ಬೆಂಗಳೂರು: ಕೋವಿಡ್ ಸೋಂಕು ಈಗ ದೇಶದ ಹಳ್ಳಿ ಹಳ್ಳಿಗಳಿಗೂ ಹರಡಿದೆ. ಅದರಲ್ಲಿಯೂ ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ, ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ವ್ಯಾಪಿಸುತ್ತಿರುವುದು ಆತಂಕ ಹೆಚ್ಚಿಸಿದೆ. ಈ ಸಾಂಕ್ರಾಮಿಕವು ಆರೋಗ್ಯದ ವಿಚಾರದಲ್ಲಿ ಮಾತ್ರವಲ್ಲ, ಆರ್ಥಿಕ, ಸಾಮಾಜಿಕ ಹಾಗೂ ಮಾನಸಿಕವಾಗಿಯೂ ಜನಸಾಮಾನ್ಯರನ್ನು ಜರ್ಜರಗೊಳಿಸಿದೆ. ರಾಜ್ಯದ ಗ್ರಾಮೀಣ ಭಾಗಗಳಿಗೆ ಹೋದರೆ ಮನಕಲಕುವ ಸಾವಿರಾರು ಘಟನೆಗಳು ಕಣ್ಣಿಗೆ ಕಾಣಿಸುತ್ತವೆ. ಚಾಮರಾಜನಗರ ಜಿಲ್ಲೆಯ ಮೂಕಹಳ್ಳಿಯಲ್ಲಿ ತನ್ನ ಪುಟ್ಟ ಕುಟುಂಬದೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದ 46 ವರ್ಷದ ಮಹದೇವಪ್ಪ ಒಬ್ಬ ಸಣ್ಣ ರೈತ. ತನ್ನ ಸುತ್ತಮುತ್ತಲಿನ ಹಲವು ಮನೆಗಳಿಗೆ ಪ್ರತಿದಿನ ಹಾಲು ಹಾಕುತ್ತಿದ್ದರಿಂದ ಮಹದೇವಪ್ಪ ಎಲ್ಲರಿಗೂ ಪರಿಚಿತ.
ಆದರೆ, ಮೇ 24ರಂದು ಮಹದೇವಪ್ಪನ ಬದುಕಿನ ಗತಿಯೇ ಬದಲಾಯಿತು. ಅವರಲ್ಲಿ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿತು. ಅವರ ಹೆಣ್ಣುಮಕ್ಕಳಾದ 14 ವರ್ಷದ ಜ್ಯೋತಿ, 12 ವರ್ಷದ ಗೀತಾ ಸೇರಿದಂತೆ ಕುಟುಂಬದ ಸದಸ್ಯರಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕಿದರು. ಆ ಕುಟುಂಬದಿಂದ ಹಾಲು ಹಾಕಿಸಿಕೊಳ್ಳುವುದಿರಲಿ, ಮಹದೇವಪ್ಪನ ಪತ್ನಿ ಮಂಗಳಮ್ಮ (40) ಅವರಿಗೆ ನಲ್ಲಿಯಿಂದ ನೀರು ಪಡೆಯಲೂ ಬಿಡಲಿಲ್ಲ.
ಅದೇ ಗ್ರಾಮದಲ್ಲಿದ್ದ ಸಂಬಂಧಿಕರು ಮತ್ತು ಸ್ನೇಹಿತರು ಕೂಡ ಈ ಕುಟುಂಬದ ನೆರವಿಗೆ ಬರಲಿಲ್ಲ, ಸಂತೈಸಲೂ ಇಲ್ಲ. ಜೂನ್ 2ರಂದು ಮಹದೇವಪ್ಪ, ತಮ್ಮ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮನೆಯಲ್ಲಿ ನೇಣು ಹಾಕಿಕೊಳ್ಳುವ ಮೂಲಕ ಅವಮಾನದಿಂದ ಪಾರಾಗಲು ಸಾವಿನ ಹಾದಿ ಆಯ್ಕೆಮಾಡಿಕೊಂಡರು.
ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ಹರಡಲು ಆರಂಭಿಸಿ ಒಂದೂವರೆ ವರ್ಷವಾದರೂ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಇದರ ಕುರಿತಾದ ತಪ್ಪು ಮಾಹಿತಿಗಳಿಂದಾಗಿ ಬಹಿಷ್ಕಾರದಂತಹ ಘಟನೆಗಳು ವರದಿಯಾಗುತ್ತಿರುವುದು ಆಘಾತಕಾರಿ ಸಂಗತಿ.
'ಆರಂಭದಲ್ಲಿ ಪೊಲೀಸರು, ಇದು ಹಣಕಾಸಿನ ಮುಗ್ಗಟ್ಟಿನಿಂದ ನಡೆದ ಆತ್ಮಹತ್ಯೆ ಪ್ರಕರಣ ಎಂದು ಪ್ರತಿಪಾದಿಸಿದ್ದರು. ಆದರೆ, ಮದುವೆಯಾಗಿ ಮತ್ತೊಂದು ಹಳ್ಳಿಯಲ್ಲಿರುವ ಮಹದೇವಪ್ಪ ಅವರ ಹಿರಿ ಮಗಳು ಅವರು ಅನುಭವಿಸಿದ ಸಂಕಟಗಳನ್ನು ತೆರೆದಿಟ್ಟ ಬಳಿಕ ವಾಸ್ತವ ಕಾರಣ ಬೆಳಕಿಗೆ ಬಂತು. ಕೆಲವು ದಿನಗಳ ಹಿಂದಷ್ಟೇ ಹಿರಿ ಮಗಳ ಬಳಿ ಅವರು ಊರಿನಲ್ಲಿ ತಾನು ಅನುಭವಿಸುತ್ತಿರುವ ಅವಮಾನಗಳ ಬಗ್ಗೆ ಹೇಳಿಕೊಂಡಿದ್ದರು' ಎನ್ನುತ್ತಾರೆ ಬೆಂಗಳೂರಿನ ರಾಷ್ಟ್ರೀಯ ಆಧುನಿಕ ಅಧ್ಯಯನ ಸಂಸ್ಥೆಯ ಮಾಜಿ ಪ್ರೊಫೆಸರ್ ಎಆರ್ ವಾಸವಿ.
ಸ್ವ ಸಮುದಾಯದವರಿಂದಲೇ ಬಹಿಷ್ಕಾರ
'ಮಹದೇವಪ್ಪ ಅವರು ಮೇಲ್ವರ್ಗದ ಲಿಂಗಾಯತ ಸಮುದಾಯದವರು. ಅದೇ ಸಮುದಾಯಕ್ಕೆ ಸೇರಿದವರೇ ಆ ಕುಟುಂಬಕ್ಕೆ ಬಹಿಷ್ಕಾರ ಹೇರಿದ್ದರು. ಇದು ಹೆಚ್ಚು ಚಿಂತಿಸುವ ವಿಚಾರ' ಎಂದು ಅವರು ಹೇಳಿದರು.
'ಗ್ರಾಮೀಣ ಜಿಲ್ಲೆಗಳಲ್ಲಿ ಕೋವಿಡ್ ಜತೆಗೆ ಸಾಮಾಜಿಕ ಕಳಂಕ ವಿಪರೀತ ಮಟ್ಟದಲ್ಲಿದೆ. ಬಗ್ಗೆ ವ್ಯಾಪಕ ಹಾಗೂ ಸಕ್ರಿಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಾತ್ರವೇ ಈ ರೋಗದ ಕುರಿತಾದ ಚರ್ಚೆಯನ್ನು ಸಹಜಗೊಳಿಸಬಹುದಾಗಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನೆರೆಮನೆಯವರ ಆರೋಪ ಸಾವಿಗೆ ಕಾರಣವಾಯ್ತು
ಬಳ್ಳಾರಿ ಜಿಲ್ಲೆಯ ಅಡವಿಮಲ್ಲನಕೇರಿ ಗ್ರಾಮದ 50 ವರ್ಷದ ಹನುಮಂತು ಅವರು ಕೋವಿಡ್ ಸೋಂಕಿಗೆ ತುತ್ತಾಗಿರುವುದು ತಿಳಿದ ಬಳಿಕ ಮೇ 10ರಿಂದ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರತೊಡಗಿದ್ದರು. ಕಟ್ಟಡ ಕಾರ್ಮಿಕನಾಗಿದ್ದ ಹನುಮಂತು ಗ್ರಾಮಕ್ಕೆ ವಿಪತ್ತು ತಂದಿದ್ದಾನೆ ಎಂದು ನೆರೆಮನೆಯವರು ಆರೋಪಿಸಿದ್ದರಿಂದ ಬೇಸೆತ್ತು ತನ್ನ ಜೀವವನ್ನೇ ಅಂತ್ಯಗೊಳಿಸಿಕೊಂಡರು.
ಇದೇ ರೀತಿ ಕೋವಿಡ್ ಕಾರಣದಿಂದ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ಅನೇಕ ಜಿಲ್ಲೆಗಳಲ್ಲಿ ವರದಿಯಾಗಿವೆ. ಆದರೆ ಹಲವು ಪ್ರಕರಣಗಳಿಗೆ ಪೊಲೀಸರು ವಿಭಿನ್ನ ಕಾರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಿದ್ದರೆ, ಕುಟುಂಬದ ಸದಸ್ಯರು ಇವು ಗ್ರಾಮಸ್ಥರ ನಡೆಗಳಿಂದಲೇ ಆಗಿರುವುದು ಎಂದು ಆರೋಪಿಸುತ್ತಿದ್ದಾರೆ.
ಆದರೆ, ಮೇ 24ರಂದು ಮಹದೇವಪ್ಪನ ಬದುಕಿನ ಗತಿಯೇ ಬದಲಾಯಿತು. ಅವರಲ್ಲಿ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿತು. ಅವರ ಹೆಣ್ಣುಮಕ್ಕಳಾದ 14 ವರ್ಷದ ಜ್ಯೋತಿ, 12 ವರ್ಷದ ಗೀತಾ ಸೇರಿದಂತೆ ಕುಟುಂಬದ ಸದಸ್ಯರಿಗೆ ಗ್ರಾಮಸ್ಥರು ಬಹಿಷ್ಕಾರ ಹಾಕಿದರು. ಆ ಕುಟುಂಬದಿಂದ ಹಾಲು ಹಾಕಿಸಿಕೊಳ್ಳುವುದಿರಲಿ, ಮಹದೇವಪ್ಪನ ಪತ್ನಿ ಮಂಗಳಮ್ಮ (40) ಅವರಿಗೆ ನಲ್ಲಿಯಿಂದ ನೀರು ಪಡೆಯಲೂ ಬಿಡಲಿಲ್ಲ.
ಅದೇ ಗ್ರಾಮದಲ್ಲಿದ್ದ ಸಂಬಂಧಿಕರು ಮತ್ತು ಸ್ನೇಹಿತರು ಕೂಡ ಈ ಕುಟುಂಬದ ನೆರವಿಗೆ ಬರಲಿಲ್ಲ, ಸಂತೈಸಲೂ ಇಲ್ಲ. ಜೂನ್ 2ರಂದು ಮಹದೇವಪ್ಪ, ತಮ್ಮ ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮನೆಯಲ್ಲಿ ನೇಣು ಹಾಕಿಕೊಳ್ಳುವ ಮೂಲಕ ಅವಮಾನದಿಂದ ಪಾರಾಗಲು ಸಾವಿನ ಹಾದಿ ಆಯ್ಕೆಮಾಡಿಕೊಂಡರು.
ದೇಶಾದ್ಯಂತ ಕೋವಿಡ್ ಸಾಂಕ್ರಾಮಿಕ ಹರಡಲು ಆರಂಭಿಸಿ ಒಂದೂವರೆ ವರ್ಷವಾದರೂ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಇದರ ಕುರಿತಾದ ತಪ್ಪು ಮಾಹಿತಿಗಳಿಂದಾಗಿ ಬಹಿಷ್ಕಾರದಂತಹ ಘಟನೆಗಳು ವರದಿಯಾಗುತ್ತಿರುವುದು ಆಘಾತಕಾರಿ ಸಂಗತಿ.
'ಆರಂಭದಲ್ಲಿ ಪೊಲೀಸರು, ಇದು ಹಣಕಾಸಿನ ಮುಗ್ಗಟ್ಟಿನಿಂದ ನಡೆದ ಆತ್ಮಹತ್ಯೆ ಪ್ರಕರಣ ಎಂದು ಪ್ರತಿಪಾದಿಸಿದ್ದರು. ಆದರೆ, ಮದುವೆಯಾಗಿ ಮತ್ತೊಂದು ಹಳ್ಳಿಯಲ್ಲಿರುವ ಮಹದೇವಪ್ಪ ಅವರ ಹಿರಿ ಮಗಳು ಅವರು ಅನುಭವಿಸಿದ ಸಂಕಟಗಳನ್ನು ತೆರೆದಿಟ್ಟ ಬಳಿಕ ವಾಸ್ತವ ಕಾರಣ ಬೆಳಕಿಗೆ ಬಂತು. ಕೆಲವು ದಿನಗಳ ಹಿಂದಷ್ಟೇ ಹಿರಿ ಮಗಳ ಬಳಿ ಅವರು ಊರಿನಲ್ಲಿ ತಾನು ಅನುಭವಿಸುತ್ತಿರುವ ಅವಮಾನಗಳ ಬಗ್ಗೆ ಹೇಳಿಕೊಂಡಿದ್ದರು' ಎನ್ನುತ್ತಾರೆ ಬೆಂಗಳೂರಿನ ರಾಷ್ಟ್ರೀಯ ಆಧುನಿಕ ಅಧ್ಯಯನ ಸಂಸ್ಥೆಯ ಮಾಜಿ ಪ್ರೊಫೆಸರ್ ಎಆರ್ ವಾಸವಿ.
ಸ್ವ ಸಮುದಾಯದವರಿಂದಲೇ ಬಹಿಷ್ಕಾರ
'ಮಹದೇವಪ್ಪ ಅವರು ಮೇಲ್ವರ್ಗದ ಲಿಂಗಾಯತ ಸಮುದಾಯದವರು. ಅದೇ ಸಮುದಾಯಕ್ಕೆ ಸೇರಿದವರೇ ಆ ಕುಟುಂಬಕ್ಕೆ ಬಹಿಷ್ಕಾರ ಹೇರಿದ್ದರು. ಇದು ಹೆಚ್ಚು ಚಿಂತಿಸುವ ವಿಚಾರ' ಎಂದು ಅವರು ಹೇಳಿದರು.
'ಗ್ರಾಮೀಣ ಜಿಲ್ಲೆಗಳಲ್ಲಿ ಕೋವಿಡ್ ಜತೆಗೆ ಸಾಮಾಜಿಕ ಕಳಂಕ ವಿಪರೀತ ಮಟ್ಟದಲ್ಲಿದೆ. ಬಗ್ಗೆ ವ್ಯಾಪಕ ಹಾಗೂ ಸಕ್ರಿಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಾತ್ರವೇ ಈ ರೋಗದ ಕುರಿತಾದ ಚರ್ಚೆಯನ್ನು ಸಹಜಗೊಳಿಸಬಹುದಾಗಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನೆರೆಮನೆಯವರ ಆರೋಪ ಸಾವಿಗೆ ಕಾರಣವಾಯ್ತು
ಬಳ್ಳಾರಿ ಜಿಲ್ಲೆಯ ಅಡವಿಮಲ್ಲನಕೇರಿ ಗ್ರಾಮದ 50 ವರ್ಷದ ಹನುಮಂತು ಅವರು ಕೋವಿಡ್ ಸೋಂಕಿಗೆ ತುತ್ತಾಗಿರುವುದು ತಿಳಿದ ಬಳಿಕ ಮೇ 10ರಿಂದ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರತೊಡಗಿದ್ದರು. ಕಟ್ಟಡ ಕಾರ್ಮಿಕನಾಗಿದ್ದ ಹನುಮಂತು ಗ್ರಾಮಕ್ಕೆ ವಿಪತ್ತು ತಂದಿದ್ದಾನೆ ಎಂದು ನೆರೆಮನೆಯವರು ಆರೋಪಿಸಿದ್ದರಿಂದ ಬೇಸೆತ್ತು ತನ್ನ ಜೀವವನ್ನೇ ಅಂತ್ಯಗೊಳಿಸಿಕೊಂಡರು.
ಇದೇ ರೀತಿ ಕೋವಿಡ್ ಕಾರಣದಿಂದ ಜನರು ಮಾನಸಿಕ ಒತ್ತಡಕ್ಕೆ ಒಳಗಾಗಿ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ಅನೇಕ ಜಿಲ್ಲೆಗಳಲ್ಲಿ ವರದಿಯಾಗಿವೆ. ಆದರೆ ಹಲವು ಪ್ರಕರಣಗಳಿಗೆ ಪೊಲೀಸರು ವಿಭಿನ್ನ ಕಾರಣಗಳ ಅಡಿಯಲ್ಲಿ ಪ್ರಕರಣ ದಾಖಲಿಸುತ್ತಿದ್ದರೆ, ಕುಟುಂಬದ ಸದಸ್ಯರು ಇವು ಗ್ರಾಮಸ್ಥರ ನಡೆಗಳಿಂದಲೇ ಆಗಿರುವುದು ಎಂದು ಆರೋಪಿಸುತ್ತಿದ್ದಾರೆ.