ಆ್ಯಪ್ನಗರ

ಬಾಲ ಸ್ವಾಮೀಜಿಗೆ ಸ್ಪೀಕರ್‌ ಪಾದಪೂಜೆ: ವಿಡಿಯೊ ವೈರಲ್‌

ಬಾಲ ಸ್ವಾಮೀಜಿಗೆ ವಿಧಾನಸಭೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ಪಾದಪೂಜೆ ಸಲ್ಲಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು,ವ್ಯಾಪಕ ಚರ್ಚೆಗೊಳಗಾಗಿದೆ.

Vijaya Karnataka 9 Jun 2018, 5:00 am
ಕೋಲಾರ: ಬಾಲ ಸ್ವಾಮೀಜಿಗೆ ವಿಧಾನಸಭೆ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ಪಾದಪೂಜೆ ಸಲ್ಲಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು,ವ್ಯಾಪಕ ಚರ್ಚೆಗೊಳಗಾಗಿದೆ.
Vijaya Karnataka Web pooje


ಬಾಲ ಸ್ವಾಮೀಜಿ ವಿನಯ್‌ ಗುರೂಜಿ ಎಂದು ತಿಳಿದುಬಂದಿದ್ದು, ಚಿಕ್ಕಮಗಳೂರಿನ ಗೌರಿಗುಡ್ಡದಲ್ಲಿ ಪಾದಪೂಜೆ ನಡೆದಿದೆ ಎನ್ನಲಾಗಿದೆ. ಮೊದಲಿನಿಂದಲೂ ಪುಟ್ಟಪರ್ತಿ ಸಾಯಿ ಬಾಬಾ ಭಕ್ತರಾಗಿರುವ ರಮೇಶ್‌ಕುಮಾರ್‌ ಅವರು ಬಾಲಸ್ವಾಮೀಜಿ ವಿನಯ್‌ಗುರೂಜಿ ಅವರನ್ನು ಭೇಟಿಯಾಗಿ ಧಿಪೂಜೆ ಸಲ್ಲಿಸಿದ್ದಾರೆ. ಆದರೆ, ಎಷ್ಟು ದಿನಗಳ ಹಿಂದೆ ಇದು ನಡೆದಿದೆ ಎನ್ನುವುದು ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲ.

ವೈರಲ್‌ ವಿಡಿಯೊದಲ್ಲಿ ಏನಿದೆ

ಸೋಫಾ ಮೇಲೆ ಕುಳಿತಿರುವ ಬಾಲ ಸ್ವಾಮೀಜಿ ಅವರ ಪಾದಗಳಿಗೆ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಅವರು ನೆಲದ ಮೇಲೆ ಕುಳಿತು ಪೂಜೆ ಸಲ್ಲಿಸಿ, ಬಳಿಕ ಬಳಿಕ ಎದ್ದು ನಿಂತು ಮಂಗಳಾರತಿ ಮಾಧಿಡುಧಿತ್ತಾಧಿರೆ. ಬಳಿಕ ರಮೇಶ್‌ಕುಮಾರ್‌ ಅವರ ಜತೆಗಿದ್ದ ಮತ್ತಿಬ್ಬರು ಸಹ ಧಿಪೂಜೆ ಸಲ್ಲಿಸಿ,ಮಂಗಳಾರತಿ ಎತ್ತುತ್ತಾರೆ. ಬಾಲಸ್ವಾಮೀಜಿಯವರು ನಾಣ್ಯಗಳನ್ನು ಕೈಯಲ್ಲಿಡಿದುಕೊಂಡು, ಕೆಲ ಮಾತು ಗಳನ್ನು ಹೇಳಿ ರಮೇಶ್‌ಕುಮಾರ್‌ ಅವರ ಕೈಗೆ ಹಸ್ತಾಂತರಿಸುತ್ತಾರೆ. ನಂತರ ರಮೇಶ್‌ಕುಮಾರ್‌ ಅವರು ನಾಣ್ಯಗಳನ್ನು ಕಣ್ಣಿಗೆ ಒತ್ತಿಕೊಂಡು ಜೇಬಿ ನಲ್ಲಿ ಇಟ್ಟುಕೊಳ್ಳುತ್ತಾರೆ. ಬಳಿಕ ಪಾದಗಳ ಬಳಿಯೇ ಕುಳಿತುಕೊಳ್ಳುವ ಸ್ಪೀಕರ್‌ ಅವರು, ಗುರೂಜಿಗಳ ಪಾದಗಳಿಗೆ ಮೂರು ಬಾರಿ ನಮಸ್ಕರಿಸುತ್ತಾರೆ.

ಮೌಢ್ಯ ನಿಷೇಧ ಕಾಯಿದೆ ಜಾರಿಗೆ ಮುಂದಾಗಿದ್ದ ಹಿಂದಿನ ಸರಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ರಮೇಶ್‌ ಕುಮಾರ್‌ ಅವರು ಪಾದಪೂಜೆ ಮಾಡುತ್ತಿರುವ ಈ ವಿಡಿಯೊ ಕುರಿತು ಜಾಲತಾಣಗಳಲ್ಲಿ ಹಲವು ಕಾಮೆಂಟ್‌ಗಳು ಬಂದಿವೆ.

ಇತ್ತೀಚೆಗಷ್ಟೇ ಮಾಜಿ ಪ್ರಧಾನಿ ದೇವೇ ಗೌಡ ದಂಪತಿ ಪಾದಪೂಜೆ ನೆರವೇರಿಸಿದ್ದ ಸುದ್ದಿ ಮಾಸುವ ಮುನ್ನವೇ ವಿಧಾನಸಭೆ ಸ್ಪೀಕರ್‌ ಅವರು ಬಾಲಸ್ವಾಮೀಜಿ ವಿನಯ್‌ ಗುರೂಜಿ ಅವರ ಪಾದಪೂಜೆ ನೆರವೇರಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ಪಡೆಯಲು ಪತ್ರಿಕೆ ಪ್ರಯತ್ನ ಮಾಡಿದ್ದು, ರಮೇಶ್‌ಕುಮಾರ್‌ ಅವರು ಸಭೆಯೊಂದರಲ್ಲಿ ಭಾಗವಹಿಸಿದ್ದ ಕಾರಣ ಸಂಪರ್ಕಕ್ಕೆ ಸಿಗಲಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ