ಆ್ಯಪ್ನಗರ

'ನಾನು ಸೋತೆ, ಎಲ್ಲ ಪ್ರಯತ್ನವನ್ನೂ ಕೈಬಿಡುತ್ತಿದ್ದೇನೆ': ಸಿದ್ಧಾರ್ಥ ಪತ್ರ ಬಹಿರಂಗ

ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಅಳಿಯ ಹಾಗೂ ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ ಅವರು ನಾಪತ್ತೆಯಾಗುವ ಮೂರು ದಿನಗಳ ಮೊದಲು (ಜುಲೈ 27) ಕಂಪನಿಯ ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿಗಳಿಗೆ ಬರೆದರೆನ್ನಲಾದ ಪತ್ರವೊಂದು ಬಹಿರಂಗವಾಗಿದೆ. ಉದ್ಯಮವನ್ನು ಲಾಭದಾಯಕವಾಗಿ ನಡೆಸುವಲ್ಲಿ ಸೋತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

Vijaya Karnataka Web 30 Jul 2019, 12:06 pm
ಬೆಂಗಳೂರು: ಖ್ಯಾತ ಉದ್ಯಮಿ, ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ಧಾರ್ಥ ತಮ್ಮ ಉದ್ಯಮವನ್ನು ಲಾಭದಾಯಕವಾಗಿ ನಡೆಸಿಕೊಂಡು ಹೋಗಲು ವಿಫಲನಾದೆ ಎಂದು ಸಂಸ್ಥೆಯ ನಿರ್ದೇಶಕ ಮಂಡಳಿ ಹಾಗೂ ಸಿಬ್ಬಂದಿಗೆ ಬರೆದ ಪತ್ರವೊಂದು ಇದೀಗ ಬೆಳಕಿಗೆ ಬಂದಿದೆ.

'ಎಲ್ಲ ಪ್ರಯತ್ನ ಪಟ್ಟರೂ ಉದ್ಯಮವನ್ನು ಲಾಭದಾಯಕವಾಗಿ ನಡೆಸಿಕೊಂಡು ಹೋಗಲು ವಿಫಲನಾದೆ. ಇನ್ನು ನನ್ನ ಕೈಲಿ ಸಾಧ್ಯವಾಗುತ್ತಿಲ್ಲ. ನನ್ನ ಪ್ರಯತ್ನಗಳನ್ನೆಲ್ಲ ಕೈಬಿಡುತ್ತಿದ್ದೇನೆ. ನೀವೆಲ್ಲ ನನ್ನ ಮೇಲಿಟ್ಟ ವಿಶ್ವಾಸ ಉಳಿಸಿಕೊಳ್ಳಲಾಗಲಿಲ್ಲ. ಇದಕ್ಕಾಗಿ ಕ್ಷಮೆ ಯಾಚಿಸುವೆ' ಎಂದು ಸಿದ್ಧಾರ್ಥ ಪತ್ರದಲ್ಲಿ ಭಾವುಕವಾಗಿ ವಿವರಿಸಿದ್ದಾರೆ.

'ಬಹಳ ದೀರ್ಘಕಾಲ ನಾನು ಹೋರಾಟ ಮಾಡಿದೆ. ಆದರೆ ಇಂದು ಸೋತು ಕೈಚೆಲ್ಲುತ್ತಿದ್ದೇನೆ. ಇನ್ನಷ್ಟು ಒತ್ತಡವನ್ನು ನಾನು ತಾಳಿಕೊಳ್ಳಲಾರೆ. ಖಾಸಗಿ ಹೂಡಿಕೆದಾರರೊಬ್ಬರು ಬಂಡವಾಳ ಹಿಂತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ. ಆರು ತಿಂಗಳ ಅವಧಿಯಲ್ಲಿ ಭಾಗಶಃ ಆ ವ್ಯವಹಾರ ಮುಗಿಸಿದ್ದೇನೆ. ಒಬ್ಬ ಸ್ನೇಹಿತರಿಂದ ಸಾಲ ಪಡೆದು ಅವರಿಗೆ ಭಾಗಶಃ ಹಣ ಹಿಂದಿರುಗಿಸಿದ್ದೇನೆ' ಎಂದು ಸಿದ್ಧಾರ್ಥ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಸಿದ್ಧಾರ್ಥ ಬರೆದರೆನ್ನಲಾದ ಪತ್ರ


ಜುಲೈ 27ರಂದು ಸಿದ್ಧಾರ್ಥ ಈ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅಳಿಯ ಸಿದ್ಧಾರ್ಥ ನಾಪತ್ತೆ, ಆತ್ಮಹತ್ಯೆ ಶಂಕೆ


ನನ್ನ ಹಣಕಾಸಿನ ಎಲ್ಲ ವ್ಯವಹಾರಗಳೂ ನಿರ್ದೇಶಕ ಮಂಡಳಿಗೆ ತಿಳಿದಿಲ್ಲ. ಅವು ನನಗೆ ಮಾತ್ರ ಗೊತ್ತು. ನಾನು ಎಲ್ಲ ವಿಚಾರದಲ್ಲೂ ಸೋತೆ. ಪರಿಸ್ಥಿತಿಯ ಕೈಗೊಂಬೆಯಾಗಿ ಈ ನಿರ್ಧಾರ ಕೈಗೊಂಡಿದ್ದೇನೆ' ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ಕಾಫಿ ಡೇ ಮಾಲೀಕ ಸಿದ್ಧಾರ್ಥ ನಾಪತ್ತೆ ಬಗ್ಗೆ ಅವರ ಕಾರ್ ಡ್ರೈವರ್ ಹೇಳಿದ್ದೇನು?

'ನೀವೆಲ್ಲರೂ ಸಾಕಷ್ಟು ಬಲಿಷ್ಠರಿದ್ದೀರಿ. ಈ ಉದ್ಯಮವನ್ನು ಹೊಸ ಆಡಳಿತ ಮಂಡಳಿಯೊಂದಿಗೆ ಚೆನ್ನಾಗಿ ನಡೆಸಿಕೊಂಡು ಹೋಗಿ' ಎಂದು ಸಿದ್ಧಾರ್ಥ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ