಆದರೆ ಕೆಲಸದೋತ್ತಡದಲ್ಲಿ ರೆಸಾರ್ಟ್‌ಗೆ ತೆರಳದೇ ವಾಪಸ್ ಹಿಂದಿರುಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ