ಆ್ಯಪ್ನಗರ

ಆಡಿಯೋ ಟೇಪ್‌ ಮಾಡಿಸಿದ್ದೇ ಕುಮಾರಸ್ವಾಮಿ. ಅದಕ್ಕಾಗಿ ಎಸ್‌ಐಟಿ ತನಿಖೆ ನ್ಯಾಯಸಮ್ಮತವಾಗಿರಲ್ಲ: ಬಿಎಸ್‌ವೈ

ಮುಖ್ಯಮಂತ್ರಿಗಳೇ ವ್ಯಕ್ತಿಯೊಬ್ಬರನ್ನು ಕಳುಹಿಸಿ ಎಲ್ಲವನ್ನೂ ಪ್ಲಾನ್‌ ಮಾಡಿ ರೆಕಾರ್ಡ್‌ ಮಾಡಿಸಿದ್ದಾರೆ. ನಂತರ ಅದನ್ನೇ ಬಜೆಟ್‌ ದಿನ್ ಬಿಡುಗಡೆ ಮಾಡಿದ್ದಾರೆ

Vijaya Karnataka Web 11 Feb 2019, 7:26 pm
ಬೆಂಗಳೂರು: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೇ ಶರಣಗೌಡರನ್ನು ಕಳುಹಿಸಿ ಬೇಕಂತಲೇ ಆಡಿಯೋ ಟೇಪ್‌ ಮಾಡಿಸಿದ್ದಾರೆ. ಅದನ್ನೇ ಬಿಡುಗಡೆ ಮಾಡಿದ್ದಾರೆ. ಅವರು ಈಗ ವಿಶೇಷ ತನಿಖಾ ತಂಡದಿಂದ ಮಾಡಿಸಲು ಆದೇಶಿಸಿದ್ದಾರೆ. ಅದು ನ್ಯಾಯಸಮ್ಮತವಾಗಿರಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.
Vijaya Karnataka Web ಯಡಿಯೂರಪ್ಪ
ಯಡಿಯೂರಪ್ಪ


ಮಲ್ಲೇಶ್ವರಂನಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿಗಳೇ ವ್ಯಕ್ತಿಯೊಬ್ಬರನ್ನು ಕಳುಹಿಸಿ ಎಲ್ಲವನ್ನೂ ಪ್ಲಾನ್‌ ಮಾಡಿ ರೆಕಾರ್ಡ್‌ ಮಾಡಿಸಿದ್ದಾರೆ. ನಂತರ ಅದನ್ನೇ ಬಜೆಟ್‌ ದಿನ್ ಬಿಡುಗಡೆ ಮಾಡಿದ್ದಾರೆ ಎಂದರು.

ಇದು ಎಲ್ಲವೂ ಕುತಂತ್ರ, ಷಡ್ಯಂತ್ರದ ಭಾಗವಾಗಿದೆ. ವಿಧಾನಸಭಾಧ್ಯಕ್ಷರ ಹೆಸರನ್ನು ಬಹಿರಂಗ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅಪಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ವೈ ತಿಳಿಸಿದರು.

ಮಂಗಳವಾರದ ಕಲಾಪದಲ್ಲಿಯೂ ಈ ವಿಷಯವನ್ನೇ ನಾನು ಪ್ರಸ್ತಾಪಿಸಲಿದ್ದೇವೆ ಎಂದು ಬಿಎಸ್‌ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ