ಆ್ಯಪ್ನಗರ

ಸ್ಲಂ ವಾಸ್ತವ್ಯ ಚುನಾವಣಾ ಗಿಮಿಕ್‌ ಅಲ್ಲ: ಶೋಭಾ

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಶನಿವಾರ ಕೈಗೊಂಡಿರುವ ಕೊಳೆಗೇರಿ ವಾಸ್ತವ್ಯ ಚುನಾವಣಾ ಗಿಮಿಕ್‌ ಅಲ್ಲ ಎಂದು ಸಂಸದೆ ಶೋಭಾ ಸ್ಪಷ್ಟ ಪಡಿಸಿದ್ದಾರೆ.

Vijaya Karnataka 11 Feb 2018, 9:55 am

ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಶನಿವಾರ ಕೈಗೊಂಡಿರುವ ಕೊಳೆಗೇರಿ ವಾಸ್ತವ್ಯ ಚುನಾವಣಾ ಗಿಮಿಕ್‌ ಅಲ್ಲ ಎಂದು ಸಂಸದೆ ಶೋಭಾ ಸ್ಪಷ್ಟ ಪಡಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,'' ರಾಜ್ಯದಲ್ಲಿ 2,500 ಕೊಳೆಗೇರಿಗಳಿದ್ದು, ಅದರಲ್ಲಿ ವಾಸಿಸುವ ಮಂದಿಯ ಪರಿಸ್ಥಿತಿ ತೀರಾ ಕೆಟ್ಟದ್ದಾಗಿದೆ. ಕೇಂದ್ರದ ಅನುದಾನ ಪಡೆದು ಈ ಸ್ಲಂಗಳನ್ನು ಅಭಿವೃದ್ಧಿ ಪಡಿಸಲು ಅವಕಾಶಗಳಿದ್ದರೂ ರಾಜ್ಯ ಸರಕಾರ ಮುಂದಾಗಿಲ್ಲ. ಹೀಗಾಗಿ ರಾಜ್ಯದಲ್ಲಿರುವ ಈ ಕೊಳೆಗೇರಿಗಳ ಸ್ಥಿತಿಗತಿಯನ್ನು ಅರಿಯಲು ಈ ವಾಸ್ತವ್ಯವನ್ನು ಹಮ್ಮಿಕೊಳ್ಳಲಾಗಿದೆ,'' ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ