ಆ್ಯಪ್ನಗರ

ಮಂಡ್ಯ ಲೇಡಿಸ್‌ಗೆ ವಿಶೇಷ ಬೋಗಿ

ದಿಲ್ಲಿಯಲ್ಲಿ ಗುರುವಾರ ರೈಲ್ವೆ ಸಚಿವರಾದ ಪಿಯೂಷ್‌ ಗೋಯಲ್‌ ಹಾಗೂ ಸುರೇಶ್‌ ಅಂಗಡಿ ಅವರನ್ನು ಭೇಟಿ ಮಾಡಿದ ಅವರು, ಈ ಕುರಿತು ವಿಜಯ ಕರ್ನಾಟಕದಲ್ಲಿ ಪ್ರಸ್ತಾಪವಾಗಿರುವ ಅಂಕಣ ಬರಹದ ಕಾಳಜಿಯನ್ನೂ ಪ್ರಸ್ತಾಪಿಸಿದರು.

Vijaya Karnataka 28 Jun 2019, 8:34 am
ಹೊಸದಿಲ್ಲಿ: ಮಂಡ್ಯದಿಂದ ಉದ್ಯೋಗಕ್ಕಾಗಿ ನಿತ್ಯವೂ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುವ ಮಹಿಳೆಯರಿಗಾಗಿ ವಿಶೇಷ ಬೋಗಿಗಳನ್ನು ಕಲ್ಪಿಸುವಂತೆ ಮಂಡ್ಯ ಸಂಸದೆ ಸುಮಲತಾ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
Vijaya Karnataka Web sumalatha


ದಿಲ್ಲಿಯಲ್ಲಿ ಗುರುವಾರ ರೈಲ್ವೆ ಸಚಿವರಾದ ಪಿಯೂಷ್‌ ಗೋಯಲ್‌ ಹಾಗೂ ಸುರೇಶ್‌ ಅಂಗಡಿ ಅವರನ್ನು ಭೇಟಿ ಮಾಡಿದ ಅವರು, ಈ ಕುರಿತು ವಿಜಯ ಕರ್ನಾಟಕದಲ್ಲಿ ಪ್ರಸ್ತಾಪವಾಗಿರುವ ಅಂಕಣ ಬರಹದ ಕಾಳಜಿಯನ್ನೂ ಪ್ರಸ್ತಾಪಿಸಿದರು.

ವಿಕ ಅಂಕಣಗಾರ್ತಿ ಪಿ. ಕುಸುಮಾ ಆಯರಹಳ್ಳಿ ಅವರು 'ಲೇಡಿಸ್‌ ಬೋಗಿಯ ಹೆಣ್ಮಕ್ಕಳ ಬವಣೆ ಅರಿಯಿರಿ ಸುಮಕ್ಕ' ಶೀರ್ಷಿಕೆಯಡಿ ಮಂಡ್ಯದ ಹೆಣ್ಣು ಮಕ್ಕಳ ಸಂಕಟವನ್ನು ತೆರೆದಿಟ್ಟಿದ್ದರು. ಪಾಂಡವಪುರದಿಂದ ಚನ್ನಪಟ್ಟಣದವರಗೆ ವಿವಿಧ ಊರುಗಳಲ್ಲಿ ರೈಲು ಹತ್ತುವ ಸಾವಿರಾರು ಹೆಣ್ಣು ಮಕ್ಕಳಿಗೆ ರೈಲಿನಲ್ಲಿ ಭದ್ರತೆ ಹಾಗೂ ಉದ್ಯೋಗ ಭದ್ರತೆ ಬೇಕಿದೆ ಎಂಬುದರ ಬಗ್ಗೆ ಗಮನಸೆಳೆದಿದ್ದರು. ಈ ಬರಹ ಸಾಮಾಜಿಕ ಜಾಲತಾಣದಲ್ಲೂ ವೈರಲ್‌ ಆಗಿತ್ತು.

''ದಿಲ್ಲಿಯಲ್ಲಿ ರೈಲ್ವೆ ಸಚಿವರನ್ನು ಭೇಟಿ ಮಾಡಿ, ಮೈಸೂರು-ಬೆಂಗಳೂರು ನಡುವಿನ ರೈಲುಗಳಿಗೆ ಹೆಚ್ಚುವರಿ ವಿಶೇಷ ಬೋಗಿಗಳ ಸೌಕರ್ಯ ಕಲ್ಪಿಸುವುದರ ಜತೆಗೆ, ಪೊಲೀಸ್‌ ಭದ್ರತೆ ನೀಡಬೇಕು. ಮುಂಬಯಿ ಮಾದರಿಯಲ್ಲಿ ವಿಶೇಷ ಮಹಿಳಾ ರೈಲನ್ನು ನೀಡಬೇಕು ಎಂದು ಕೇಳಿಕೊಂಡಿರುವೆ. ತಮ್ಮ ಬೇಡಿಕೆಗೆ ಸೂಕ್ತ ಭರವಸೆ ಸಿಕ್ಕಿದೆ,'' ಎಂದು ಸುಮಲತಾ ತಿಳಿಸಿದ್ದಾರೆ. ಸಚಿವರನ್ನು ಭೇಟಿ ಮಾಡಿದ ಸಂಗತಿಯನ್ನು ಫೋಟೊ ಸಹಿತ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ