ಬೆಂಗಳೂರು: ವಿಧಾನಮಂಡಲ ಅಧಿವೇಶನದ ಚಿತ್ರೀಕರಣಕ್ಕೆ ಮಾಧ್ಯಮಗಳಿಗೆ ನಿಷೇಧ ಹೇರಿರುವ ಬೆನ್ನಲ್ಲೇ ಶಾಸಕರ ಭವನಕ್ಕೂ ಪತ್ರಕರ್ತರಿಗೆ ನಿರ್ಬಂಧ ಹೇರಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶ ಹೊರಡಿದ್ದಾರೆ. ದೃಶ್ಯ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮಗಳಿಗೆ ಶಾಸಕರ ಭವನಕ್ಕೆ ಹೋಗದಂತೆ ಹಾಗೂ ಚಿತ್ರೀಕರಣ ಮಾಡದಂತೆ ಸ್ಪೀಕರ್ ಅಧಿಕೃತ ಆದೇಶ ಹೊರಡಿಸಿದ್ದಾರೆ.
ವಿಧಾನಮಂಡಲ ಕಲಾಪಕ್ಕೆ ಮಾಧ್ಯಮ ಕ್ಯಾಮರಾಗಳಿಗಿಲ್ಲ ಅವಕಾಶ, ಬದಲಾಗದ ಸ್ಪೀಕರ್ ನಿಲುವು
ಶಾಸಕರ ಜೊತೆಗೆ ಮಾತನಾಡಲು ಹಾಗೂ ವಿಡಿಯೋ ಚಿತ್ರೀಕರಣ ಮಾಡಲು ಶಾಸಕರ ಭವನಕ್ಕೆ ಈ ಹಿಂದೆ ಮುಕ್ತ ಪ್ರವೇಶವಿತ್ತು. ಆದರೆ ಈಗ ಶಾಸಕರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣವನ್ನು ನೀಡಿ ಸ್ಪೀಕರ್ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ಒಂದು ವೇಳೆ ಶಾಸಕರು ಸಂದರ್ಶನಕ್ಕೆ ಒಪ್ಪಿಗೆ ಕೊಟ್ಟರೆ ಶಾಸಕರ ಭವನದ ಹೊರಭಾಗದಲ್ಲಿ ಅವಕಾಶವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸದನದ ಕಲಾಪಗಳ ಚಿತ್ರೀಕರಣಕ್ಕೆ ಅವಕಾಶ ನಿರಾಕರಿಸಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ರಮ ವಿರೋಧಕ್ಕೆ ಕಾರಣವಾಗಿತ್ತು. ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಕರ್ತರು ಸ್ಪೀಕರ್ ಹಾಗೂ ಸರ್ಕಾರದ ನಡೆಯನ್ನು ವಿರೋಧಿಸಿದ್ದರು. ಇದರ ಬೆನ್ನಲ್ಲೇ ಶಾಸಕರ ಭವನದ ಆವರಣದಿಂದಲೂ ಮಾಧ್ಯಮದವರನ್ನು ದೂರವಿಡಲಾಗಿದೆ.
ವಿಧಾನಮಂಡಲ ಕಲಾಪಕ್ಕೆ ಮಾಧ್ಯಮ ಕ್ಯಾಮರಾಗಳಿಗಿಲ್ಲ ಅವಕಾಶ, ಬದಲಾಗದ ಸ್ಪೀಕರ್ ನಿಲುವು
ಶಾಸಕರ ಜೊತೆಗೆ ಮಾತನಾಡಲು ಹಾಗೂ ವಿಡಿಯೋ ಚಿತ್ರೀಕರಣ ಮಾಡಲು ಶಾಸಕರ ಭವನಕ್ಕೆ ಈ ಹಿಂದೆ ಮುಕ್ತ ಪ್ರವೇಶವಿತ್ತು. ಆದರೆ ಈಗ ಶಾಸಕರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣವನ್ನು ನೀಡಿ ಸ್ಪೀಕರ್ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.
ಸದನದ ಕಲಾಪಗಳ ಚಿತ್ರೀಕರಣಕ್ಕೆ ಅವಕಾಶ ನಿರಾಕರಿಸಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ರಮ ವಿರೋಧಕ್ಕೆ ಕಾರಣವಾಗಿತ್ತು. ಮಾಧ್ಯಮ ಸಂಸ್ಥೆಗಳು ಹಾಗೂ ಪತ್ರಕರ್ತರು ಸ್ಪೀಕರ್ ಹಾಗೂ ಸರ್ಕಾರದ ನಡೆಯನ್ನು ವಿರೋಧಿಸಿದ್ದರು. ಇದರ ಬೆನ್ನಲ್ಲೇ ಶಾಸಕರ ಭವನದ ಆವರಣದಿಂದಲೂ ಮಾಧ್ಯಮದವರನ್ನು ದೂರವಿಡಲಾಗಿದೆ.