ಬೆಂಗಳೂರು: ದೋಸ್ತಿ ಸರಕಾರದ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಅಂಗೀಕರಿಸಲು ನಿರಾಕರಿಸಿರುವ ಸ್ವೀಕರ್ ರಮೇಶ್ ಕುಮಾರ್ ಅವರು, ಖುದ್ದು ಭೇಟಿಯಾಗದೇ ರಾಜೀನಾಮೆ ಅಂಗೀಕಾರ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿರುವ ಅವರು, ವೈಯಕ್ತಿಕವಾಗಿ ಕರೆದು ಮಾತನಾಡಿಸದೇ ಯಾರ ರಾಜೀನಾಮೆ ಅಂಗೀಕರಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ನನ್ನ ಅಗತ್ಯವಿಲ್ಲ ಎಂದರೆ ಪೋಸ್ಟಲ್ ಸೇವೆ ಸಲ್ಲಿಸಬಹುದಿತ್ತಲ್ಲ. ಸ್ವಯಂ ಹಾಗೂ ಸತ್ಯವಾದ ಎಂಬ ಶಬ್ದದ ಅರ್ಥ ನಾನು ನೋಡಲೇಬೇಕು. ನಾನು ತುಂಬಾ ತಿಳಿದ ವ್ಯಕ್ತಿಯಲ್ಲ. ಸಂವಿಧಾನವನ್ನೇ ವೈಫಲ್ಯಗೊಳಿಸಿದರೆ, ಪಕ್ಷಾಂತರ ನಿಷೇಧ ಕಾಯಿದೆ ಎಲ್ಲಿ? ಎಂದು ಪ್ರಶ್ನಿಸಿದರು.
ಈ ವೇಳೆ ನನ್ನ ಮೇಲೆ ಜಾಸ್ತಿ ಕ್ಯಾಮೆರಾ ಹಿಡಿಯಬೇಡಿ. ಹಲ್ಲು ಬಿಟ್ಟರೆ ಬೇರೇನು ಕಾಣುವುದಿಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದರು.
ಕಳೆದ ಶನಿವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ನ 9 ಹಾಗೂ ಜೆಡಿಎಸ್ನ ಮೂವರು ಶಾಸಕರು ರಾಜೀನಾಮೆ ಸಲ್ಲಿಸಿದ್ದರು, ಅದಕ್ಕೂ ಮುನ್ನವೇ ಕಾಂಗ್ರೆಸ್ನ ಆನಂದ್ಸಿಂಗ್ ಅವರು ಸಹ ರಾಜೀನಾಮೆ ಸಲ್ಲಿಸಿದ್ದರು. ಈ ವೇಳೆ ಸ್ಪೀಕರ್ ಲಭ್ಯ ಇಲ್ಲದ ಕಾರಣ ಅವರು ಕಾರ್ಯದರ್ಶಿ ಬಳಿ ರಾಜೀನಾಮೆ ಪತ್ರ ನೀಡಿ ಮುಂಬಯಿನ ಹೋಟೆಲ್ನಲ್ಲಿ ಠಿಕಾಣಿ ಹೂಡಿದ್ದರು.
ವಿಧಾನಸೌಧದಲ್ಲಿ ಮಾತನಾಡಿರುವ ಅವರು, ವೈಯಕ್ತಿಕವಾಗಿ ಕರೆದು ಮಾತನಾಡಿಸದೇ ಯಾರ ರಾಜೀನಾಮೆ ಅಂಗೀಕರಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ನನ್ನ ಅಗತ್ಯವಿಲ್ಲ ಎಂದರೆ ಪೋಸ್ಟಲ್ ಸೇವೆ ಸಲ್ಲಿಸಬಹುದಿತ್ತಲ್ಲ. ಸ್ವಯಂ ಹಾಗೂ ಸತ್ಯವಾದ ಎಂಬ ಶಬ್ದದ ಅರ್ಥ ನಾನು ನೋಡಲೇಬೇಕು. ನಾನು ತುಂಬಾ ತಿಳಿದ ವ್ಯಕ್ತಿಯಲ್ಲ. ಸಂವಿಧಾನವನ್ನೇ ವೈಫಲ್ಯಗೊಳಿಸಿದರೆ, ಪಕ್ಷಾಂತರ ನಿಷೇಧ ಕಾಯಿದೆ ಎಲ್ಲಿ? ಎಂದು ಪ್ರಶ್ನಿಸಿದರು.
ಈ ವೇಳೆ ನನ್ನ ಮೇಲೆ ಜಾಸ್ತಿ ಕ್ಯಾಮೆರಾ ಹಿಡಿಯಬೇಡಿ. ಹಲ್ಲು ಬಿಟ್ಟರೆ ಬೇರೇನು ಕಾಣುವುದಿಲ್ಲ ಎಂದು ಹಾಸ್ಯ ಚಟಾಕಿ ಸಿಡಿಸಿದರು.
ಕಳೆದ ಶನಿವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ನ 9 ಹಾಗೂ ಜೆಡಿಎಸ್ನ ಮೂವರು ಶಾಸಕರು ರಾಜೀನಾಮೆ ಸಲ್ಲಿಸಿದ್ದರು, ಅದಕ್ಕೂ ಮುನ್ನವೇ ಕಾಂಗ್ರೆಸ್ನ ಆನಂದ್ಸಿಂಗ್ ಅವರು ಸಹ ರಾಜೀನಾಮೆ ಸಲ್ಲಿಸಿದ್ದರು. ಈ ವೇಳೆ ಸ್ಪೀಕರ್ ಲಭ್ಯ ಇಲ್ಲದ ಕಾರಣ ಅವರು ಕಾರ್ಯದರ್ಶಿ ಬಳಿ ರಾಜೀನಾಮೆ ಪತ್ರ ನೀಡಿ ಮುಂಬಯಿನ ಹೋಟೆಲ್ನಲ್ಲಿ ಠಿಕಾಣಿ ಹೂಡಿದ್ದರು.